ಡೆಲ್ಲಿಯಲ್ಲಿ ಆರು ಡಿಗ್ರಿ ಯಾರು ಬರ್ತೀರಿ ಅಂತ ಅಣ್ಣ ಫ್ಯಾಮಿಲಿ ಗ್ರೂಪ್ ಅಲ್ಲಿ ಕೊಟ್ಟಿದ್ದ ಎಕ್ಸೈಟಿಂಗ್ ಆಫರ್ ನೋಡಿ ತಮ್ಮನಿಗೆ ಹೋಗೋಣವೇನೋ ಎಂದು ಕೇಳಿದೆ. ಮೊದ್ಲು ಮನೆಯಿಂದ ಹೊರಗೆ ಬಾ ಆಮೇಲೆ ಡೆಲ್ಲಿ ಕತೆ ಎಂದು ಹಲ್ಲು ಕಿಸಿದ ಎಮೋಜಿ ಹಾಕಿದ. ಥತ್ ಇಲ್ಲಿಗೆ ಬಂದು ಪರಿಸ್ಥಿತಿ ಎಂದು ಒಬ್ಬಳೇ ಗೊಣಗಿಕೊಂಡು ಸುಮ್ಮನಾದೆ. ಅದೇನು ಮನೆ ಮನೆ ಅಂತ ಇಲ್ಲೇ ಇರ್ತಿ ಮಾರಾಯ್ತಿ, ನಿಂಗೆ ಹೊರಗೆ ಹೋಗಬೇಕು, ಆರಾಮಾಗಿ ಇರಬೇಕು, ಓಡಾಡಬೇಕು ಅನ್ನಿಸೋದೇ ಇಲ್ವಾ, ಇನ್ನು ಹೋಗೋ ಹೊತ್ತಿಗೆ ಮನೆ ಹೊತ್ತಿಕೊಂಡು ಹೋಗುವ ಹಾಗಿದ್ರೆ ಅದೇನು ಮಾಡ್ತಿದ್ಯೋ ನನ್ನ ಕೈಯಲ್ಲಿ ಅಂತೂ ಹೀಗೆ ಇರೋಕೆ ಆಗೋಲ್ಲ ನೋಡು ಒಂದು ನಾಲ್ಕು ದಿನ ಬರಬಾರದ ಎಂದು ಬೈಯುತ್ತಿದ್ದರೆ ಬಿಸಿ ಪ್ರಾಯದ ಮೊಮ್ಮಗಳ ನೋಡಿ ನಕ್ಕು ಸುಮ್ಮನಾಗುತ್ತಿದ್ದಳು. ನಿಂಗೆ ಬುದ್ಧಿ ಬರೋಲ್ಲ ಬಿಡು ಎಂದು ಗುರುಗುಡುತ್ತಲೇ ಹೊರಡುತ್ತಿದ್ದೆ. ಮನೆಯೇ ಮಠ ಕೆರೆಯೇ ತೀರ್ಥ ಮಗುವೇ ಎಂದು ದೂರ್ವೆ ಕೊಯ್ಯುವಾಗ ಹೇಳುತ್ತಿದ್ದ ಜಯತ್ತೆಯ ಮಾತು ನೆನಪಾಗಿ ಸಣ್ಣ ನಗು. ಮಗಳು ಹುಟ್ಟಿದ ಮೇಲೆ ಕೊಂಚ ಕಾಲಿಗೆ ಬ್ರೇಕ್ ಹಾಕಿದ ಹಾಗಾದರೂ ಓಡಾಟವೇನು ಕಡಿಮೆಯಾಗಿರಲಿಲ್ಲ. ಗಾಡಿ ಓಡಿಸಲು ಕಲಿತ ಮೇಲಂತೂ ಮನಸ್ಸು ಗರಿ ಬಿಚ್ಚಿದ ಹಕ್ಕಿ. ಯಾರಿಗೂ, ಯಾರನ್ನು ಕಾಯಬೇಕಾದ ಮರ್ಜಿ ಇಲ್ಲದೆ ಬೇಕೆಂದ ಕಡೆಗೆ ಹೋಗಬಹುದಾದ ಅವಕಾಶ. ಸರಾಗವಾಗಿ ಹರಿಯುತ್ತಿದ್ದ ನದಿಗೂ ಬಂತಲ್ಲ ಲಾಕ್ ಡೌನ್ ಎಂಬ ಒಡ್ಡು ಆಗ ಮಾತ್ರ ಅಷ್ಟು ದಿನ ಒಳಗೆ
Posts
Showing posts from 2020
- Get link
- Other Apps
ಅವನು ನನಗಿಂತ ಮೂರೋ ನಾಲ್ಕು ವರ್ಷ ದೊಡ್ಡವನು. ಸಂಜೆ ಶಾಲೆಯಲ್ಲಿ ಆಟಕ್ಕೆ ಬಿಟ್ಟಾಗ ಅದ್ಯಾವ ಕಾರಣವೋ ಏನೋ ಆಟದ ಮಧ್ಯದಲ್ಲಿ ಅಣ್ಣನಿಗೆ ಹೊಡೆದಿದ್ದ. ಇವನೋ ಮೃದು ಸ್ವಭಾವ. ತಿರುಗಿ ಬೈಯುವುದು ಇರಲಿ ನೋವಾಗುತ್ತಿದ್ದರೂ ಅತ್ತರೆ ರೌಡಿ ತಂಗಿಗೆ ಗೊತ್ತಾಗಿ ಏನು ಅವಾಂತರ ಆಗುತ್ತದೋ ಎಂದು ಅಳು ನುಂಗಿ ಮನೆಯ ಕಡೆ ನಡೆದಿದ್ದ. ಗುಂಪಾಗಿ ಹೋಗುವಾಗ, ಶಾಲೆಯಲ್ಲಿ ಇರುವಾಗ ಎಲ್ಲವು ಓಪನ್ ಸೀಕ್ರೆಟ್ ಅಷ್ಟೇ. ಅದರಲ್ಲೂ ಇಂತಹ ವಿಷ್ಯಗಳು ಹಬ್ಬುವ ವೇಗ ಗಾಳಿಯ ವೇಗಕ್ಕೂ ಜಾಸ್ತಿಯೇ. ಅಂತೂ ವಿಷಯ ಗೊತ್ತಾಗುವಾಗ ಶಾಲೆ ಬಿಟ್ಟು ಮನೆಯ ಅರ್ಧ ದಾರಿ ತಲುಪಿಯಾಗಿತ್ತು. ಚಿಕ್ಕಂದಿನಿಂದಲೂ ತುಸು ತಾಳ್ಮೆ ಕಡಿಮೆಯೇ. ಅದರಲ್ಲೂ ತಪ್ಪಿಲ್ಲದಿದ್ದರೆ ಮುಗಿದೇ ಹೋಯಿತು. ಅದು ಯಾರಾದರೂ ಸರಿ ಸುಮ್ಮನೆ ಒಪ್ಪಿಕೊಳ್ಳುವುದು ಗೊತ್ತೇ ಇರಲಿಲ್ಲ. ಒಮ್ಮೆ ನನ್ನವರು ಅಂದುಕೊಂಡರೆ ಮುಗಿದು ಹೋಯಿತು. ಅವರಿಗೆ ಏನಾದರೂ ಅದು ನನಗೆ ಆದ ಹಾಗೆ. ಹಾಗಾಗಿ ಕುದಿಕುದಿಯುತ್ತಲೇ ಮನೆಗೆ ಹೋಗಿದ್ದೆ. ಮುಖ ನೋಡಿದ ಅಜ್ಜಿಗೆ ಏನೋ ಆಗಿದೆ ಎಂದು ಅರ್ಥವಾದರೂ ಏನಾಯಿತು ಎಂದು ತಿಳಿದಿರಲಿಲ್ಲ. ನಿನ್ನಪ್ಪನದೇ ಬುದ್ಧಿ ಇರಬೇಕು, ತಾಳ್ಮೆ ಕಲಿ, ಎಲ್ಲದಕ್ಕೂ ಮುಂದೆ ಹೋಗ್ತಿ ಆಮೇಲೆ ನಿಷ್ಠುರ ಆಗ್ತಿ ಎಂದು ಗೊಣಗುತ್ತಲೇ ಊಟ ಬಡಿಸಿದ್ದಳು. ಎಷ್ಟೇ ಉಪದೇಶ ಮಾಡಿದರು ಅದು ಗೋರ್ಕಲ್ಲ ಮೇಲೆ ಮಳೆ ಹೊಯ್ದ ಹಾಗೆ ಎಂದು ಗೊತ್ತಿದ್ದರೂ ಅವಳು ಹೇಳುವುದು ಬಿಡುತ್ತಿರಲಿಲ್ಲ ನಾನು ಮಾಡುವುದು ನಿಲ್ಲಿಸುತ್ತಿರಲಿಲ್
- Get link
- Other Apps
ಅವರು ಬುದ್ಧಿಸಂ ಬಗ್ಗೆ ಪಾಠ ಮಾಡೋವಾಗ ಅದೇ ಒಳ್ಳೆಯದು ಅನ್ಸುತ್ತೆ, ಜೈನಿಸಂ ಬಗ್ಗೆ ಹೇಳೋವಾಗ ಇದೆ ಬೆಟರ್ ಅನ್ಸುತ್ತೆ, ಹಿಂದೂ ಧರ್ಮದ ಬಗ್ಗೆ ಕೇಳುವಾಗ ಇದಕ್ಕಿಂತ ಒಳ್ಳೆಯದು ಜಗತ್ತಿನಲ್ಲಿ ಬೇರೆ ಯಾವುದಿದೆ ಅನ್ಸುತ್ತೆ. ಯಾವುದು ಸತ್ಯ ಅಂತ ನಮ್ಮಲ್ಲಿ ಚರ್ಚೆ ನಡೆಯುತಿತ್ತು. ಅವರು ಪಾಠ ಮಾಡುತ್ತಿದ್ದದ್ದೇ ಹಾಗೆ. ಇತಿಹಾಸ ಬರೀ ಇಸವಿ, ಘಟನೆಗಳು ಆಗದೆ ಕಣ್ಣೆದೆರು ನಡೆದ ಹಾಗೆ. ಮತ್ತೆ ಅದನ್ನು ಓದಬೇಕು ಅನ್ನುವ ಪರಿಸ್ಥಿತಿಯೇ ಇಲ್ಲ. ಹಿಸ್ಟರಿ ಯಲ್ಲಿ ಫೇಲ್ ಆಗುವುದಿರಲಿ ಜಸ್ಟ್ ಪಾಸ್ ಅನ್ನುವ ಸುದ್ದಿಯೇ ಇರುತ್ತಿರಲಿಲ್ಲ. ಹೇಳುವ ಪ್ರತಿ ವಿಷಯವನ್ನು ಅಷ್ಟು ಶ್ರದ್ಧೆಯಿಂದ ಅಧ್ಯಯನ ಮಾಡಿ ಹೇಳುತ್ತಿದ್ದರು. ಜಗತ್ತು ಇನ್ನೂ ಅರ್ಥವಾಗದ ವಯಸ್ಸು. ಅವರಿಗೆ ನಾನು ಅಂದ್ರೆ ತುಂಬಾ ಇಷ್ಟ ಗೊತ್ತಾ ಅಣ್ಣನ ಬಳಿ ಕೊಚ್ಚಿ ಕೊಳ್ಳುತಿದ್ದೆ. ಕೇಳುವವನ ಮುಖದಲ್ಲಿ ಸಣ್ಣ ನಗು. ನಿಂಗೆ ಹೊಟ್ಟೆಕಿಚ್ಚು ಅಷ್ಟೇ ನಂಗೊತ್ತು ಅವರಿಗೆ ನಾನು ಅಂದ್ರೆ ತುಂಬಾ ಇಷ್ಟ ಅಂತ ಕೋಪ ಉಕ್ಕುತಿತ್ತು. ಅಯ್ಯೋ ಅವರಿಗೆ ನಿನ್ನ ಕಂಡ್ರೆ ಇಷ್ಟ ಇಲ್ಲ ಅಂತ ನಾನೆಲ್ಲಿ ಹೇಳಿದೆ ಇಷ್ಟ ಹೌದು ಆದರೆ ನೀನು ಮಾತ್ರವೇ ಇಷ್ಟ ಅಲ್ಲ. ಅವರು ನನ್ನ ಜೊತೆಯೂ ಹಾಗೆ ಇರ್ತಾರೆ, ಮತ್ತೊಬ್ಬರ ಜೊತೆಗೂ ಹಾಗೆ ಇರ್ತಾರೆ. ಅವರು ನಮ್ಮ ಜೊತೆಗೆ ಇರುವಷ್ಟು ಹೊತ್ತು ಅವರಿಗೆ ನಮ್ಮನ್ನು ಕಂಡ್ರೆ ಮಾತ್ರ ಇಷ್ಟ, ನಮ್ಮ ಜೊತೆ ಮಾತ್ರ ಇಷ್ಟು ಆತ್ಮೀಯವಾಗಿ ಇರ್ತಾರೆ ಅನ್ನೋ ಭಾವ ಮೂಡಿಸುವಹಾಗೆ ಬೇರೆಯವರ ಜೊತೆ
- Get link
- Other Apps
ಆಟ ಮುಗಿಸಿ ಮನೆಗೆ ಬರುವಾಗ ಮುಖ ಧುಮು ಧುಮು. ತುಟಿ ಮುಂದು. ಮಾತಾಡಿದರೆ ಜ್ವಾಲಾಮುಖಿ ಸಿಡಿಯುತ್ತೆ ಎಂದುಕೊಂಡು ನೋಡಿದರೂ ನೋಡದವಳ ಹಾಗೆ ಇದ್ದರೂ ಕಿಂಚಿತ್ತೂ ಉಪಯೋಗವಾಗಲಿಲ್ಲ. ಹತ್ತಿರವೇ ಬಂದು ಏನಾಯ್ತು ಎಂದು ಕೇಳುವ ಅಗತ್ಯವೇ ಇಲ್ಲದೆ ಅವರೆಲ್ಲಾ ದಿನಾ ಪ್ರಾಕ್ಟೀಸ್ ಮಾಡ್ತಾ ಇದ್ರು, ಹ್ಯಾಂಡಲ್ ಹಿಡಿಯದೇ ಎರಡು ರೌಂಡ್ ಹೋಗ್ತಾರೆ ನಂಗೆ ಆಗಿಲ್ಲ ಅದಕ್ಕೆ ಎಷ್ಟು ಇನ್ಸಲ್ಟ್ ಮಾಡಿದ ಗೊತ್ತಾ ಅವನು ಕೆಂಡ ನಿಗಿ ನಿಗಿ. ನೀರು ಹಾಕಿದರೆ ಬೂದಿ ಮುಖಕ್ಕೆ ಹಾರುವುದು ಖಚಿತ ಎಂದು ಗೊತ್ತಿದ್ದರಿಂದ ಮೌನವಾಗಿಯೇ ಕೇಳಿಸಿಕೊಳ್ಳುತ್ತಿದ್ದೆ. ಎಷ್ಟು ಹೊತ್ತು ತಾನೇ ಉರಿದೀತು? ಆರಲೇ ಬೇಕಲ್ಲ. ಉರಿದು ಆರಿದರೆ ಅಲ್ಲಿಗೆ ಎಲ್ಲವೂ ನಿಶ್ಚಲ ಆ ವಯಸ್ಸಿನಲ್ಲಿ ನಾನಿದ್ದದ್ದೂ ಹೀಗೆ ಅಲ್ಲವಾ.. ಈ ಅವಮಾನಗಳೇ ಹೀಗೆ. ಕೋಪ, ದುಃಖ, ಅಸಹಾಯಕತೆ ಎಲ್ಲವನ್ನೂ ಸೃಷ್ಟಿಸಿಬಿಡುತ್ತವೆ. ಅವಮಾನಕ್ಕಿಂತ ದೊಡ್ಡ ಶಿಕ್ಷೆ ಯಾವುದಿದೆ ಅನ್ನಿಸಿದ್ದು ಎಷ್ಟೋ ಸಲ. ಕೆಲವೊಮ್ಮೆ ಉತ್ತರಿಸಬೇಕು ಎಂದರೂ ಉತ್ತರಿಸಲಾಗದ ಪರಿಸ್ಥಿತಿಯಲ್ಲಿ ನಿಂತು ಬಿಟ್ಟಿರುತ್ತೇವೆ. ಅವುಡುಗಚ್ಚಿ ಸಹಿಸುವುದರ ವಿನಃ ಬೇರೆ ದಾರಿಯೇ ಇರುವುದಿಲ್ಲ. ಭಾರವಾದರೂ, ಕುಸಿದರೂ ಇಳಿಸಲು ಆಗುವುದೇ ಇಲ್ಲ. ನರಳುವುದು ತಪ್ಪುವುದಿಲ್ಲ. ಅದನ್ನು ಅವರು ಉದ್ದೇಶ ಪೂರ್ವಕವಾಗಿ ಮಾಡಿದ್ದರೂ ಗೊತ್ತಿಲ್ಲದೇ ಜರುಗಿದ್ದರೂ ಅದನ್ನೆದುರಿಸಿದವರ ಪಾಡು ಬದಲಾಗುವುದಿಲ್ಲ. ಕೆಲವೊಮ್ಮೆ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂ
- Get link
- Other Apps
ಮೊದಲ ಬಾರಿಗೆ ತನ್ನ ತಂದೆಯ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ ಬೆಳೆಗೆರೆ ಎನ್ನುವ ಸಾಲು ಕಾಣಿಸುತ್ತಲೇ ಕೈ ಸ್ಕ್ರಾಲ್ ಮಾಡುವುದು ನಿಲ್ಲಿಸಿತ್ತು. ಹಾಳಾದ್ದು ಈ ಕುತೂಹಲ ಅದು ಇನ್ನೊಬ್ಬರ ಬಗ್ಗೆ ಬಿಡಿಸಿಕೊಳ್ಳುವುದು ಸುಲಭವಲ್ಲ ಅನ್ನಿಸಿದರೂ ಮೀರಲಾಗಲಿಲ್ಲ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ, ಇಲ್ಲದ ಮಕ್ಕಳ ತಬ್ಬಲಿತನ ಎಷ್ಟು ಬೆಳೆದರೂ, ಏನೇ ಸಾಧಿಸಿದರೂ ಹೋಗದು. ಆ ಅನಾಥಭಾವ ಕೊನೆಯ ಉಸಿರಿನತನಕ ಬೆಂಬಿಡದ ಸಂಗಾತಿ. ಇದನ್ನು ಅನುಭವಿಸಿದ್ದರಿಂದಲೇ ಅವರು ಅದನ್ನು ಹೇಗೆ ಎದುರಿಸಿದರು ಎನ್ನುವ ಕುತೂಹಲ. ಕೇಳಿ ಮುಗಿಸುವ ಹೊತ್ತಿಗೆ ಇದು ಬೆಂಬಿಡದ ಬೇತಾಳ ಅನ್ನುವುದು ಅರ್ಥವಾಗಿತ್ತು. ತಂದೆಯಿಲ್ಲ ಜೊತೆಗೆ ಬಡತನ ಅಂದರೆ ಮುಗಿದೇ ಹೋಯಿತು. ಊರೆಲ್ಲಾ ಬುದ್ಧಿ ಹೇಳುವವರೇ, ಜವಾಬ್ದಾರಿ ಕಲಿಸುವವರೇ. ಆ ವಾತಾವರಣದಲ್ಲಿ ಬೆಳೆದವರೆಗೆ ಅನುಕಂಪ ಎಂದರೆ ಪರಮ ಅಹಸ್ಯ. ಅಷ್ಟೆಲ್ಲಾ ಸಾಧನೆ ಮಾಡಿ ಹೆಸರುವಾಸಿ ಆಗಿ ಶ್ರೀಮಂತಿಕೆಯಲ್ಲಿ ತೇಲಾಡಿದರು ಬೇರೆಲ್ಲಾ ಬಿಟ್ಟು ಹೋದರೂ ಈ ಅನಾಥಭಾವ ಮಾತ್ರ ಬಿಟ್ಟು ಹೋಗುವುದಿಲ್ಲವಲ್ಲ ಅನ್ನಿಸಿ ಹೊಟ್ಟೆಯೊಳಗೆ ಸಂಕಟ. ಅದರಲ್ಲೂ ತಂದೆ ಇಲ್ಲ ಎನ್ನುವುದಕ್ಕಿಂತ ಯಾರು ಎಂದು ಗೊತ್ತಿಲ್ಲ ಎನ್ನುವುದು ಮತ್ತಷ್ಟು ಹಿಂಸೆ. ಎಷ್ಟೇ ಎತ್ತರಕ್ಕೆ ಬೆಳೆದವನನ್ನೂ ಒಂದೇ ಸಲಕ್ಕೆ ಮೊಳಕಾಲ ಮೇಲೆ ಕೂರಿಸಿ ಬಿಡುವ ಶಕ್ತಿ ಅದಕ್ಕೆ. ಬೇರೇನೂ ಸಿಗದಾಗ ಎದುರಿನ ವ್ಯಕ್ತಿಯನ್ನು ಸಾಯಿಸಲು ಇರುವ ಏಕೈಕ ಆಯುಧ. ಇವೆಲ್ಲಾ ಅನುಭವಿಸಿಯೇ ಎಲ್ಲರನ
- Get link
- Other Apps
