Posts

Showing posts from January, 2019

ಉರಿ ಸರ್ಜಿಕಲ್ ಸ್ಟ್ರೈಕ್ (ಹೊಸದಿಗಂತ)

ಸುತ್ತ ದಟ್ಟ ಕಾಡು.. ಮಗುವೊಂದು ಹಾಳೆಯ ಮೇಲೆ ಗೀಚಿಬಿಟ್ಟಂತೆ ಹಾದುಹೋಗುವ ರಸ್ತೆ. ಭಯ ಹುಟ್ಟಿಸುವ ನಿಶಃಬ್ಧ... ಆ ನಿಶಃಬ್ಧವನ್ನು ಭೇಧಿಸುವಂತೆ, ಹುಟ್ಟಬಹುದಾದ ತಲ್ಲಣವನ್ನೂ ಅಳಿಸುವಂತೆ ಹೋಗುವ ಮಿಲಿಟರಿ ಟ್ರಕ್, ಅದರೊಳಗೆ ಹಾಡುವ, ನಗುವ ಸೈನಿಕರು. ತನ್ನ ಪಾಡಿಗೆ ತಾನು ತಣ್ಣಗೆ ಹೋಗುವಾಗ ಧಡ್ ಎನ್ನುವ ಶಬ್ದ.. ಪರದೆಯ ಎದುರು ಕುಳಿತಿದ್ದರೂ ಪರದೆಯ ಒಳಗೆ ಹೋಗಿ ನಡೆಯುತ್ತಿರುವ ಘಟನೆಯ ಒಂದು ಭಾಗವಾಗಿ ಉಸಿರು ಬಿಗಿಹಿಡಿದು ನೋಡುವವರ ಕೈ ಗೊತ್ತಿಲ್ಲದೇ ಕುರ್ಚಿಯ ಹಿಡಿಯನ್ನು ಬಿಗಿಯಾಗಿ ಹಿಡಿದು ಆತಂಕದಿಂದ ನೋಡುವಾಗ ಹೃದಯದ ಬಡಿತ ಕಿವಿಗೆ ಕೇಳುವಂತಾಗಿ ಅಲ್ಲೊಂದು ತಲ್ಲಣ. ಅಂತಹ ಪರಿಸ್ಥಿತಿಯಲ್ಲಿ ತಕ್ಷಣಕ್ಕೆ ಮಾಡುವುದು ಏನು? ಎಲ್ಲಾ ಶಕ್ತಿಯನ್ನು ಒಗ್ಗೂಡಿಸಿ ಆಪತ್ತಿಗೆ ಬೆನ್ನಾಗಿ ಪ್ರಾಣ ಉಳಿಸಿಕೊಳ್ಳುವುದಕ್ಕಾಗಿ ಓಡುವುದು. ಅದು ಮನುಷ್ಯ ಮಾತ್ರವಲ್ಲ ಎಲ್ಲಾ ಬದುಕಿರುವ ಜೀವಿಯೂ ಮಾಡುವ ಮೊದಲ ಕೆಲಸ. ಜೀವರಕ್ಷಿಸಿಕೊಳ್ಳಲು ಪ್ರಯತ್ನಿಸುವುದು. ಅಲ್ಲೂ ಹಾಗೆಯೇ ಆಯಿತಾ ಎಂದರೆ ಉಹೂ ಅಂತ ದುರ್ಭರ ಕ್ಷಣದಲ್ಲೂ ಇಳಿದು ಬಾಗಿಲು ಹಾಕಿ ಸುತ್ತೆಲ್ಲಾ ಹದ್ದಿನ ಕಣ್ಣುಗಳಿಂದ ನೋಡಿ ಭೀಕರತೆಯನ್ನು ಸಾವು ಪಕ್ಕದಲ್ಲೇ ಹೊಂಚು ಹಾಕುವುದನ್ನೂ ಕಂಡೂ ಶಸ್ತ್ರವನ್ನು ಕೈಯಲ್ಲಿ ಹಿಡಿದು ಆ ಮೃತ್ಯುವಿಗೆ ಎದೆಯೊಡ್ಡಿ ಮುಂದಕ್ಕೆ ನಡೆಯುವುದು ಸೈನಿಕ. ಯಾವುದೇ ಕ್ಷಣದಲ್ಲೂ ಮೃತ್ಯು ಅಪ್ಪಬಹುದು ಎಂದು ಗೊತ್ತಿದ್ದರೂ ತನ್ನ ಕುಟುಂಬ, ವೈಯುಕ್ತಿಕ ಬದುಕು, ಕನಸು,ಯಾವು

ನ್ಯಾಸ...

