Posts

Showing posts from July, 2020

ಆಲೆಮನೆ

ಮನೆಯ ಅಂಗಳ ದಾಟಿ, ಗದ್ದೆಯ ಬಯಲಿಗೆ ಇಳಿದು ಎಡಕ್ಕೆ ತಿರುಗಿ ಅದೇ ಕೋಗಿನಲ್ಲಿ ಒಂದರ್ಧ ಮೈಲು ನಡೆದರೆ ಕೋಗಿನ ಅಂಚಿನಲ್ಲಿ ಹರಿಯುತ್ತಿದ್ದ ಆ ದೊಡ್ಡ ಹಳ್ಳ ಸಿಗುತಿತ್ತು. ಅಲ್ಲಿ ಮಾತ್ರ ಇನ್ನೊಂದು ಹಳ್ಳವೂ ಬಂದು ಸೇರಿ ಇದು ಇನ್ನಷ್ಟು ಕೊಬ್ಬುತಿತ್ತು. ಬೇಸಿಗೆಯಲ್ಲಿ ಆರಾಮಾಗಿ ಇಳಿದು ದಾಟಬಹುದಾದರೂ ಮಳೆಗಾಲದಲ್ಲಿ ಅದರ ಆರ್ಭಟ ಜೋರಾಗಿರುತ್ತಿದ್ದರಿಂದ ಅಡಿಕೆಯ ಮರದ ಸಂಕವನ್ನು ಹಾಕಲಾಗಿತ್ತು. ತುಸು ಎತ್ತರವೇ ಅನ್ನಿಸಬಹುದಾದ ಆ ಸಂಕಕ್ಕೆ ಅಲ್ಲಲ್ಲಿ ಕೋಲು ಕಟ್ಟಿ ಹಿಡಿದು ದಾಟಲು ಅನುಕೂಲ ಮಾಡಿದ್ದರು. ಆ ಸಂಕ ದಾಟಿದರೆ ಕಬ್ಬಿನಕೇರಿ. ಇದ್ದಿದ್ದು ಒಂದೇ ಮನೆ ನರಸಿಂಹ ಶಾಸ್ತ್ರಿಗಳದ್ದು. ಮಳೆಗಾಲದಲ್ಲಿ ಅಲುಗಾಡುವ ಸಂಕ, ಕೆಳಗೆ ಭೋರ್ಗೆರೆದು ಕೆಂಪಾಗಿ ಹರಿಯುವ ಹಳ್ಳ ಭಯ ಹುಟ್ಟಿಸುತ್ತಿದ್ದರಿಂದ ಹೋಗುವುದು ಕಡಿಮೆಯಾಗಿದ್ದರೂ ಸಂಕ್ರಾಂತಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೆವು. ಸಂಕ್ರಾಂತಿ ಮುಗಿಯುತ್ತಿದ್ದ ಹಾಗೆ ಅಲ್ಲಿ ಆಲೆಮನೆ ಶುರುವಾಗುತ್ತಿತ್ತು. ಅವರು ಕಬ್ಬು ಬೆಳೆಯುತ್ತಿದ್ದರಿಂದ ಕಬ್ಬಿನಕೇರಿ ಅಂತಾರೆ ಎಂದು ನಾವೇ ಹೆಸರಿಗೊಂದು ಕಾರಣ ಕೊಟ್ಟುಕೊಳ್ಳುತ್ತಿದ್ದೆವು. ಕಣದಲ್ಲಿ ಕೋಣವನ್ನು ಕಟ್ಟಿ ಗಾಣ ತಿರುಗಿಸುವವರು, ತುಸು ದೂರದಲ್ಲಿ ಉರಿಯುವ ದೊಡ್ಡ ಒಲೆಯಾ... ಬೆಂಕಿಯ ಗೋಳವಾ ... ಅದರ ಮೇಲೊಂದು ದೊಡ್ಡದಾದ  ಬಾಣಲೆ.. ಅದರಲ್ಲಿ ಕುದಿಯುವ ಬೆಲ್ಲ.. ಸುತ್ತಲೂ ನೋಡುವ ಜನ, ಮಾತು ಕತೆ, ಕುತೂಹಲದಿಂದ ಮುಂದಕ್ಕೆ ನುಗ್ಗುವ ನಮ್ಮಂತ ಕಪಿ ಸೈ