ಮೊದಲ ಕಾರು ಕೊಂಡ ಸಂಭ್ರಮ. ಇಬ್ಬರೂ ಆಫೀಸ್ ಗೆ ಹೋಗುತ್ತಿದ್ದರಿಂದ ರಜೆ ಸಿಕ್ಕಿದ ಕೂಡಲೇ ಎಲ್ಲಾದರೂ ಹೊರಡುವ ಅಭ್ಯಾಸ. ಹೊಸ ಕಾರ್ ಸುತ್ತುವ ಹುಚ್ಚು ಎರಡು ಜೊತೆಯಾಗಿತ್ತು. ಹಾಗೆ ಮೈಸೂರಿಗೆ ಹೋಗುವ ಹುಕಿ ಬಂದು ಹೋಗಿದ್ದೆವು. ಎಲ್ಲಾ ಕಡೆ ಸುತ್ತಾಡಿ ಅರಮನೆ ನೋಡಿ ಬಂದು ಕಾರ್ ಸ್ಟಾರ್ಟ್ ಆಗಿ ಇನ್ನೇನು ಹೋರಡಬೇಕು ಅಕ್ಕಾ ಎನ್ನುವ ಸ್ವರ. ಕಿಟಕಿಯಿಂದ ಹೊರಗೆ ನೋಡಿದರೆ ಕೈಯಲ್ಲಿ ಪುಟ್ಟ ಮರದ ಆಭರಣದ ಪೆಟ್ಟಿಗೆ ಹಿಡಿದ ವ್ಯಕ್ತಿಯೊಬ್ಬ ಕಾಣಿಸಿದ. ಅದರ ಮೇಲಿನ ಕುಸುರಿ ಕೆಲಸ ಒಳಗೆ ಹಾಕಿದ ಕೆಂಪು ಮಕಮಲ್ ಬಟ್ಟೆ ಎಲ್ಲವೂ ಚೆಂದವಿದ್ದರೂ ತಗೊಂಡು ಏನು ಮಾಡೋದು ಅನ್ನಿಸಿ ಬೇಡ ಎಂದೇ. ನಾವು ಹೋಗಿ ತೆಗೆದುಕೊಳ್ಳುವುದಕ್ಕೂ ಯಾರಾದರೂ ಬಂದು ತೆಗೆದುಕೊಳ್ಳಿ ಎನ್ನುವುದಕ್ಕೂ ತುಂಬಾ ವ್ಯತ್ಯಾಸ. ಅವನು ಹೋಗುವ ತರಹ ಕಾಣಿಸಲಿಲ್ಲ. ತಗೊಳ್ಳಿ ಬಂಗಾರ ಹಾಕಿಡಲು ಚೆನ್ನಾಗಿರುತ್ತದೆ ಅವನ ದನಿಯಲ್ಲಿ ಸಣ್ಣಗೆ ಒತ್ತಾಯ ಕಾಣಿಸಿ ಕಸಿವಿಸಿ. ಬೇಡ ಅಂದೇನಲ್ಲ ದನಿ ಕೊಂಚ ಜೋರಾದ ಹಾಗೆ ಅನ್ನಿಸಿತು. ಅದೇನೋ ಇನ್ನೂ ಬಂಗಾರದ ಮೋಹವಿರಲಿ ಅಲಂಕಾರ ಮಾಡಿಕೊಳ್ಳುವ ಆಸಕ್ತಿಯು ಇರಲಿಲ್ಲ. ಬಟ್ಟೆಗಳ ಬಗ್ಗೆ ವಿಪರೀತ ಮೋಹಕ್ಕೆ ಬಿದ್ದ ಹೊತ್ತು ಅದು. ಅದೆಷ್ಟು ಬಟ್ಟೆಗೆ ದುಡ್ಡು ಸುರಿತಿ ಅದರ ಬದಲು ಬಂಗಾರ ತಗೋಬಾರದ ಆಪತ್ಕಾಲಕ್ಕೆ ಆಗುತ್ತೆ ಮನೆಯ ಓನರ್ ಆದರೂ ಅಮ್ಮನಂತಿದ್ದ ಅವರು ಬೈಯ್ದು ಬೈದು ಸಾಕಾಗಿ ತಿಂಗಳಿಗೆ ಇಂತಿಷ್ಟು ಅಂತ ನಂಗೆ ಕೊಡು ಎಂದಿದ್ದರು. ಅವರ ಮಾತು ಮೀರದೆ
ಓದಿನ ಮೆಟ್ಟಿಲುಗಳು (ವಿಜಯಕರ್ನಾಟಕ)
- Get link
- Other Apps
ಆಟದ ನಡುವೆ ತುಸು ಸುಧಾರಿಸಿಕೊಳ್ಳಲು ಕುಳಿತಾಗ ಕೈ ಗೆ ಬರುತ್ತಿದ್ದದ್ದು ಚಂದಮಾಮ. ಅದರಲ್ಲಿ ಬರುತ್ತಿದ್ದ ಬೇತಾಳನ ಕತೆಗಳನ್ನು ಮೊದಲು ಓದಿಯೇ ಆಮೇಲೆ ಉಳಿದ ಕಥೆಗಳತ್ತ ಕಣ್ಣು ಹರಿಯುತ್ತಿದ್ದದ್ದು. ವಿಕ್ರಮಾದಿತ್ಯ ಏನು ಉತ್ತರ ಕೊಟ್ಟಿದ್ದಿರಬಹುದು ಎಂದು ಯೋಚಿಸಿ ಕೆಲವೊಮ್ಮೆ ಚರ್ಚಿಸಿ(?) ಯಾರು ಸರಿಯಾದ ಉತ್ತರ ಕೊಡ್ತಾರೋ ಅವರಿಗೆ ಚಂದಮಾಮ ಮೊದಲು ಓದುವ ಅವಕಾಶ. ಹೀಗೆ ಪುಸ್ತಕವನ್ನು ಮೊದಲು ಓದಬೇಕಾದರೆ ತಲೆಗೆ ಕೆಲಸ ಕೊಡಬೇಕು ಎಂದು ಕಲಿಸಿದ್ದು ಚಂದಮಾಮ. ಚಿಕ್ಕಂದಿನಿಂದಲೂ ರೈಲುಬೋಗಿಯ ಪಯಣದಲ್ಲಿ ಬಂದವರು ಹೋದವರು, ಬರುತ್ತಿರುವವರ ನಡುವೆ ಜೊತೆಗೆ ನಿರಂತರವಾಗಿ ಅಷ್ಟೇ ಆಪ್ತವಾಗಿ ಇವತ್ತಿಗೂ ಉಳಿದಿದ್ದು, ಪೊರೆದದ್ದು, ಸಾಂಗತ್ಯ ನೀಡಿದ್ದು ಪುಸ್ತಕಗಳು. ನಂತರ ಬಂದ ಬಾಲಮಂಗಳ, ಚಂಪಕ, ಶಾಲೆಯ ಲೈಬ್ರರಿ ಎಂಬ ಪುಟ್ಟ ಪೆಟ್ಟಿಗೆಯಲ್ಲಿದ್ದ ಅಮರ ಚಿತ್ರಕಥಾ, ಭಾರತ ಭಾರತೀ ಪುಸ್ತಕಗಳು ಹಸಿವೆಯ ತಣಿಸಿದ ಆತ್ಮಬಂಧುಗಳು. ಇದೆ ಪ್ರಪಂಚದಲ್ಲಿ ಮುಳುಗಿಹೋದವರನ್ನು ಹಠಾತ್ತನೆ ಮತ್ತೊಂದು ಪ್ರಪಂಚಕ್ಕೆ ಎಳೆದೊಯ್ದಿದ್ದು ಅಜ್ಜನ ಅನಾರೋಗ್ಯ. ಅವರಿಗಾಗಿ ರಾಮಾಯಣ ಮಹಾಭಾರತ ಓದುವ ಕೆಲಸ ಅಂಟಿಕೊಂಡಿತ್ತು. ಆಟವನ್ನು ಬಿಟ್ಟು ಅದರಲ್ಲೂ ನಮ್ಮಷ್ಟಕ್ಕೆ ನಾವೇ ಓದಿಕೊಳ್ಳುವ ಸುಖದಿಂದ ಜೋರಾಗಿ ಇನ್ನೊಬ್ಬರಿಗೆ ಓದಿ ಹೇಳುವ ಸಂಕಟ ಬೇರೆ. ಕತೆಗಳು ಉಪಕಥೆಗಳು, ವಾಲ್ಮೀಕಿ, ವ್ಯಾಸರ ಕತೆ ಹೇಳುವ ರೀತಿ ಆಳವಾಗಿ ತಿಳಿಯದಿದ್ದರೂ ಬದುಕಿನ ಎಷ್ಟೋ ಪ್ರಶ್ನೆಗಳಿಗೆ ಇವತ್ತ
ಅಟ್ಟ
- Get link
- Other Apps
ನಾಳೆ ಅಟ್ಟ ಗುಡಿಸಬೇಕು ಅವಳ ಸ್ವಗತ ನಮಗೆ ಸಂಭ್ರಮ. ನಡುಮನೆಯ ಮೂಲೆಯಲ್ಲಿದ್ದ ಏಣಿಯ ಕಡೆಗೆ ಗಮನ. ನಡುಮನೆಯ ಮಾಡಿಗೂ ನೆಲಕ್ಕೂ ಮಧ್ಯದಲ್ಲಿ ಮರದ ಹಲಗೆ ಹಾಸಿ ಮಾಡಿದ ಅಟ್ಟ ನೋಡಿದಾಗಲೆಲ್ಲ ಯಾಕೋ ತ್ರಿಶಂಕು ಸ್ವರ್ಗವೇ ನೆನಪಿಗೆ ಬರುತಿತ್ತು. ಸ್ವರ್ಗದಲ್ಲಿದ್ದು ಇಲ್ಲಿಲ್ಲ ಅನ್ನುವ ಯಾವ ವಸ್ತುವೂ ಇರಬಾರದು ಎಂದು ಹಠದಿಂದಲೇ ಸೃಷ್ಟಿ ಮಾಡಿದ್ದನಂತೆ. ಮನೆಯಲ್ಲಿ ಯಾವ ವಸ್ತು ಕೇಳಿದರು ಅಲ್ಲಿ ಅಟ್ಟದಲ್ಲಿ ಇರಬೇಕು ನೋಡು ಎನ್ನುವ ಮಾತು ಕೇಳಿದಾಗ ಇದು ನೆನಪಾಗುತಿತ್ತು. ಹಾಗಾಗಿ ಅಟ್ಟವೆಂದರೆ ಬಹು ವರ್ಷಗಳ ತನಕ ನನ್ನ ಪಾಲಿಗೆ ತ್ರಿಶಂಕು ಸ್ವರ್ಗ. ಏಣಿ ಹತ್ತಿ ಅಟ್ಟ ಏರಿದ ಕೂಡಲೇ ಸ್ವಾಗತಿಸುತ್ತಿದ್ದದ್ದು ಕಡುಕತ್ತಲು. ಎಲ್ಲೋ ಗಾಳಿಗೆ ಸರಿದ ಹಂಚಿನ ಸಂದಿಯಿಂದಲೋ, ಕಡು ಮಾಡಿನ ಮೂಲೆಯಿಂದಲೋ ಒಂದು