"ಅಹಂಕಾರ ಮಮಕಾರ ಕಳೆದುಕೊಳ್ಳದೆ ಸತ್ಯ ಗೊತ್ತಾಗೊಲ್ಲ"..... ಡೆಲ್ಲಿಯಿಂದ ವಾಪಾಸ್ ಬೆಂಗಳೂರಿಗೆ ಬರಲು ಏರ್ಪೋರ್ಟ್ ಕಡೆಗೆ ಹೊರಟಿದ್ದೆ. ಸಿಗ್ನಲ್ ಬಳಿ ಕಾರ್ ನಿಂತಾಗ ಸಹಜವಾಗಿಯೇ ದೃಷ್ಟಿ ಅತ್ತಿತ್ತ ಹೊರಳಿ ಒಂದು ಕಡೆ ಸ್ಥಿರವಾಯಿತು, ಮುಖದಲ್ಲಿ ಕೊಂಚ ಗೊಂದಲವೂ ಅದನ್ನೇ ಗಮನಿಸಿದ ಅಣ್ಣ ಅವರು ಇಸ್ಕಾನ್ ಬ್ರಹ್ಮಚಾರಿಗಳು, ಹೀಗೆ ಯಾವುದಾದರೂ ರಸ್ತೆಯ ಬದಿಯಲ್ಲಿ, ಸಿಗ್ನಲ್ ಸಮೀಪದಲ್ಲಿ ಪುಸ್ತಕ ಹಾಗೂ ಇತರ ಪ್ರಾಡಕ್ಟ್ ಮಾರ್ತಾರೆ. ಬೆಳಿಗ್ಗೆ ಅವರನ್ನು ಒಂದು ವಾಹನ ಬಂದು ಬಿಟ್ಟು ಹೋಗುತ್ತೆ ಸಂಜೆ ಬಂದು ಕರೆದುಕೊಂಡು ಹೋಗುತ್ತೆ ಎಂದ. ಸ್ವರದಲ್ಲಿನ ನಿರ್ವಿಕಾರಕ್ಕೆ ಬೆಚ್ಚಿ ಮುಖ ನೋಡಿದರೆ ಅದೂ ನಿರ್ಲಿಪ್ತವಾಗಿತ್ತು. ನಾಲ್ಕು ವರ್ಣಗಳು ಇದ್ದ ಹಾಗೆ ನಾಲ್ಕು ಆಶ್ರಮಗಳು ಇದ್ದ ಮಣ್ಣಿದು. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಹಾಗೂ ಕೊನೆಯಲ್ಲಿ ಸನ್ಯಾಸ. ಅಧ್ಯಾತ್ಮ ಉಸಿರಾಗಿದ್ದ, ತನ್ನನ್ನು ತಾನು ಅರಿಯುವುದೇ ಗುರಿಯಾಗಿದ್ದ ಈ ನೆಲದಲ್ಲಿ ಬದುಕು ಹಾಗೂ ಅಧ್ಯಾತ್ಮ ಎಂದೂ ಬೇರೆ ಬೇರೆ ಆಗಿರಲೇ ಇಲ್ಲ. ಸನ್ಯಾಸ ಅನ್ನೋದು ಇಲ್ಲಿ ಹುಟ್ಟಿದ ಪ್ರತಿಯೊಬ್ಬರನ್ನೂ ಒಂದಾದರೂ ಒಂದು ಕ್ಷಣದಲ್ಲಿ ಕೈ ಬೀಸಿ ಕರೆದಿರುತ್ತದೆ. ವೈರಾಗ್ಯ ಕಾಡಿರುತ್ತದೆ,  ಆಸೆ ಬೆನ್ನು ಬಿದ್ದಿರುತ್ತದೆ. ಇದು ಪ್ರತಿಯೊಬ್ಬರ ಕನಸು. ಎಲ್ಲೋ ಕೆಲವರು ನನಸಾಗಿಸಿಕೊಂಡರೆ ಇನ್ನು ಕೆಲವರು ಅದರೊಳಗೆ ಕಾಲಿಟ್ಟು ಸುಟ್ಟುಕೊಳ್ಳುತ್ತಾರೆ, ಬೆಚ್ಚಿ ಹೊರಬೀಳುತ್ತಾರೆ. ಪತಂಗಕ್

ಕೋಶಿಶ್ ಕವಿತೆಗಳು

ಬೆಳಿಗ್ಗೆ ಎದ್ದ ಕೂಡಲೇ ಹಬೆಯಾಡುವ ಬಿಸಿ ಬಿಸಿ ಕಾಫಿ ಕುಡಿದಾಗ ಇಡೀ ದಿನಕ್ಕೆ ಚೈತನ್ಯ ಸಿಕ್ಕ ಹಾಗೆ. ಕಾಫಿ ಕೇವಲ ಪೇಯವಾ.. ಅದು ಒಬ್ಬೊಬ್ಬರಿಗೆ ಒಂದೊಂದು ಭಾವ. ಅಪ್ಪಟ ಮಲೆನಾಡಿಗರಿಗೆ ಅದು ಅಮೃತ.  ಅವರ ಬದುಕು, ಭಾವ, ಪ್ರತಿಯೊಂದು ಅದರೊಂದಿಗೆ ಮಿಳಿತ. ಒಂದು ದಿನ ಹನಿ ನೀರಲ್ಲಿದೆ ಬದುಕಿದರೂ ಕಾಫಿಯಿಲ್ಲದೆ ಇರಲಾರರು. ಅಂತ ಅನುಬಂಧ ಅದರ ಜೊತೆಗೆ. ಹಾಗಾಗಿ ಕಾಫಿ ಮಾಡುವುದೂ ಒಂದು ಕಲೆ. ಬದುಕಿನ ಹಾಗೆ ಅದು ಸುಲಭಕ್ಕೆ ಒಲಿಯದ, ಇಷ್ಟವಾಗದ ವಿಷಯ. ಹದವಾದ ಕಾಫಿ ಮಾಡುವುದು ಒಂದು ಕಲೆ ಇಲ್ಲವಾದರೆ ಮಾಯದ ಕಲೆ. ಕಾಫಿ ನೀರು, ಕಾಫಿಪುಡಿ, ಹಾಲು, ಸಕ್ಕರೆ ಇವುಗಳ ಹದವಾದ ಮಿಶ್ರಣ. ಬದುಕು ಭಾವಗಳ ಮಿಶ್ರಣ ಹೇಗೆ ಇದೂ ಹಾಗೆ. ಅಲ್ಲಿ ಕಹಿಯಾದ ಕಾಫಿಪುಡಿ, ಹಾಗೂ ಸಿಹಿಯಾದ ಸಕ್ಕರೆ ಎರಡೂ ಬೇಕು. ಅವೆರೆಡು ಸೇರದ ಹೊರತು ಕಾಫಿ ಆಗಲಾರದು. ಸುಖ, ದುಃಖ ಎರಡರ ಮಿಳಿತದ ಬದುಕು ಹೇಗೆ ಅರ್ಥಪೂರ್ಣವೋ ಹಾಗೇ. ಇಂತದೊಂದು ಅರ್ಥಪೂರ್ಣ ಕವನಗಳ ಗೊಂಚಲು ನಲ್ಲತಂಬಿ ಸರ್ ಅವರ ಕೋಶಿಸ್ ಕವಿತೆಗಳು. ಇದು ಕವಿತೆಯಾ ಗೊತ್ತಿಲ್ಲ. ಕವಿತೆಯೆಂದರೆ ಕಬ್ಬಿಣದ ಕಡಲೆ ಎಂದುಕೊಳ್ಳುವ ನನ್ನಂತವಳನ್ನು ಕವಿತೆಯ ಕಡೆಗೆ ಕರೆದೊಯ್ಯುವ ಹಾಗಿರುವುದಂತೂ ಹೌದು. ಪ್ರತಿಯೊಬ್ಬರ ಬದುಕಿನಲ್ಲೂ ಒಬ್ಬರು ಇರ್ತಾರೆ. ಅವರು ಗೆಳೆಯನೋ, ಆತ್ಮಬಂಧುವೋ, ಅಪ್ತರೋ ಯಾರೋ ಆಗಿರಬಹುದು. ಯಾವುದೋ ಸಂಕಷ್ಟದ ಸಮಯದಲ್ಲೋ, ನೋವಿನಲ್ಲೋ, ಗೊಂದಲಲ್ಲೋ ತಮ್ಮ ಮಾತಿನಿಂದ ದಾರಿ ತೋರುವವರು. ಇಲ್ಲೂ ವಿನ್ಸೆಂಟ್