ಬೆಳ್ಬೆಳಿಗ್ಗೆ  ಅಥವಾ ಸಂಜೆಯ ಹೊತ್ತಿಗೆ ಅಮ್ಮಾ ಎಂಬ ಕರೆ ಹಿತ್ತಿಲಬಾಗಿಲ ಕಡೆಯಿಂದಲೂ ಇಲ್ಲಾ ಅಂಗಳದಿಂದಲೋ ಕೇಳಿತು ಅಂದರೆ ಅದು ಉಳುಕು ತೆಗಿಸಿಕೊಳ್ಳಲು ಬಂದವರೇ ಎಂಬುದು ಹೇಳದೆಯೇ ಗೊತ್ತಾಗಿ ಬಿಡುತ್ತಿತ್ತು. ಹೇಗೆ ಉಳುಕುತಿತ್ತು ಎನ್ನುವುದು ಹೇಳುವುದು ಕಷ್ಟವಾದರೂ ಉಳುಕಿದಷ್ಟು ಸುಲಭವಲ್ಲ ಆ ನೋವು ಅನುಭವಿಸುವುದು. ಎಲ್ಲಾ ನೋವು ಒಂದೇ ಕಣೆ ನಮಗೆ ಯಾವುದು ಬಂದಿರುತ್ತೋ ಆಗ ಅದೇ ದೊಡ್ಡದು ಅನಿಸುತ್ತೆ ಅಷ್ಟೇ ಅನ್ನುತ್ತಿದ್ದಳು ಅವಳು. ಅದೇನೇ ಇರಲಿ ಈ ಉಳುಕು ತೆಗೆಯುವುದು ಅವಳು ಹೇಗೆ ಕಲಿತಿದ್ದಳೋ ಗೊತ್ತಿಲ್ಲವಾದರೂ ಎಂತಹುದೇ  ಉಳುಕಿನ ನೋವಾದರೂ ಅವಳ ಕೈಯಲ್ಲಿ ನೀವಿಸಿಕೊಂಡರೆ ಹೋಗುತ್ತಿದ್ದದ್ದು ಮಾತ್ರ ಹೌದು. ಹಾಗಾಗಿ ಊರಲ್ಲಿ ಯಾರೇ ಕೈ ಕಾಲು ಉಳುಕಿಸಿಕೊಂಡರೆ ಸೀದಾ ಅವಳ ಬಳಿ ಬರುತ್ತಿದ್ದರು. ಕೈಯಲ್ಲೊಂದು ಎಣ್ಣೆಯ ಬಾಟಲಿ. ಅವಳು ಜಗುಲಿಯಲ್ಲೋ, ಹಿತ್ತಿಲಿನ ಕಡುಮಾಡಿನಲ್ಲೋ ಕುಳಿತು ಹಾಗೆ ಬಂದವರಿಗೆ ಎಣ್ಣೆ ಹಚ್ಚಿ ನೀವುತ್ತಿದ್ದಳು. ಹಾಗೆ ನೀವಲು ಶುರುಮಾಡಿದ ಕೆಲವು ಕ್ಷಣಗಳು ಅವರು ನಿಟ್ಟುಸಿರು ಬಿಡುತ್ತಲೋ , ಚೀರುತ್ತಲೋ, ಕಣ್ಣೀರು ಹರಿಸುತ್ತಲೋ ಕುಳಿತಿರುವುದು ನೋಡಿ ಸಂಕಟವಾದರೂ ನೋವಿದ್ದಾಗ ಯಾಕೆ ನೀವಿಸಿಕೊಳ್ಳಲು ಬರಬೇಕು ಎನ್ನಿಸಿ ಕೋಪವೂ ಬರುತಿತ್ತು. ಕೊಂಚ ಹೊತ್ತಿಗೆ ಅವರ ಮುಖದಲ್ಲಿ ಏನೋ ಅನಿವರ್ಚನೀಯ ಆನಂದ ಕಾಣಿಸಿ ಗೊಂದಲ, ಹೊರಡುವ ಹೊತ್ತಿಗೆ ಅವರ ಮುಖದಲ್ಲಿ ಕಾಣಿಸುವ  ಕೊಂಚ ನಿರಾಳತೆ. ದಿನವೆರೆಡು ಕಳೆಯುವ ಹೊತ್ತಿಗೆ ಅಮ್