ಸಣ್ಣ ಬೆಳಕು ಬಂದರು ಬೆಳಕು ಕಾಣಿಸುತಿತ್ತೇ ಹೊರತು ಅಟ್ಟ ಕಾಣಿಸುತ್ತಿರಲಿಲ್ಲ. ಆ ಮಟ್ಟಿಗೆ ಅಟ್ಟ ತನ್ನಲ್ಲಿದ್ದ ರಹಸ್ಯವನ್ನು ಕಾಪಾಡಿಕೊಳ್ಳುತಿತ್ತು. ಯಾರೇ ಬಂದರೂ ತಕ್ಷಣಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಹಾಗಾಗಿ ಏನಾದರೂ ತೆಗೆದುಕೊಂಡು ಬರಲು ಹೋದರೆ ಪಕ್ಕನೆ ಸಿಗುತ್ತಿರಲಿಲ್ಲ. ಒಂದು ಬೆಳಕಿನ ಕಿಡಿಯೂ ಇಲ್ಲದೆ ಕಣ್ಣು ಮುಚ್ಚಿಕೊಂಡು ಹೋದರೂ ಅಜ್ಜಿಗೆ ಸಿಗುತ್ತಿದ್ದ ವಸ್ತು ಬ್ಯಾಟರಿ ಹಿಡಿದು ಹೋದರೂ ನಮಗೆ ಸಿಗದಿದ್ದಾಗ ಸಿಟ್ಟು ಬರುತಿತ್ತು. ಇಟ್ಟಿದ್ದು ನಾನಲ್ವ ಹಾಗಾಗಿ ಬೇಗ ಸಿಗುತ್ತೆ ಅನ್ನುವ ಮಾತಿನ ಅರ್ಥ ಆಗ ಆಗಿರಲೇ ಇಲ್ಲ. ಸ್ವಲ್ಪ ತಿಳುವ
ಬಿಸಿ ಬೇಳೆ ಬಾತ್
- Get link
- Other Apps
ನಿಮ್ಮ ಕಡೆ ಬಿಸಿಬೇಳೆ ಬಾತ್ ತುಂಬಾ ಫೇಮಸ್ ಅಲ್ವ, ಮನೆಯ ಹಿಂದಿನ ಹಿತ್ತಿಲಿನ ಕಲ್ಲು ಬೆಂಚಿನ ಮೇಲೆ ಕುಳಿತು ಅವರು ಕೇಳುತ್ತಿದ್ದರು. ಅದು ಆಂಧ್ರದ ಒಂದು ಪುಟ್ಟ ಊರು. ಕೃಷ್ಣಾ ನದಿಯ ದಂಡೆಯ ಮೇಲಿದ್ದ ಕುಗ್ರಾಮ. ಆ ರಸ್ತೆಯ ಕೊನೆಗೆ ಇದ್ದ ಊರದು. ಬಾಗಿ ಹರಿಯುತ್ತಿದ್ದ ನದಿಯ ದಂಡೇ, ಈ ಕಡೆ ದಟ್ಟ ಕಾಡು. ನಕ್ಸಲರ ತಂಗುದಾಣ ಎಂದೇ ಪ್ರಸಿದ್ಧಿ ಆಗಿತ್ತು. ತೆಲುಗು ಬಿಟ್ಟು ಬೇರೆ ಯಾವ ಭಾಷೆಯೂ ಉಪಯೋಗಕ್ಕೆ ಬಾರದ ಸ್ಥಿತಿಯಲ್ಲಿ ಇದ್ದ ನಾವು ಆಗಷ್ಟೇ ಭಾಷೆ ಮಾತ್ರವಲ್ಲ ಆ ರಾಜ್ಯದ ಸಂಸ್ಕೃತಿ, ಸಂಪ್ರದಾಯ ಎಲ್ಲವನ್ನೂ ಕಲಿಯುತ್ತಿದ್ದೆವು. ಆಗ ಆಹಾರದ ವಿಷಯ ಮಾತಾಡುವಾಗ ಈ ಪ್ರಶ್ನೆ ಕೇಳಿದ್ದರು. ಒಂದು ಕ್ಷಣ ಮೌನವಾಗಿ ಕುಳಿತುಬಿಟ್ಟಿದ್ದೆ. ತವರು ಮನೆಯಲ್ಲಿ ಮನೆ ತುಂಬಾ ಮಕ್ಕಳು, ಸಣ್ಣ ದೇವಸ್ಥಾನದ ಪೂಜೆ, ಸ್ವಲ್ಪೇ ಸ್ವಲ್ಪ ಜಮೀನು. ಜೊತೆಗೆ ಸ್ವಾತಂತ್ರ್ಯ ಹೋರಾಟದ ದಿನಗಳು ಅವು. ಹಾಗಾಗಿ ಎಲ್ಲರ ಮನೆಯ ಹಾಗೆ ಅವರ ಮನೆಯ್ಲಲೂ ಬಡತನ. ಇದ್ದಿದ್ದರಲ್ಲೇ ಅಚ್ಚುಕಟ್ಟು ಮಾಡಿ ತಿನ್ನುವ ಅಭ್ಯಾಸ ಎಳವೆಯಲ್ಲಿ ಹಾಗಾಗಿ ಅವಳಿಗೆ ಅಭ್ಯಾಸ ಆಗಿ ಹೋಗಿತ್ತು. ಮದುವೆ ಆಗಿ ಬಂದ ಮೇಲೆ ಗಂಡ ದುಡಿದರೂ ಇಸ್ಪೀಟು ಆಟದಲ್ಲಿ ಎಲ್ಲವನ್ನೂ ಕಳೆದುಕೊಂಡೆ ಮನೆಗೆ ಬರುತ್ತಿದ್ದದ್ದು. ಇದ್ದ ಸ್ವಲ್ಪ ಜಮೀನಿನ ಉತ್ಪನ್ನವೇ ಬದುಕಿಗೆ ಆಧಾರ. ಆದರೂ ಅವಳೇನು ಧೃತಿ ಗೆಟ್ಟವಳಲ್ಲ. ಬಹು ಅಚ್ಚುಕಟ್ಟು. ವಾಸ್ತವ ಅರ್ಥಮಾಡಿಕೊಂಡವಳು. ಹಾಗಾಗಿ ಯಾವುದಕ್ಕೂ ಆಸೆ ಪಡದೆ ಇದ್ದಿದ್ದರಲ್ಲಿ ಹೇಗ
ಮನಸ್ಸಿಗೊಂದು ಕೋಣೆ ಬೇಕು
- Get link
- Other Apps
ಪ್ಯಾಸೇಜ್ ನ ಕೊನೆಯಲ್ಲಿ ಅದೊಂದು ಪುಟ್ಟ ರೂಮ್. ಪುಟ್ಟದು ಎಂದರೆ ನಾಲ್ಕು ಜನ ಹೋದರೆ ಇನ್ನೊಬ್ಬರು ಹೋಗಲು ಯೋಚಿಸುವ ಹಾಗಿದ್ದ ರೂಮ್. ಅಲ್ಲೊಂದು ಆಳೆತ್ತರದ ಕನ್ನಡಿ. ಭರತನಾಟ್ಯಮ್ ಕ್ಲಾಸ್ ಗೆ ಹೋಗುವ ಮುನ್ನ ಯುನಿಫಾರ್ಮ್ ಸೀರೆ ಉಡಲು ಆ ರೂಮ್ ಎಂದು ಬಿಡಲಾಗಿತ್ತು. ಅದಕ್ಕೊಂದು ಕಿಟಕಿ ತೆರೆದರೆ ಪಕ್ಕದ ರಸ್ತೆ ನಿಚ್ಚಳವಾಗಿ ಕಾಣಿಸುತಿತ್ತು. ಬೆಳಿಗ್ಗೆ ಕ್ಲಾಸ್ ಗೆ ಹೋಗುವ ಮುನ್ನ ಏನೂ ಗೊತ್ತಾಗದಿದ್ದರೂ ಕ್ಲಾಸ್ ಮುಗಿಸಿ ಇಳಿಯುವ ಬೆವರನ್ನು ಒರೆಸಿಕೊಳ್ಳುತ್ತಾ, ಅಲೊಸ್ಟ್ ನೆಂದಿರುತ್ತಿದ್ದ ಡ್ರೆಸ್ ಬದಲಾಯಿಸುವಾಗ ಮಾತ್ರ ಘಮ್ಮನೆ ವಾಸನೆ. ಕಿಟಕಿ ಬಾಗಿಲು ಇದ್ದರೂ ತೆಗೆಯುವ ಹಾಗಿಲ್ಲದ ಮುಚ್ಚಿದ ಪ್ರಪಂಚ. ಹಾಗೆ ಮುಚ್ಚಿದ ಪ್ರಪಂಚದಲ್ಲಿ ಕುಳಿತು ಗೆಳತಿಯರ ಲೋಕ ಬಿಚ್ಚಿಕೊಳ್ಳುತಿತ್ತು. ಐದು ನಿಮಿಷ ಸಿಕ್ಕಿದರೂ ಇನ್ನೊಂದು ಕ್ಲಾಸ್ ಶುರುವಾಗುವ ಎರಡು ನಿಮಿಷ ಇದ್ದರೂ ನಾವೆಲ್ಲರೂ ಅಲ್ಲಿಯೇ ಸೇರುತ್ತಿದ್ದೆವು. ಅಲ್ಲಿ ಸೇರಿ ಬಾಗಿಲು ಹಾಕಿಕೊಂಡರೆ ನಮ್ಮದೇ ಲೋಕ ತೆರೆದುಕೊಳ್ಳುತ್ತಿತ್ತು. ಯಾವ ಮಾತು, ಯಾವ ವಿಷಯ ಉಹು ಅದ್ಯಾವುದಕ್ಕೂ ಗೋಡೆ, ಬಾಗಿಲು ಇರುತ್ತಿರಲಿಲ್ಲ. ಖುಲ್ಲಂ ಖುಲ್ಲಂ ಬಯಲು. ನಮ್ಮ ನಗು ಕೇಕೆ ಹೊರಗೆ ಹೋಗಲಾರದು ಎನ್ನುವ ನಂಬಿಕೆ. ಹೊರಗೆಲ್ಲೂ ಆಡಲಾಗದ ಮಾತುಗಳಿಗೆ ಅಲ್ಲಿ ಪ್ರಸವದ ಸುಖ. ಕಿಟಕಿಯನ್ನು ಕೊಂಚವೇ ತೆರೆದಿಟ್ಟು ಕುಳಿತರೆ ಇಡೀ ಲೋಕಕ್ಕೆ ಬೆನ್ನಾಗಿ ನಮ್ಮದೇ ಲೋಕ ಸೃಷ್ಟಿಸಿಕೊಂಡು ಸುಖಿಸುತ್ತಿದ್ದೆವು. ಬರೀ ನಗು ಮಾ
ಹೂ ಗಿಡ ಒಂದಾದರು ಇರಬೇಕು
- Get link
- Other Apps