ಕೃಷ್ಣಾವತಾರದ ಕೊನೆಯ ದಿನಗಳು

ಒಂದು ಕಾಲದಲ್ಲಿ ಕುಡಿತವೆಂದರೆ ಸಮಾಜದಲ್ಲಿ ಅಗೌರವ ತರುವಂತಹ ವಿಷಯವಾಗಿತ್ತು. ಕುಡಿಯುವವರನ್ನು ಕಂಡರೆ ಅವರಿಂದ ಮಾರು ದೂರ ಇರುವಂತೆ ಮಕ್ಕಳಿಗೆ ಹೇಳುತ್ತಿದ್ದರು. ರಾತ್ರಿ ಕುಡಿದು ತೂರಾಡುತ್ತಾ ಬರುವವರ ಬಗೆಗೆ ಒಂದು ಅನಾದರಣೆಯ ನೋಟದ ಜೊತೆಗೆ ಅಪಹಾಸ್ಯದ ನಗು ಜೊತೆ ಸೇರುತ್ತಿತ್ತು. ಎಲ್ಲಿಯಾದರೂ ರಾತ್ರಿ ಯಕ್ಷಗಾನವೋ, ಗಣಪತಿ ಹಬ್ಬದ ಕಾರ್ಯಕ್ರಮವೋ ಆದರೆ ಅವರಿಂದ ಒಂದು ಅಂತರ ಕಾಯ್ದುಕೊಂಡು ಹೋಗುವುದು ಮಾಡುತ್ತಿದ್ದರು. ಕಾಲ ಬದಲಾದಂತೆ, ಅಭಿವೃದ್ಧಿಯ ಮಾನದಂಡ ಬೇರೆಯಾದಂತೆ, ಹೆಗ್ಗಳಿಕೆಯ, ಪ್ರತಿಷ್ಠೆಯ ಕುರುಹೂ ಬದಲಾಗಿ ಈಗ ಕುಡುಕ ಅನ್ನುವುದು ಸೋಶಿಯಲ್ ಡ್ರಿಂಕರ್ ಎನ್ನುವ ಹೊಸ ಹಣೆಪಟ್ಟಿ ಹೊತ್ ತು ಅದರ ಭಾಷ್ಯವೇ ಬದಲಾಗಿದೆ. ಪಾರ್ಟಿ ಗಳಲ್ಲಿ ಕುಡಿಯದೆ ಇರುವವರು ಹಳ್ಳಿಯ ಗುಗ್ಗು ಎಂದೋ ಗಾಂಧೀ ಎಂದೋ ಅಪಹಾಸ್ಯಕ್ಕೆ ಈಡಾಗುವ ಪರಿಸ್ಥಿತಿ ಬಂದಿದೆ. ಒಂದೇ ವಿಷಯ ಎರಡು ನೋಟ... ಕಾಲಚಕ್ರದ ಬದಲಾವಣೆಯೋ ಮಾನಸಿಕ, ನೈತಿಕ ಅಧಃಪತನವೋ ಎಂದು ಗೊಂದಲ ಸದಾ ಕಾಡುತ್ತದೆ... ಬದಲಾಗಿರುವ ಕಾಲಘಟ್ಟದಲ್ಲಿ ಯುವಜನತೆ ತಮ್ಮ ಸ್ಟ್ರೆಸ್ ಕಳೆದುಕೊಳ್ಳಲು ಕೆಮಿಕಲ್ ಮೊರೆ ಹೋಗಿದ್ದಾರೆ ಎನ್ನುವುದನ್ನ ಸದ್ಗುರುವಿನ ಮಾತಿನಲ್ಲಿ ಕೇಳುವಾಗ, ಕುಡಿತದ ಶೇಕಡವಾರು ಎಷ್ಟು ಹೆಚ್ಚಿದೆ ಎಂದು ಅವರು ಅಂಕಿ ಅಂಶಗಳಲ್ಲಿ ಹೇಳುವಾಗ ಅದರ ಪರಿಣಾಮ ಊಹಿಸುವಾಗ ಭಯ, ಸಂಕಟ ಎರಡೂ ಕಾಡಿ ಮತ್ತೆ ಅದೇ ಗೊಂದಲ ಕಾಡಿತ್ತು. ಒಂದು ನಾಣ್ಯಕ್ಕೆ ಎರಡು ಮುಖ ಇದ್ದಂತೆ ಒಂದು ಸಮಸ್ಯ