ಬೆಳಕು ಹರಿಯುತ್ತಿದ್ದ ಹಾಗೆಯೇ ಏಳಬೇಕಿತ್ತು. ಹಾಗಾಗಿ ಪ್ರತಿದಿನ ಸೂರ್ಯೋದಯ ನೋಡುವ ಅವಕಾಶ. ಬಿಸಿಲು ಏರುವವರೆಗೆ ಮಲಗುವುದು ಎಂದರೆ ಗೊತ್ತಿಲ್ಲದ ಕಾಲ. ಬೆಳಕು ಮೂಡುವ ಮುನ್ನವೇ ಅಜ್ಜಿ ಏಳುತ್ತಿದ್ದಳು. ಬೆಳಕು ಮೂಡಿದ ಮೇಲೆ ನಾವುಗಳು ಅಷ್ಟೇ. ನಸು ಬೆಳಕು ತುಸು ತುಸುವಾಗಿ ಅಡಿಯಿಡುವಾಗಲೇ ನಾವು ಕಣ್ಣುಜ್ಜಿಕೊಂಡು ಅರೆಗಣ್ಣು ತೆರೆದೇ ಬಚ್ಚಲ ಮನೆಯ ಕಡೆಗೆ ನಡೆಯುತ್ತಿದ್ದೆವು. ಅದಾಗಲೇ ದನ ಕರುಗಳು ಎದ್ದು ಸರಭರ ಸದ್ದು ಮಾಡುವುದನ್ನೇ ನೋಡುತ್ತಾ, ಧಗಧಗನೆ ಉರಿಯುವ ಬೆಂಕಿಯ ಎದುರು ತುಸು ಕುಳಿತು ಮೈ ಬೆಚ್ಚಗೆ ಮಾಡಿಕೊಂಡು ಅದಾಗಲೇ ಮರಳುತಿರುತ್ತಿದ್ದ ನೀರಿನಲ್ಲಿ ಮುಖ ತೊಳೆದು ಒಳಗೆ ಬರುವ ಹೊತ್ತಿಗೆ ಲೋಟದಲ್ಲಿ ಹಬೆಯಾಡುವ ಕಾಫಿ. ಕಾಫಿ ಕುಡಿದು ಈಚೆಗೆ ಬರುವ ಹೊತ್ತಿಗೆ ಸ್ವಾಗತಿಸುವ ಬೆಳ್ಳಂ ಬೆಳಗು, ಕೈಯಲ್ಲಿ ಹೂವಿನ ಬುಟ್ಟಿ. ಪ್ರತಿದಿನ ಬೆಳಿಗ್ಗೆ ಕಾಫಿ ಕುಡಿದ ಮೇಲೆ ದೇವರ ಪೂಜೆಗೆ ಹೂವು ಬಿಡಿಸುವುದು ನಮ್ಮ ಕೆಲಸ. ಅದೊಂದೇ ಆದರೆ ಏನೂ ಅನ್ನಿಸುತ್ತಿರಲಿಲ್ಲವೇನೋ? ಹಾರುವ ಚಿಟ್ಟೆಗಳ ನೋಡುತ್ತಾ, ಎಲೆಯ ತುದಿಯಲ್ಲಿ ಗುಂಡಾಗಿ ಫಳ ಫಳ ಹೊಳೆಯುತ್ತಿದ್ದ ನೀರ ಹನಿಗಳ ಅಲುಗಿಸಿ ಬೀಳಿಸಿ ಅದನ್ನು ಬೊಗಸೆಯಲ್ಲಿ ಹಿಡಿಯುತ್ತಾ, ನಾಚಿಕೆ ಮುಳ್ಳಿನ ಗಿಡದ ಎಲೆಗಳನ್ನು ಮೃದುವಾಗಿ ತಾಕಿ ಅದು ಮುಚ್ಚಿಕೊಳ್ಳುವುದನ್ನು ಗಮನಿಸುತ್ತಾ, ಯಾವ ಗಿಡದಲ್ಲಿ ಯಾವ ಹೂ ಬಿಟ್ಟಿದೆ ನೋಡುತ್ತಾ, ಹಕ್ಕಿಗಳ ಕೂಗು ಆಲಿಸುತ್ತಾ, ಇಬ್ಬನಿಯ ಹನಿ ಅಂಗಾಲು ತಾಕಿ ಕಚಗುಳಿ ಇಡು
- Get link
- Other Apps
ಎಲ್ಲೇ ಹೋಗಲಿ ನಮ್ಮ ಮನೆಗೆ ಬಂದು ಎರಡು ರೊಟ್ಟಿ ತಿಂದು ಮೊಸರು ಅನ್ನ ತಿಂದರೇನೇ ಸಮಾಧಾನ ನೋಡಿ ಅವರು ನಗುತ್ತಲೇ ಹೇಳುತ್ತಿದ್ದರು. ಎಲ್ಲಿ ಹೋಗುತ್ತೆ ರಾತ್ರಿ ಆಗುತ್ತಿದ್ದ ಹಾಗೆ ಕೊಟ್ಟಿಗೆಗೆ ಬರುತ್ತೆ ಅಜ್ಜಿ ಎಲ್ಲಾ ದನಗಳ ಜೊತೆಗೆ ಬಾರದ ಕೌಲಿಯ ಬಗ್ಗೆ ಮಾತಾಡುತ್ತಿದ್ದದ್ದು ನೆನಪಾಯಿತು. ಎಂಥ ಕೆಲಸ ಇಲ್ಲದಿದ್ರೂ ನಮ್ಮ ಮನೇಲಿ ನಮಗೆ ಬೇಜಾರಾಗೊಲ್ಲ ಊರಿನಿಂದ ಬಂದ ಅತ್ತೆ ನುಡಿಯುತ್ತಿದ್ದರು. ಯಾಕೋ ಅವರ ಮಾತು ಕೇಳುತ್ತಿದ್ದ ಹಾಗೆ ಮನಸೇಂಬ ಗೂಗಲ್ ಲಿಂಕ್ ಕೊಡುತ್ತಾ ಹೋಯಿತು. ಎಷ್ಟೊಂದು ಲಿಂಕ್ ಗಳಲ್ಲಿ ನನ್ನದೇ ಲಿಂಕ್ ಎಲ್ಲಿದೆ ಎಂದರೆ ಕಾಡಿದ್ದು ವಿಷಾದ ಮಾತ್ರ. ಹೆಸರಿನ ಹಿಂದೆ ಇದ್ದ ಕೆ ಯಾವೂರ ಹೆಸರು ಎಂಬುದು ಹೈ ಸ್ಕೂಲ್ ಗೆ ಬರುವವರೆಗೂ ಗೊತ್ತಿರಲಿಲ್ಲ. ಇವತ್ತಿನವರೆಗೂ ಆ ಊರು ಕಂಡಿಲ್ಲ. ಅಲ್ಲಿದ್ದ ಮನೆತನದ ಹಿರಿಯರ ನೋಡಿಲ್ಲ. ಹಾಗಾಗಿ ಅದು ಹೆಸರಿಗಂಟಿಕೊಂಡಿದೆ ಬಿಟ್ಟರೆ ನನ್ನದಲ್ಲ ಎನ್ನುವ ಭಾವ . ಅಪ್ಪನ ಕೈ ಹಿಡಿದು ಭದ್ರಾವತಿಯ ರಸ್ತೆಗಳಲ್ಲಿ ರಾಜಕುಮಾರಿಯ ಹಾಗೆ ನಡೆದದ್ದು ಕೆಲವೇ ವರ್ಷಗಳು. ಅವನು ಕೈ ಬಿಡಿಸಿಕೊಂಡ ಮೇಲೆ ಅದರ ಬಗ್ಗೆ ಮೋಹ ಉಳಿದಿಲ್ಲ. ಊರಿಗೆ ಹೋಗುವಾಗ ಆ ರಸ್ತೆಗಳಲ್ಲಿ ಅಪ್ಪ ನೆನಪಾಗುತ್ತಾನೆ ಬಿಟ್ಟರೆ ನನ್ನೂರು ಎನ್ನಿಸುವುದಿಲ್ಲ. ಆಮೇಲೆ ಬಂದಿದ್ದು ಸಂಪಗೋಡು ಎಂಬ ವಾರಾಹಿ ಮಡಿಲಿಗೆ. ಹುಟ್ಟಿದ್ದು ಅಲ್ಲೇ ಆಗಿದ್ದರಿಂದ, ಬಾಲ್ಯ ಕಳೆದದ್ದು ಅಲ್ಲಿಯೇ ಆದರಿಂದ ಇವತ್ತಿಗೂ ಊರು ಎಂದರೆ ಮನೆ ಎಂದರೆ ನೆನಪಾಗ
ವಾಗರ್ಥವಿಲಾಸ
- Get link
- Other Apps
ಕೊಯ್ಲು ಮುಗಿದ ವಿಶಾಲವಾಗಿ ಹಬ್ಬಿ ಮಲಗಿದ್ದ ಗದ್ದೆಯ ನಡುವಿನಲ್ಲಿ ಏನೋ ಗಜಿಬಿಜಿ ಶುರುವಾಗಿತ್ತು. ಅದೇನೆಂದು ಕುತೂಹಲ ತಡೆಯದೆ ಹೋಗಿ ನೋಡಿದರೆ ಇನ್ನೆರೆಡು ದಿನದಲ್ಲಿ ಅಲ್ಲಿ ಯಕ್ಷಗಾನ ಎನ್ನುವ ಸುದ್ದಿ ಕೇಳಿ ಸಂಭ್ರಮ. ರಂಗ ಸಿದ್ಧವಾಗುವ ಮೊದಲೇ ನಾವೆಲ್ಲಿ ಕೂರುವುದು ಎನ್ನುವ ಕಿತ್ತಾಟ, ಇದು ನನ್ನ ಜಾಗ ಎಂದು ಗಡಿ ನಿರ್ಮಿಸುವ ಕೆಲಸ ಆಗಿಬಿಟ್ಟಿತ್ತು. ಆದಿನ ಬೆಳಿಗ್ಗೆಯಿಂದಲೇ ಕಣ್ಣು ಗಡಿಯಾರದ ಕಡೆ, ಯಾವಾಗ ರಾತ್ರಿ ಆಗುವುದೋ ಎನ್ನುವ ಕಾತುರ. ಏನು ತಿಂದೆವು ಎನ್ನುವುದೂ ಗೊತ್ತಾಗದ ಹಾಗೆ ನುಂಗಿ ನಮ್ಮ ಜಾಗಕ್ಕೆ ಓಡುವ ಹೊತ್ತಿಗೆ ರಂಗ ಪ್ರವೇಶ ಆಗಿ ಹೋಗಿತ್ತು. ನಮ್ಮದೆನ್ನುವ ಜಾಗ ಕಷ್ಟಪಟ್ಟು ಗುರುತಿಸಿ ತೆಗೆದುಕೊಂಡು ಹೋಗಿದ್ದ ಕಂಬಳಿ ಹಾಸಿ ಕುಳಿತರೆ ಇಡೀ ಜಗತ್ತೇ ಮರೆಯಾಗಿ ಹೊಸದೊಂದು ಲೋಕ ಕಣ್ಣೆದೆರು ಇಳಿದಂತೆ. ಯಕ್ಷ, ಗಂಧರ್ವ, ದೇವತೆ, ರಾಕ್ಷಸರು ಎಲ್ಲರೂ ಆ ಪುಟ್ಟ ರಂಗದಲ್ಲಿ ಬಂದು ಕುಣಿದು ಮೂರು ಲೋಕಗಳು ಒಂದೆಡೆ ಮೇಳೈಸಿ ಆ ವೈಭವಕ್ಕೆ ಕಣ್ಣು ಮುಚ್ಚಿ ಹೋಗುವಾಗ ಬಡಿಯುವ ಚೆಂಡೆ, ಏರುವ ಭಾಗವತರ ಸ್ವರ. ಅದೊಂದು ವಿಸ್ಮಯ ಲೋಕ. ಆ ವಿಸ್ಮಯ ಲೋಕದಲ್ಲಿ ಕತೆ ದಾರಿ ತಪ್ಪದ ಹಾಗೆ ಸರಿಯಾಗಿ ಕರೆದೊಯ್ಯುವವರು ಭಾಗವತರು. ಕತೆಯ ಲೋಕ ಬಿಚ್ಚಿಡುತ್ತಾ ಒಳ ನೋಟ ನಮಗೆ ಬಿಡುತ್ತಾ ಅಲ್ಲಲ್ಲಿ ದಾರಿ ತೋರಿಸುತ್ತಾ ಇಡೀ ಪ್ರಸಂಗದ ದರ್ಶನ ಮಾಡಿಸುವವರು ಅವರು. ಅಷ್ಟೇ ವಿಸ್ಮಯವಾದ ಸಾಹಿತ್ಯ ಲೋಕದ ಭಾಗವತರು ಕೆ.