ಚಪ್ಪರ. (ಹಸಿರುವಾಸಿ)

ಮನೆಗೊಂದು ಅಜ್ಜಿ ಅಂಗಳಕ್ಕೊಂದು ಚಪ್ಪರ ಅನ್ನೋದು ಹಿಂದಿನ ವಾಡಿಕೆಯ ಮಾತು. ಮನೆ ಎಷ್ಟು ಚಿಕ್ಕದಾದರೂ ಅದರ ಎದುರಿಗೊಂದು ಅಂಗಳ ಹಾಗೂ ಅಂಗಳಕ್ಕೊಂದು ಚಪ್ಪರ ಇರದೇ ಇರುತ್ತಲೇ ಇರಲಿಲ್ಲ. ನವರಾತ್ರಿ ಮುಗಿಯುತ್ತಿದ್ದ ಹಾಗೆ ಮಳೆಗಾಲವೂ ಮುಗಿಯುತ್ತಿದ್ದರಿಂದ ವಿಜಯದಶಮಿ ಕಳೆಯುತ್ತಿದ್ದ ಹಾಗೆ ಚಪ್ಪರ ಹಾಕುತ್ತಿದ್ದರು. ಅಲ್ಲಿಂದ ಅಡಿಕೆ ಕೊಯ್ಲು ಸಹ ಶುರುವಾಗುವುದರಿಂದ ಅದು ಅನಿವಾರ್ಯವೂ, ಅವಶ್ಯಕವೂ ಆಗಿತ್ತು. ಎರಡು ಸಾಲುಗಳಲ್ಲಿ ನಿಂತು ಮಳೆ ಬಿಸಿಲು ಎನ್ನದೆ ತೊಯ್ದ ಕಲ್ಲು ಕಂಬಗಳಿಗೂ ಆಗ ನೆರಳು ಸಿಗುತಿತ್ತು, ಅಂಗಳದ ಎರಡೂ ಬದಿಯಲ್ಲಿ ಶಿಸ್ತಿನ ಸಿಪಾಯಿಯಂತೆ ಕಲ್ಲುಕಂಬಗಳು ಸದಾ ನಿಂತೇ ಇರುತ್ತವೆ. ಬೇಸಿಗೆಯಲ್ಲಿ ಹೆಗಲ ಮೇಲೆ ಚಪ್ಪರವನ್ನು ಹೊತ್ತ ಅವಕ್ಕೆ ಮಳೆಗಾಲದಲ್ಲಿ ಮಾತ್ರ ವಿರಾಮ ಅಂದುಕೊಂಡರೆ ಉಹೂ ಆಗ ಅವುಗಳ ಬುಡದಲ್ಲಿ ಡೇರೆ ಗಿಡಗಳು ಆಶ್ರಯ ಪಡೆದು ಅವುಗಳಿಗೆ ಅಂಟಿಕೊಂಡು ನಿಂತಿರುತ್ತವೆ. ಒಂದೊಂದು ಕಲ್ಲಿನ ಬುಡದಲ್ಲೂ ಒಂದೊಂದು ಬಣ್ಣದ ಹೂವಿನ ಗಿಡ. ಮಳೆಗಾಲ ಮುಗಿಯುತಿದ್ದ ಹಾಗೆ ಅವುಗಳ ಆಯಸ್ಸೂ ಮುಗಿಯುತ್ತಿದ್ದರಿಂದ ಅದನ್ನೆಲ್ಲ ಅಂಗಳ ಹೆರೆಯುವಾಗ ತೆಗೆದು ಹಾಕಿ ಚಪ್ಪರ ಹಾಕಲಾಗುತ್ತಿತ್ತು. ಹಾಗಾಗಿ ಆ ಕಲ್ಲು ಕಂಬಗಳು ಎಂದೂ ಒಂಟಿ ಎನ್ನುವ ಹಾಗೆಯೇ ಇರಲಿಲ್ಲ. ರಜೆಯಲ್ಲಿ ಕಂಬದ ಆಟ ಆಡಲು ಮಕ್ಕಳು ಉಪಯೋಗಿಸುತ್ತಿದ್ದರಿಂದ ಮಕ್ಕಳ ಮೃದು ಸ್ಪರ್ಶಕ್ಕೆ ಅವೂ ಮೆತ್ತಗಾಗುತ್ತಿದ್ದವೇನೋ.. ಬಿಸಿಲು ಮನೆಯಿಂದ ಹೊರಗೆ ಹೊರಡುತ್ತಿದ್ದಂತೆ ಅಲ

ಸಂಕ್ರಾಂತಿ....

ಅಡಿಕೆ ಕೊಯ್ಲಿನ ಮೈ ಮುರಿಯುವ ಕೆಲಸ, ಹಲ್ಲು ಕಟ ಕಟಿಸುವ ಚಳಿ, ಹಗಲು ಕಡಿಮೆ ರಾತ್ರಿ ಜಾಸ್ತಿ ಆದರೂ ನಿದ್ದೆ ಕಡಿಮೆ ಕೆಲಸ ಜಾಸ್ತಿ ಅನ್ನುವ ಕಾಲ, ಔಷಧಿ ಹೊಡೆದ ಕೊನೆಯ ಬಣ್ಣಕ್ಕೆ ತಿರುಗಿದ ಮುಖ ಮೈ,  ಒಡೆದು ಚೂರು ಚೂರಾಗಿ ಚಳಿಗೆ ಇನ್ನಷ್ಟು ಮುದುರಿ ಉರಿಯುವ ದೇಹ.. ಶರಶಯ್ಯೆಯಲ್ಲಿ ಮಲಗಿದ ಭೀಷ್ಮ ತನ್ನ ಮೋಕ್ಷ ಕಾಲಕ್ಕಾಗಿ ಸಂಕ್ರಾತಿಯನ್ನು ಕಾಯುವ ಹಾಗೆ ನಾವೂ ಈ ಚಳಿಯಿಂದ, ಕೆಲಸದಿಂದ ಮುಕ್ತಿ ಹೊಂದಲು ಉಸಿರು ಬಿಗಿ ಹಿಡಿದು ಸಂಕ್ರಾತಿಯನ್ನೇ ಕಾಯುತ್ತಿದ್ದೆವು. ಸೂರ್ಯ ತನ್ನ ಪಥ ಬದಲಿಸುವ ದಿನವದು. ಅಲ್ಲಿಂದ ಉತ್ತರಾಯಣ ಪುಣ್ಯ ಕಾಲ ಅನ್ನೋದು ಪುರಾತನ ನಂಬಿಕೆ. ಸತ್ತರೆ ಸ್ವರ್ಗಕ್ಕೆ ಹೋಗುತ್ತಿವೋ ಗೊತ್ತಿಲ್ಲದ ವಯಸ್ಸಿನಲ್ಲಿ  ಸಂಕ್ರಾಂತಿ ಬಂದರೆ ಅಲ್ಲಿಂದ ಸೂರ್ಯ ಸ್ವಲ್ಪ ಚುರುಕಾಗಿ ಚಳಿ ಕಡಿಮೆಯಾಗುತ್ತಾ ಹೋಗುತ್ತದೆ ಅನ್ನುವ ವಿಷಯವೇ  ಸ್ವರ್ಗ ಸುಖದ ಅನುಭವ ಕೊಡುತ್ತಿತ್ತು. ಅಲ್ಲಿಂದ ಸ್ವಲ್ಪ ಕಾಲ ಕೆಲಸಗಳ ನಡುವೆಯೂ ಬಿಡುವು ದೊರಕಿ ದೇಹಕ್ಕೂ ವಿಶ್ರಾಂತಿ ಸಿಗುತಿತ್ತು. ಹಾಗಾಗಿ ಈ ಹಬ್ಬದ ತಯಾರಿಯೂ ತುಸು ಜೋರಾಗಿ ಕ್ಯಾಲೆಂಡರ್ ಬದಲಾಯಿಸುವ ಜೊತೆಗೆ ಶುರುವಾಗುತ್ತಿತ್ತು. ಎಳ್ಳು ಬೆಲ್ಲ ಈ ಹಬ್ಬದ ವಿಶೇಷ. ಧನುರ್ಮಾಸದ ತಿಂಗಳಲ್ಲಿ ಕೊರೆಯುವ ಚಳಿಯನ್ನು ಸಹಿಸುವ ಶಕ್ತಿಗಾಗಿ ಹಾಗೂ ದೇಹವನ್ನು ಬೆಚ್ಚಗಿಡುವ ಉದ್ದೇಶದಿಂದ ಸ್ವಲ್ಪ ಖಾರ, ಕಾಳುಮೆಣಸು ಜಾಸ್ತಿಯೇ ಉಪಯೋಗಿಸಿ ದೇಹದ ಉಷ್ಣತೆ ಹೆಚ್ಚುವುದರ ಜೊತೆಗೆ ಕೊಬ್ಬು ಕರಗುತ್ತಿತ್ತು. ಅದ

ಹಂಪಿ (ಹೊಸದಿಗಂತ)