ವಿ ತಿರುಮಲೇಶ್ ಸರ್. ಅಂತದೊಂದು ಪ್ರಸಂಗ
ಅಶ್ವತ್ಥಾಮನ್
- Get link
- Other Apps
ಬಾಲ್ಯ ಸರಿಯಿಲ್ಲದ ಮಕ್ಕಳಿಗೆ ಸಮಾಜದ ಬಗೆಗೆ ಒಂದು ಅವ್ಯಕ್ತ ಅಸಹನೆ ಇರುತ್ತದೇನೋ. ಹಲವರಿಗೆ ಅವಕಾಶ ಸಿಕ್ಕಾಗ ಅದು ವ್ಯಕ್ತವಾಗಬಹುದು. ತಾವು ಅನುಭವಿಸಿದ ಅವಮಾನ, ಆಕ್ರೋಶ ಇವುಗಳನ್ನು ಹೊರಹಾಕಲು ತಮ್ಮದೇ ದಾರಿಗಳನ್ನು ಕಂಡುಕೊಳ್ಳುತ್ತಾರೆ. ಯಾರನ್ನೋ ಮೆಚ್ಚಿಸುವ ಎನ್ನುವುದಕ್ಕಿಂತ ಎದುರಿನವರ ಕಣ್ಣಲ್ಲಿ ಹೀರೋ ಅನ್ನಿಸಿಕೊಳ್ಳುವ ಮನೋಭಾವ ಸುಪ್ತವಾಗಿರುತ್ತದೇನೋ. ಇಂಥದೊಂದು ಕಾರಣಕ್ಕೆ ದುರ್ಯೋಧನನ ಕಣ್ಣಲ್ಲಿ ಹೀರೋ ಆಗುವುದಕ್ಕೆ ಅಧರ್ಮ ಎಂದೂ ಗೊತ್ತಿದ್ದೂ ಆ ಅಶ್ವತ್ಥಾಮ ಅರ್ಧರಾತ್ರಿಯಲ್ಲಿ ಎದ್ದು ಹೊರಟನಾ... ಜೋಗಿಯವರ ಈ ಅಶ್ವತ್ಥಾಮನೂ ಹೀಗೆ. ತನ್ನ ತಾಯಿಗೆ ತನ್ನ ತಂದೆಯೆಂಬ ವ್ಯಕ್ತಿಯಿಂದಾದ ಮೋಸಕ್ಕೆ ಸೇಡು ತೀರಿಸಿಕೊಳ್ಳಲು ಹೊರಟನೇನೋ ಅನ್ನಿಸುತ್ತದೆ. ತಾಯಿಯ ನಂಬಿಕೆಗೆ ಪೆಟ್ಟು ಬಿದ್ದ ಫಲವೇನೋ ಎಂಬಂತೆ ಯಾರನ್ನೂ ನಂಬದ ಎಲ್ಲರನ್ನೂ ನಂಬಿದಂತೆ ನಟಿಸುವ ಆತ ಅದ್ಭುತ ನಟ. ಆದರೆ ಆ ನಟನೆ ಎಲ್ಲಿಂದ ಆರಂಭವಾಗಿ ಎಲ್ಲಿ ಮುಗಿಯುತ್ತದೆ ಎನ್ನುವುದು ಕೊನೆಯವರೆಗೂ ಕಾಡುವ ಹಾಗೆ ಬರೆದಿರುವ ಶೈಲಿ ಮಾತ್ರ ಬಹಳ ಚೆಂದ. ಇದು ಕಾದಂಬರಿಯ, ಸ್ವಗತವಾ , ಯಾರದ್ದೋ ಆತ್ಮಕತೆಯ ನಿರೂಪಣೆಯಾ.. ಕಾವ್ಯವಾ ಲಲಿತ ಪ್ರಬಂಧವಾ ಅಥವಾ ಅವೆಲ್ಲವೂ ಒಟ್ಟು ಸೇರಿದ ಹೊಸದೊಂದು ಬಗೆ ಹುಟ್ಟಿದಿಯಾ ಎನ್ನುವ ಆಲೋಚನೆ ಕಾಡುತ್ತಲೇ ಓದಿಸಿಕೊಂಡು ಹೋಗುತ್ತದೆ. ನಿರೂಪಕನಾಗಿ, ಪಾತ್ರವಾಗಿ ಮೂರನೆಯ ವ್ಯಕ್ತಿಯಾಗಿ ಜೋಗಿ ಕೂಡಾ ಇಡೀ ಕಾದಂಬರಿಯಲ್ಲಿ ಅಶ್ವತ್ಥಾಮನಿಗಿಂತಲೂ ಅದ್ಭುತವಾ
ಕೊಟ್ಟಿಗೆಯ ಆಕರ್ಷಣೆ
- Get link
- Other Apps
ಬೆಳಗಾಗುತ್ತಿದ್ದದ್ದೇ ಅವುಗಳ ಅಂಬಾ ಎನ್ನುವ ದನಿಯಿಂದ. ಕಣ್ಣುಜ್ಜಿಕೊಂಡು ಹೊರಗೆ ಬರುವ ಹೊತ್ತಿಗೆ ಅಜ್ಜಿ ಅವುಗಳೊಂದಿಗೆ ಮಾತಾಡುತ್ತಾ ಹಾಲು ಕರೆಯುತ್ತಲೋ ಇಲ್ಲಾ ಅವುಗಳಿಗೆ ಕುಡಿಯಲು ಕೊಡುತ್ತಲೋ ಇರುತ್ತಿದ್ದಳು. ನಿಂಗೆ ಮಾತಿಗೆ ಒಂದು ಜೀವ ಅಂತ ಇದ್ರೆ ಸಾಕು ಅಲ್ವ ಮತ್ತೆ ನಂಗೆ ಹೇಳ್ತಿ ಕಲ್ಲನಾದ್ರು ಮಾತಾಡಿಸುತ್ತೆ ಇದು ಅಂತ ಗೊಣಗುತ್ತಲೇ ಬಚ್ಚಲಿನತ್ತ ಹೋಗುತ್ತಿದ್ದೆ. ಅವಳು ಏನು ಹೇಳುತ್ತಿದ್ದಳೋ ಕೇಳಲು ಅಲ್ಲಿದ್ದರೆ ತಾನೇ... ಅವಳಪ್ಪ ತೀರಿಕೊಂಡ ನಂತರ ಊರಿನಲ್ಲಿದ್ದ ಕೊನೆಯ ತಮ್ಮ ತೋಟದ ಮನೆಗೆ ಹೋಗುವಾಗ ಮನೆಯಲ್ಲಿದ್ದ ದನಕರುಗಳನ್ನು ಇವಳಿಗೆ ಕೊಟ್ಟಿದ್ದ. ತವರಿನಿಂದ ಏನೂ ತಾರದ ಅವಳು ಇವುಗಳನ್ನು ಮಾತ್ರ ಹೊಡೆದು ತಂದಿದ್ದಳು. ಅದರಲ್ಲೊಂದು ದನ ಕಡುಗಪ್ಪು. ಆದರೆ ಹಣೆಯಲ್ಲಿ ಮಾತ್ರ ಬೆಳ್ಳನೆಯ ಬೊಟ್ಟು. ಚಂದ್ರಿ ಅಂತ ಅದಕ್ಕೆ ಹೆಸರಿಟ್ಟಿದ್ದಳು. ತುಂಬಾ ಸಾಧು. ಹೇಳಿದ ಮಾತು ಅರ್ಥ ಆಗುತ್ತೇನೋ ಅನ್ನುವ ಹಾಗೇ ಅದರ ವರ್ತನೆ. ಕೊಟ್ಟಿಗೆಯ ತುಂಬಾ ತುಂಬಿಕೊಂಡಿದ್ದ ಅವುಗಳನ್ನು ನೋಡುವುದೇ ಅವಳಿಗೆ ಸಂಭ್ರಮ. ಅವುಗಳ ಆರೈಕೆ, ಬಾಣಂತನ, ಪುಟ್ಟ ಕರುಗಳಿಗೆ ತುತ್ತು ತಿನ್ನಿಸುವುದು ಅವಳ ಇಷ್ಟದ ಕೆಲಸಗಳು. ಪುಟ್ಟ ಕರುವಿನ ಬಾಯಿ ಇಷ್ಟೇ ತೆಗೆದು ಮೃದುವಾಗಿ ಕಲಿಸಿದ ಅನ್ನ ತಿನ್ನಿಸುವುದು ನೋಡುತ್ತಿದ್ದವಳನ್ನು ಕರೆದು ಹೇಗೆ ತಿನ್ನಿಸಬೇಕು, ಹಾಗೆ ಹಿಡಿಯಬೇಕು ಅನ್ನುವುದು ಕಲಿಸಿದ್ದಳು. ಆಮೇಲೆ ನನಗದು ಇಷ್ಟದ ಕೆಲಸ. ಮಗುವಿಗೆ ತಿನ್ನಿಸಿದ ಹಾಗೆ ಧ
ಆಲೆಮನೆ
- Get link
- Other Apps
ಮನೆಯ ಅಂಗಳ ದಾಟಿ, ಗದ್ದೆಯ ಬಯಲಿಗೆ ಇಳಿದು ಎಡಕ್ಕೆ ತಿರುಗಿ ಅದೇ ಕೋಗಿನಲ್ಲಿ ಒಂದರ್ಧ ಮೈಲು ನಡೆದರೆ ಕೋಗಿನ ಅಂಚಿನಲ್ಲಿ ಹರಿಯುತ್ತಿದ್ದ ಆ ದೊಡ್ಡ ಹಳ್ಳ ಸಿಗುತಿತ್ತು. ಅಲ್ಲಿ ಮಾತ್ರ ಇನ್ನೊಂದು ಹಳ್ಳವೂ ಬಂದು ಸೇರಿ ಇದು ಇನ್ನಷ್ಟು ಕೊಬ್ಬುತಿತ್ತು. ಬೇಸಿಗೆಯಲ್ಲಿ ಆರಾಮಾಗಿ ಇಳಿದು ದಾಟಬಹುದಾದರೂ ಮಳೆಗಾಲದಲ್ಲಿ ಅದರ ಆರ್ಭಟ ಜೋರಾಗಿರುತ್ತಿದ್ದರಿಂದ ಅಡಿಕೆಯ ಮರದ ಸಂಕವನ್ನು ಹಾಕಲಾಗಿತ್ತು. ತುಸು ಎತ್ತರವೇ ಅನ್ನಿಸಬಹುದಾದ ಆ ಸಂಕಕ್ಕೆ ಅಲ್ಲಲ್ಲಿ ಕೋಲು ಕಟ್ಟಿ ಹಿಡಿದು ದಾಟಲು ಅನುಕೂಲ ಮಾಡಿದ್ದರು. ಆ ಸಂಕ ದಾಟಿದರೆ ಕಬ್ಬಿನಕೇರಿ. ಇದ್ದಿದ್ದು ಒಂದೇ ಮನೆ ನರಸಿಂಹ ಶಾಸ್ತ್ರಿಗಳದ್ದು. ಮಳೆಗಾಲದಲ್ಲಿ ಅಲುಗಾಡುವ ಸಂಕ, ಕೆಳಗೆ ಭೋರ್ಗೆರೆದು ಕೆಂಪಾಗಿ ಹರಿಯುವ ಹಳ್ಳ ಭಯ ಹುಟ್ಟಿಸುತ್ತಿದ್ದರಿಂದ ಹೋಗುವುದು ಕಡಿಮೆಯಾಗಿದ್ದರೂ ಸಂಕ್ರಾಂತಿ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೆವು. ಸಂಕ್ರಾಂತಿ ಮುಗಿಯುತ್ತಿದ್ದ ಹಾಗೆ ಅಲ್ಲಿ ಆಲೆಮನೆ ಶುರುವಾಗುತ್ತಿತ್ತು. ಅವರು ಕಬ್ಬು ಬೆಳೆಯುತ್ತಿದ್ದರಿಂದ ಕಬ್ಬಿನಕೇರಿ ಅಂತಾರೆ ಎಂದು ನಾವೇ ಹೆಸರಿಗೊಂದು ಕಾರಣ ಕೊಟ್ಟುಕೊಳ್ಳುತ್ತಿದ್ದೆವು. ಕಣದಲ್ಲಿ ಕೋಣವನ್ನು ಕಟ್ಟಿ ಗಾಣ ತಿರುಗಿಸುವವರು, ತುಸು ದೂರದಲ್ಲಿ ಉರಿಯುವ ದೊಡ್ಡ ಒಲೆಯಾ... ಬೆಂಕಿಯ ಗೋಳವಾ ... ಅದರ ಮೇಲೊಂದು ದೊಡ್ಡದಾದ ಬಾಣಲೆ.. ಅದರಲ್ಲಿ ಕುದಿಯುವ ಬೆಲ್ಲ.. ಸುತ್ತಲೂ ನೋಡುವ ಜನ, ಮಾತು ಕತೆ, ಕುತೂಹಲದಿಂದ ಮುಂದಕ್ಕೆ ನುಗ್ಗುವ ನಮ್ಮಂತ ಕಪಿ ಸೈ
- Get link
- Other Apps
ಬೆಳ್ಬೆಳಿಗ್ಗೆ ಅಥವಾ ಸಂಜೆಯ ಹೊತ್ತಿಗೆ ಅಮ್ಮಾ ಎಂಬ ಕರೆ ಹಿತ್ತಿಲಬಾಗಿಲ ಕಡೆಯಿಂದಲೂ ಇಲ್ಲಾ ಅಂಗಳದಿಂದಲೋ ಕೇಳಿತು ಅಂದರೆ ಅದು ಉಳುಕು ತೆಗಿಸಿಕೊಳ್ಳಲು ಬಂದವರೇ ಎಂಬುದು ಹೇಳದೆಯೇ ಗೊತ್ತಾಗಿ ಬಿಡುತ್ತಿತ್ತು. ಹೇಗೆ ಉಳುಕುತಿತ್ತು ಎನ್ನುವುದು ಹೇಳುವುದು ಕಷ್ಟವಾದರೂ ಉಳುಕಿದಷ್ಟು ಸುಲಭವಲ್ಲ ಆ ನೋವು ಅನುಭವಿಸುವುದು. ಎಲ್ಲಾ ನೋವು ಒಂದೇ ಕಣೆ ನಮಗೆ ಯಾವುದು ಬಂದಿರುತ್ತೋ ಆಗ ಅದೇ ದೊಡ್ಡದು ಅನಿಸುತ್ತೆ ಅಷ್ಟೇ ಅನ್ನುತ್ತಿದ್ದಳು ಅವಳು. ಅದೇನೇ ಇರಲಿ ಈ ಉಳುಕು ತೆಗೆಯುವುದು ಅವಳು ಹೇಗೆ ಕಲಿತಿದ್ದಳೋ ಗೊತ್ತಿಲ್ಲವಾದರೂ ಎಂತಹುದೇ ಉಳುಕಿನ ನೋವಾದರೂ ಅವಳ ಕೈಯಲ್ಲಿ ನೀವಿಸಿಕೊಂಡರೆ ಹೋಗುತ್ತಿದ್ದದ್ದು ಮಾತ್ರ ಹೌದು. ಹಾಗಾಗಿ ಊರಲ್ಲಿ ಯಾರೇ ಕೈ ಕಾಲು ಉಳುಕಿಸಿಕೊಂಡರೆ ಸೀದಾ ಅವಳ ಬಳಿ ಬರುತ್ತಿದ್ದರು. ಕೈಯಲ್ಲೊಂದು ಎಣ್ಣೆಯ ಬಾಟಲಿ. ಅವಳು ಜಗುಲಿಯಲ್ಲೋ, ಹಿತ್ತಿಲಿನ ಕಡುಮಾಡಿನಲ್ಲೋ ಕುಳಿತು ಹಾಗೆ ಬಂದವರಿಗೆ ಎಣ್ಣೆ ಹಚ್ಚಿ ನೀವುತ್ತಿದ್ದಳು. ಹಾಗೆ ನೀವಲು ಶುರುಮಾಡಿದ ಕೆಲವು ಕ್ಷಣಗಳು ಅವರು ನಿಟ್ಟುಸಿರು ಬಿಡುತ್ತಲೋ , ಚೀರುತ್ತಲೋ, ಕಣ್ಣೀರು ಹರಿಸುತ್ತಲೋ ಕುಳಿತಿರುವುದು ನೋಡಿ ಸಂಕಟವಾದರೂ ನೋವಿದ್ದಾಗ ಯಾಕೆ ನೀವಿಸಿಕೊಳ್ಳಲು ಬರಬೇಕು ಎನ್ನಿಸಿ ಕೋಪವೂ ಬರುತಿತ್ತು. ಕೊಂಚ ಹೊತ್ತಿಗೆ ಅವರ ಮುಖದಲ್ಲಿ ಏನೋ ಅನಿವರ್ಚನೀಯ ಆನಂದ ಕಾಣಿಸಿ ಗೊಂದಲ, ಹೊರಡುವ ಹೊತ್ತಿಗೆ ಅವರ ಮುಖದಲ್ಲಿ ಕಾಣಿಸುವ ಕೊಂಚ ನಿರಾಳತೆ. ದಿನವೆರೆಡು ಕಳೆಯುವ ಹೊತ್ತಿಗೆ ಅಮ್
ಬಿದಿರಿನ ಗಳ
- Get link
- Other Apps
ಎಲ್ಲ ಋಣನೂ ಹರ್ಕೋಬೇಕು ಕಣವ್ವ.... ಸುಲಭವಾ ಖಂಡಿತ ಅಲ್ಲ, ತೀರಾ ಕಷ್ಟವೂ ಅಲ್ಲ. ಒಂದು ರೀತಿಯಲ್ಲಿ ಇಲ್ಲಿ ಎಲ್ಲವೂ ಕ್ರಮಬದ್ಧ ಹಾಗೂ ನಿಯಮಬದ್ಧ. ಅದನ್ನು ಅರ್ಥಮಾಡಿಕೊಳ್ಳದೆ ದೂಷಿಸುತ್ತೇವೆ ಅಷ್ಟೇ. ಇದು ಇನ್ನಷ್ಟು ಅರ್ಥವಾಗೋದು ಬಿದಿರಿನ ಗಳ ಓದುವಾಗ. ಮೊಮ್ಮಗನ ಮೇಲಿನ ಅಜ್ಜಿಯ ವ್ಯಾಮೋಹ, ಆ ಪ್ರೀತಿಗೆ ಓಗೊಟ್ಟು ಹೊರಡುವ ಮೊಮ್ಮಗ ದಾರಿಯಲ್ಲಿ ಅನಿರೀಕ್ಷಿತ(?) ಘಟನೆಯಲ್ಲಿ ಸಿಲುಕಿ ಮುಂದಿನ ಅಚ್ಚರಿಯ ಬೆಳವಣಿಗೆಗೆ ಕಾರಣನಾಗುತ್ತಾನೆ. ಅವನ ಆಗಮನ ಇನ್ನೊಂದು ಜೀವದ ಅಂತ್ಯಕ್ಕೆ ಕಾರಣವಾಗುವ ಸೂಚನೆ ಇಡೀ ಕಾದಂಬರಿ ಹೀಗೆ ಇಂಥ ಅನೂಹ್ಯ ತಿರುವುಗಳ ಸಂಗಮ. ಸೂಕ್ಷ್ಮವಾಗಿ ಕುರುಹು ಬಿಡುತ್ತಲೇ , ಹಾಗೆ ಬಿಡುತ್ತಲೇ ಮತ್ತೆ ಮುಚ್ಚಿಟ್ಟುಕೊಳ್ಳುತ್ತಾ ಒಂದು ಊರಿನ ಗ್ರಾಮೀಣ ಬದುಕಿನ ರೀತಿ ನೀತಿಗಳನ್ನು ತಿಳಿಸುತ್ತಾ ಹೋಗುತ್ತದೆ. ತಾಂತ್ರಿಕ ಲೋಕದ ಮೋಹ ಎಲ್ಲರನ್ನೂ ಒಂದಲ್ಲ ಒಂದು ಬಾರಿ ಕಾಡಿರುತ್ತದೆ . ಕೆಲವರು ಆ ಮಾರ್ಗದಲ್ಲಿ ಚಲಿಸಿದರೂ ದಕ್ಕಿಸಿಕೊಳ್ಳುವುದು ಎಲ್ಲೋ ಕೆಲವು ಮಂದಿ ಮಾತ್ರ. ಆ ಲೋಕದ ವ್ಯವಹಾರಗಳೇ ವಿಚಿತ್ರ. ಸ್ವಾತ್ವಿಕತೆ ಉಳಿಸಿಕೊಂಡ ಜೀವಗಳು ಆ ದಾರಿಯನ್ನು ಪೂರ್ಣ ಒಪ್ಪಿಕೊಳ್ಳಲಾಗದೆ ಮೋಹ ಬಿಡಲಾಗದೆ ಚಡಪಡಿಸುತ್ತವೆ. ನರಸಪ್ಪನವರದ್ದು ಇದೆ ತೊಳಲಾಟ. ಆದರೆ ಅವರಿಗೆ ಸಿಕ್ಕ ಗುರುಗಳು ಈ ತೊಳಲಾಟ ಅರ್ಥ ಮಾಡಿಕೊಂಡು ಕೋಟೆಯೊಳಗೆ ಇದ್ದು ಯುದ್ಧ ಮಾಡು ಎಂಬ ಸೂಚನೆ ಕೊಟ್ಟು ಅದಕ್ಕಾಗಿ ತಯಾರಿ ಮಾಡುತ್ತಾರೆ. ನಮ್ಮ ನಮ್ಮ ಮಿತಿಗೆ ತಕ್ಕ ಹಾಗ