ಕಾಲಿದ್ದರೆ ಹಂಪೆ ಸುತ್ತು ಅನ್ನೋದು ಗಾದೆ ಮಾತು. ಹಂಪೆಯ ವ್ಯಾಪ್ತಿ ಹಾಗಿದೆ. ಸುತ್ತಿದಷ್ಟೂ ಜಾಗವಿದೆ, ನೋಡಿದಷ್ಟೂ ನೋಟವಿದೆ. ವಿಜಯನಗರ ಸಾಮ್ರಾಜ್ಯ ಎಂದರೆ ಮೈ ನವಿರೇಳುತ್ತದೆ. ಅದರಲ್ಲೂ ರಾಜಧಾನಿಯಾದ ಹಂಪೆಯ ವೈಭವ,  ಸಾಂಸ್ಕೃತಿಕ, ಅಧ್ಯಾತ್ಮಿಕ, ಆರ್ಥಿಕ, ರಾಜಕೀಯ, ಶಿಲ್ಪಕಲಾ ಎಲ್ಲಾ ಪ್ರಾಕಾರಗಳಲ್ಲೂ ತುತ್ತತುದಿಯನ್ನು ಮುಟ್ಟಿದ ಇನ್ನೊಂದು ಸಾಮ್ರಾಜ್ಯ ಜಗತ್ತಿನಲ್ಲಿ ಇನ್ನೊಂದು ಇಲ್ಲ. ಹಿಂದೆ ಇರಲಿಲ್ಲ, ಮುಂದೆ ಬರುವುದಿಲ್ಲ ಎನ್ನುವ ನಾಣ್ನುಡಿಗೆ ಮುಕುಟಪ್ರಾಯವಾಗಿ, ಅತ್ಯುತ್ತಮ ಉದಾಹರಣೆಯಾಗಿ ನಿಂತಿದ್ದು ವಿಜಯನಗರ ಸಾಮ್ರಾಜ್ಯ ಅದರ ಕಿರೀಟವೇ ನಮ್ಮ ಹಂಪಿ. ಅದು ಸುವರ್ಣಯುಗ. ನೈಸರ್ಗಿಕವಾಗಿ ದುರ್ಭೇಧ್ಯವಾದ ಜಾಗ. ಒಳಗಿನವರ ಸಹಾಯವಿಲ್ಲದ ಹೊರಗಿನವರಿಗೆ ಕಿಂಚಿತ್ತೂ ಪ್ರವೇಶ ಕೊಡದಂತ ಪ್ರಕೃತಿಯೇ ನಿರ್ಮಿಸಿದ ಪ್ರದೇಶ. ಕಣ್ಣು ಹಾಯಿಸಿದಷ್ಟೂ ದೂರದವರೆಗೆ ಸರಿ ಸುಮಾರು ಮುನ್ನೂರು ಕಿ.ಮಿ ದೂರದವರೆಗೂ ಬೃಹತ್ ಕಲ್ಲು ಬಂಡೆಗಳೇ ಕಾಣಿಸುವ ಎತ್ತ ನೋಡಿದರೂ ಅದನ್ನು ಬಿಟ್ಟು ಬೇರೇನೂ ಕಾಣದ ಜಾಗದಲ್ಲೇ ಇಂತಹದೊಂದು ಸಾಮ್ರಾಜ್ಯ ಕಟ್ಟಿದ್ದು ಅವರ ಸಾಮರ್ಥ್ಯ, ನಮ್ಮ ಹೆಮ್ಮೆ. ಅದೂ ಇಂಥ ದುರ್ಗಮ ಜಾಗದಲ್ಲಿ ಏಕೆ ರಾಜಧಾನಿ ಎಂದರೆ ಬಹುಶಃ ಎರಡು ಕಾರಣಗಳೇನೋ.. ಒಂದು ರಕ್ಷಣೆ ಸುಲಭ , ಇನ್ನೊಂದು ಅಲ್ಲೇ ಹತ್ತಿರದಲ್ಲೇ ಇದ್ದ ವಜ್ರದ ನಿಕ್ಷೇಪ. ಕಲ್ಲಿನಷ್ಟೇ ಗಟ್ಟಿಯಾದ ಸಾಮ್ರಾಜ್ಯ ಕಟ್ಟಿದ ಅಲ್ಲಿಯ ರಾಜರದ್ದು ಅಷ್ಟೇ ಗಟ್ಟಿ ಮನಸ್ಸು ದೃಢ ವ್ಯಕ್ತಿತ್ವ

hampi

ಜಗತ್ತಿನ ಇತಿಹಾಸದಲ್ಲೇ ಸುವರ್ಣಯುಗ ಎಂದು ಕರೆಸಿಕೊಂಡಿದ್ದು ವಿಜಯನಗರ ಸಾಮ್ರಾಜ್ಯ. ರಾಜಕೀಯ, ಆರ್ಥಿಕ, ಸಾಂಸ್ಕೃತಿಕ, ಅಧ್ಯಾತ್ಮಿಕ, ಶಿಲ್ಪಕಲಾ ಎಲ್ಲದರಲ್ಲೂ ವೈಭವದ ತುತ್ತತುದಿಯನ್ನು ಮುಟ್ಟಿದ ಕಾಲವದು.  ರಸ್ತೆಯ ಇಕ್ಕೆಲಗಳಲ್ಲಿ ಮುತ್ತು ರತ್ನಗಳನ್ನು ಮಾರುತ್ತಿದ್ದರು ಎಂದರೆ ಆಗಿನ ವೈಭವ ಹೇಗಿದ್ದೀರಬಹುದು ಎಂದು ಊಹಿಸಿಕೊಳ್ಳಲು ಸಹಾಯ ಮಾಡಬಹದು. ಕೊನೆಯ ಯುದ್ಧದ ನಂತರ ಗೆದ್ದು ಮತ್ತರಾದ ಸುಲ್ತಾನರ ಪಡೆ ವಿಜಯನಗರಕ್ಕೆ ಮುತ್ತಿಗೆ ಹಾಕಿ ಅದನ್ನು ನಾಶ ಪಡಿಸಲು ತೆಗೆದುಕೊಂಡ ಕಾಲ ಬರೋಬ್ಬರಿ ಆರು ತಿಂಗಳು ಎಂದರೆ ಅದರ ವೈಭವ ಹೇಗಿದ್ದಿರಬಹುದು. ಒಂದೇ ಒಂದು ಕುರುಹೂ ಇಲ್ಲದಂತೆ ರಾಜ ಪ್ರಾಕಾರವನ್ನು ಸುಟ್ಟು ಬೂದಿಮಾಡಿ, ಸಂಪತ್ತನ್ನು ಕೊಳ್ಳೆ ಹೊಡೆದು ವಿಗ್ರಹಗಳನ್ನು ನಾಶ ಮಾಡಿ ತಮ್ಮ ಕ್ರೌರ್ಯದ ಪರಮಾವಧಿ ಮೆರೆದರು. ವೈಭವ, ಕ್ರೌರ್ಯ ಎರಡೂ  ಶಿಖರದ ತುತ್ತತುದಿಯೇರಿದ್ದನ್ನ ಅನುಭವಿಸಿದ ಏಕೈಕ ಸಾಮ್ರಾಜ್ಯ ಇದೆ ಏನೋ... ಕೇವಲ ಸುಲ್ತಾನರು ಮಾತ್ರ ಇದನ್ನು ಹಾಳುಗೆಡವಿದ್ದಾ? ಉಹೂ ನಂತರದ ಕಾಲದಲ್ಲಿ ಇತಿಹಾಸದ ಬಗ್ಗೆ ಕಿಂಚಿತ್ತೂ ಗೌರವವಿಲ್ಲದ, ತಿಳಿಯಬೇಕು ಎನ್ನುವ ಆಸಕ್ತಿಯೂ ಇಲ್ಲದ ಮುಂದಿನ ಪೀಳಿಗೆ ಅಳಿದುಳಿದ ಕಟ್ಟಡಗಳನ್ನೇ ಮನೆಯಾಗಿಸಿಕೊಂಡು, ಬಿದ್ದ ಕಲ್ಲುಗಳನ್ನು ಉಪಯೋಗಿಸಿಕೊಂಡು, ಎಲ್ಲಿ ಬೇಕೆಂದರಲ್ಲಿ ಹೇಗೆ ಬೇಕೋ ಹಾಗೆ ಬಳಸಿಕೊಂಡು ಹಾಳುಮಾಡಿದ್ದು ಅದಕ್ಕೂ ಹೆಚ್ಚಿನ ಕ್ರೌರ್ಯ ಅನ್ನಿಸಿದ್ದು ಸುಳ್ಳಲ್ಲ. ನಮ್ಮ ಘನತೆಯ ಕುರುಹಾಗಿ ಉಳ

ಶಿಲೆಗಳಲ್ಲಡಗಿದ ಸತ್ಯ.

ಜಗತ್ತಿನ ಉಳಿದ ಕಡೆ ನಾಗರಿಕತೆ ಇನ್ನೂ ಕಣ್ಣು ಬಿಡದ ಹೊತ್ತಿನಲ್ಲಿ ಭಾರತದಲ್ಲಿ ಅದು ತನ್ನ ತುತ್ತ ತುದಿಯನ್ನು ಮುಟ್ಟಿತ್ತು. ಹಾಗಾಗಿಯೇ ಇದನ್ನು ನಾಗರಿಕತೆಗಳ ತೊಟ್ಟಿಲು ಎಂದು ಕರೆದರು ಎಂದು ಶಾಲೆಯಲ್ಲಿ ಪಾಠ ಮಾಡುವಾಗ ಮೇಷ್ಟ್ರು ಹೇಳಿದ್ದು ಕೇಳಿ ಆಶ್ಚರ್ಯವೇನೂ ಆಗಿರಲಿಲ್ಲ. ಯಾಕೆಂದರೆ ದಶಾವತಾರದ ಕತೆ ಕೇಳುತ್ತಾ, ಹಾಡು ಹೇಳುತ್ತಾ ಬೆಳೆದ ನಮಗೆ ಇದು ಕಲಿಕಾಲ ಕೊನೆಯ ಕಾಲ ಹಾಗಾಗಿ ಅದರಲ್ಲೇನು ವಿಶೇಷ ಎಂದೇ ಅನ್ನಿಸಿತ್ತು. ಯಾವುದೇ ವಿಷಯವನ್ನು ತಿಳಿಯದೆ ಏನು ಬೇಕಾದರೂ ಮಾತಾಡಬಹುದು, ಧಿಕ್ಕರಿಸಬಹುದು. ತಿಳಿಯುವಿಕೆ ಸಮಯ ಶ್ರಮ ಎರಡನ್ನೂ ಬೇಡುತ್ತದೆ. ತಿಳಿದ ಮೇಲೆ ವಿನಯ ಹಾಗೂ ಮೌನ ಆವರಿಸುತ್ತದೆ. ಜಗತ್ತಿಗೆ ಅಧ್ಯಾತ್ಮವನ್ನು ಪರಿಚಯಿಸಿದ ದೇಶ ನಮ್ಮದು. ಅಧ್ಯಾತ್ಮ, ಧರ್ಮ ಬೇರೇನಲ್ಲ ಜೀವನ ಪದ್ದತಿ ಎಂದು ಸಾರಿದ ಮೊಟ್ಟ ಮೊದಲ ದೇಶವೂ ನಮ್ಮದೇ. ಹಾಗಾಗಿಯೇ ಇಲ್ಲಿನ ಅಂತಶಕ್ತಿ ಕುಗ್ಗಿಸುವ ಏಕೈಕ ಮಾರ್ಗವೆಂದರೆ ಇಲ್ಲಿನ ಆ ಪದ್ದತಿಯ ಬದಲಾವಣೆ ಎಂದು ತಿಳಿದು ಅದನ್ನು ಸಮರ್ಥವಾಗಿ ನಿರ್ವಹಿಸಿ ಅಂದು ದೈಹಿಕವಾಗಿ, ಇಂದು ಮಾನಸಿಕವಾಗಿ ನಮ್ಮನ್ನು ಆಳುತ್ತಿರುವುದು ಪಾಶ್ಚ್ಯಾತ್ಯ ದೇಶದವರು. ಇಲ್ಲಿ ನಡೆದ ಪ್ರತಿಯೊಂದು ಘಟನೆಗೂ ಸಮಯವಿದೆ, ಒಂದಕ್ಕೊಂದು ಕೊಂಡಿಯಿದೆ. ಇಲ್ಲಿ ಯಾವುದೂ ಹೊಸದಲ್ಲ, ಯಾವುದೂ ತಕ್ಷಣಕ್ಕೆ ಘಟಿಸಿದ್ದೂ ಅಲ್ಲ ಎಂದು ಅರ್ಥವಾಗುವುದು ಸದ್ಯೋಜಾತ ಭಟ್ಟರ ಶಿಲೆಗಳಲ್ಲಡಗಿದ ಸತ್ಯ ಎಂಬ ಪುಸ್ತಕ ಓದುವಾಗ. ಯಾವುದನ್ನೂ ವೈಭವಿಕರಿ

ಶಬರಿಮಲೆ (ಹೊಸದಿಂಗಂತ)

ಧನುರ್ಮಾಸದ ದಿನಗಳಲ್ಲಿ ಸೂರ್ಯೋದಯಕ್ಕೆ ಮುನ್ನವೇ ದೇವರ ದರ್ಶನ, ಪೂಜೆ ಮಾಡುವುದು ಪುಣ್ಯ ಸಂಪಾದನೆಗೆ ಇರುವ ಅತ್ಯುತ್ತಮ ಮಾರ್ಗ ಎನ್ನುವುದು ಬಹು ಪುರಾತನ ನಂಬಿಕೆ. ಅದಾಗಲೇ ಪ್ರವೇಶಿಸಿರುವ ಚಳಿರಾಯ ತನ್ನ ಪೂರ್ಣ ಶಕ್ತಿ ಸಾಮರ್ಥ್ಯಗಳನ್ನು ಜಗತ್ತಿನ ಮೇಲೆ ಪ್ರಯೋಗಿಸಿರುವ ಕಾಲವದು. ಕೊರೆಯುವ ಚಳಿ ತನ್ನ ಬಾಹುಗಳನ್ನು ಚಾಚಿ ಎಲ್ಲವನ್ನೂ ಅಪ್ಪಿಕೊಂಡು ನಡುಕು ಹುಟ್ಟಿಸುವ ಕಾಲ. ಅಂತ ಕಾಲದಲ್ಲಿ ಬೆಚ್ಚಗೆ ಹೊದ್ದು ಮಲಗುವ ಸಮಯದಲ್ಲಿ ಎದ್ದು ಸ್ನಾನ ಮುಗಿಸಿ ಸಾಧನೆ ಮಾಡುವುದು ಯಾರಿಗೆ ತಾನೇ ಪ್ರಿಯವಾದೀತು.. ಅಂತಹುದೊಂದು ಕಾಲದಲ್ಲಿ ನಿದ್ದೆಯ ಮಾಯದಲ್ಲಿ ಸ್ವಲ್ಪ ಚದುರಿ ಹೋಗಿರುವ ಹೊದಿಕೆಯ ಮರೆಯಿಂದ ನುಗ್ಗುವ ಚಳಿಗಾಳಿಗೆ ಎದ್ದು ಕಂಬಳಿ ಇನ್ನಷ್ಟು ಎಳೆದು ಮುದುರಿ ಮಲಗುವ ವೇಳೆಯಲ್ಲಿ ಕಿವಿಯೊಳಗೆ ತೂರಿ ಕೇಳಿಸುತ್ತಿದ್ದದ್ದು ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನೋ ದನಿ. ಬ್ರಾಹ್ಮಿ ಮಹೂರ್ತದ ಸಮಯದಲ್ಲಿ ಅಂದರೆ ಬೆಳಗಿನ ಜಾವ ನಾಲ್ಕು ಗಂಟೆಗೆಲ್ಲಾ ಎದ್ದು ಆ ನಡುಗುವ ಚಳಿಯಲ್ಲಿ ಕೇವಲ ಕಪ್ಪು ಪಂಚೆ ಉಟ್ಟು ನದಿಯಲ್ಲಿ ಸ್ನಾನ ಮಾಡಿ ಒದ್ದೆ ಬಟ್ಟೆ ಉಟ್ಟು ಬರುತಿದ್ದ ಅವರನ್ನು ಬೆಚ್ಚಗಿಡುತಿದ್ದದ್ದು ಅದೊಂದೇ ಸಾಲು, ನಡೆಸುತಿದ್ದದ್ದು ಅದೊಂದೇ ವಾಕ್ಯ.. ಛಲ ಅರಳಿಸುತಿದ್ದದ್ದು ಅದೊಂದೇ ಮಂತ್ರ.. ದೇಹಕ್ಕೋ ಮನಸ್ಸಿಗೋ ಯಾವುದಾದರೊಂದು ಅಭ್ಯಾಸವನ್ನು ಇಪ್ಪತ್ತೊಂದು ದಿನಗಳ ಕಾಲ ಬಿಡದೆ ಕಲಿಸಿದರೆ ಅದು ಬದುಕಿನ ಭಾಗವಾಗುತ್ತದೆ ಅನ್ನೋದು ವೈಜ್ಞಾನಿಕವಾಗಿ