- Get link
- Other Apps
ಅಮ್ಮಯ್ಯ ಮಗಳು ಹೆರಿಗೆಗೆ ಬರ್ತಾಳೆ. ಬಾಣಂತನ ನೀವೇ ಮಾಡ್ಬೇಕು ಅಂತ ಯಾರಾದರೂ ಕೇಳಿದರೆ ಕ್ಷಣ ಮಾತ್ರವೂ ಆಲೋಚಿಸದೆ ಅದಕ್ಕೇನು ಆಯ್ತು ಯಾವಾಗ ಹೇಳಿ ಎನ್ನುತ್ತಿದ್ದಳು ಅವಳು. ನನಗೋ ಮೂಗಿನ ತುದಿಯಲ್ಲಿ ಸಿಟ್ಟು. ಮನೆ ಕೆಲಸ ಎಲ್ಲಾ ಬಿಟ್ಟು ಹೊರಡ್ತಾಳೆ ಅನ್ನೋದಕ್ಕಿಂತ ನಾನು ಬಂದಾಗ ಅವಳು ಇರೋಲ್ಲ ಅನ್ನೋದು ಹೆಚ್ಚು ಬಾಧೆಯ ವಿಷಯವಾಗಿರುತ್ತಿತ್ತು. ಅಲ್ಲಿಂದ ಅವಳ ಕೆಲಸ ಶುರುವಾಗುತ್ತಿತ್ತು. ಅದ್ಯಾವುದು ಕಾಯಿ, ನಾರು, ಬೇರು ಸಂಗ್ರಹ ಮಾಡೋದು ಖಾರ ಮಾಡೋದು ಆ ಘಮ ಒಂಥರಾ ಹಿತವಾಗಿದ್ದರೂ ಯಾರು ಕರೆದರೂ ಹೂ ಅಂತ ಹೊರಡ್ತಿಯಲ್ಲ ನಿಂಗೆ ಬುದ್ಧಿ ಇಲ್ವಾ ಎಂದು ರೇಗುತ್ತಿದ್ದೆ. ಪುಟ್ಟಿ ಹೆರಿಗೆ ಅನ್ನೋದು ಸೃಷ್ಟಿ ಕ್ರಿಯೆ ಕಣೆ. ಅದಕ್ಕೆ ಬೇಕಾದ ಆರೈಕೆ ಮಾಡೋ ಅವಕಾಶ ಸಿಕ್ಕಿದ್ರೆ ಅದಕ್ಕಿಂತ ಪುಣ್ಯದ ಕೆಲಸ ಇನ್ನೇನಿದೆ ಹೇಳು ಅನ್ನುತ್ತಿದ್ದಳು. ಅವಳು ಮಗುವಿಗೆ ಎಣ್ಣೆ ನೀರು ಹಾಕುವುದು, ಆರೈಕೆ ಮಾಡುವುದು ಬಾಣಂತನದ ಖಾರ ಮಾಡುವುದರಲ್ಲಿ ಎತ್ತಿದ ಕೈ. ಎಷ್ಟೋ ಸಲ ಎಲ್ಲಿಯದಾರೂ ಸಿಕ್ಕವರು ತಮ್ಮ ಮಕ್ಕಳನ್ನೋ, ಮೊಮ್ಮಕ್ಕಳನ್ನೋ ಕರೆದುಕೊಂಡು ಬಂದು ನಮಸ್ಕಾರ ಮಾಡಲು ಹೇಳಿ ನಿಂಗೆ ಎಣ್ಣೆ ನೀರು ಹಾಕಿದವರು ಇವರೇ ಕಣೋ ಅನ್ನೋವಾಗ ಅವಳ ಕಣ್ಣಂಚು ತೇವವಾಗುತಿತ್ತು. ನಂಗೆ ನಗು ಬರುತಿತ್ತು. ನಿಮ್ಮ ಕೈಯಲ್ಲಿ ಬಾಣಂತನ ಮಾಡಿಸಿಕೊಂಡ ಮೇಲೆ ಕೇಳಬೇಕಾ ಆರಾಮಾಗಿ ಇದಾಳೆ ಅವಳು ಅಂತ ಯಾರಾದರೂ ಹೇಳುವಾಗ ಇವಳಿಗೆ ನೆಮ್ಮದಿ. ಹಾಗಾಗಿ ಎಷ್ಟೇ ಕೆಲಸವಿದ್ದರೂ ತೊಂದರೆಯಿ
- Get link
- Other Apps
ಕುದಿಕುದಿದು, ಉರಿದುರಿದು ಕೋಪ ಮುಗಿಯಿತೋ ಅಥವಾ ಮನೆಗೆ ಸಮಯವಾಯಿತು ಎಂದೋ ಸೂರ್ಯ ತನ್ನ ಬಿಸಿ ಕಳೆದುಕೊಳ್ಳುತ್ತಿದ್ದ.ನಡು ಆಕಾಶದಲ್ಲಿದ್ದವನು ಇಳಿಯಲು ಶುರುಮಾಡಿದ್ದ. ಇಳಿಜಾರಿನಲ್ಲಿ ವೇಗ ಹೆಚ್ಚು ಎನ್ನುವ ಹಾಗೆ ಅವನು ಚಲಿಸುವುದು ಕಾಣಿಸುತ್ತಿತ್ತು. ಒಳಗೂ ಹೊರಗೂ ಒಂದು ರೀತಿಯ ಧಗೆ.ಗಾಳಿಗೂ ತಾಕಿದ ಬಿಸಿ. ಒಳಗಿದ್ದರೆ ಸೆಕೆ ಇನ್ನೂ ಜಾಸ್ತಿ ಹೋಗಿ ಮಾವಿನಮರದ ಕೆಳಗೆ ಆದರೂ ಕುಳಿತರೆ ಜೀವ ತಣ್ಣಗೆ ಆಗಬಹುದೇನೋ ಎನ್ನಿಸಿ ಎದ್ದರೆ ಅದು ಕಾಣಿಸಿತು. ಇಳಿಯುತ್ತಿದ್ದ ಸೂರ್ಯನನ್ನೇ ನೆಟ್ಟ ದೃಷ್ಟಿಯಿಂದ ನೋಡುತ್ತಾ ಸದ್ದಿಲ್ಲದೇ ಕುಳಿತಿತ್ತು ಆ ಬೆಳ್ಳಕ್ಕಿ. ಅದೋ ವಯಸ್ಸಾದ ತೆಂಗಿನ ಮರ. ಒಂದೊಂದೇ ಗರಿಗಳನ್ನು ಕಳಚಿಕೊಂಡು ಮತ್ತೊಂದು ಹೊಸತರ ಜವಾಬ್ದಾರಿ ಹೊತ್ತು ಎತ್ತರಕ್ಕೆ ನಿಂತಿತ್ತು. ಇಳಿಯುವ ಸೂರ್ಯನನ್ನು ದಿಟ್ಟಿಸಲು ಇಳಿವಯಸ್ಸಿನ ಮರದಲ್ಲಿ ಕಾಲೂರುವ ಮುನ್ನ ಅದು ಪ್ರಶಸ್ತವಾದ ಜಾಗವನ್ನು ಆರಿಸಿಕೊಂಡಿತ್ತು.ಮೇಲಿನ ಗರಿಯ ನೆರಳಿನ ಅಡಿಯಲ್ಲಿ ಹೆಚ್ಚು ಅಲುಗಾಡದ ಗರಿಯ ಬುಡದಲ್ಲಿ ನಿಂತಿತ್ತು. ಎತ್ತರದಲ್ಲಿ ನಿಂತಿದ್ದರೂ ಗಾಳಿಯ ಚಲನೆಗೆ, ಗರಿಯ ಅಲುಗಾಟಕ್ಕೆ, ಮರದ ತೂಗುವಿಕೆಗೆ ಎಲ್ಲವಕ್ಕೂ ಹೊರತಾಗಿ ನಿಲ್ಲುವುದೇ ತನ್ನ ಧ್ಯೇಯ ಎಂದು ಅಲುಗಾಡದೆ , ಕಾಲವೇ ಸ್ತಬ್ಧವಾಗಿ ಹೋಗಿದೆಯೇನೋ, ನಿಂತಲ್ಲೇ ಕಲ್ಲಾಗು ಎಂಬ ಶಾಪಕ್ಕೆ ತುತ್ತಾಗಿದೆಯೇನೋ ಅನ್ನಿಸುವ ಹಾಗೆ, ಕಾಲುಗಳು ಪಾತಾಳಕ್ಕೆ ಇಳಿದು ಬೇರು ಬಿಟ್ಟಿದೆಯೇನೋ ಎಂಬ ಹಾಗೆ ಕಿಂಚಿತ್ತೂ ಅಲುಗಾಡದೆ
ಲಾಕ್ ಡೌನ್
- Get link
- Other Apps
ಹೊರಡುವಾಗ ಪರಿಸ್ಥಿತಿ ಇಷ್ಟು ಕ್ಲಿಷ್ಟಕರವಾಗಬಹುದು ಎನ್ನುವ ಕಿಂಚಿತ್ತೂ ಊಹೆಯೂ ಇರಲಿಲ್ಲ. ಒಂದು ಕೇಸ್ ಗೆ ಇಷ್ಟೊಂದು ಪ್ಯಾನಿಕ್ ಆಗಬೇಕಾ ಎನ್ನುವ ಯೋಚನೆಯಲ್ಲಿಯೇ ಊರಿಗೆ ಹೊರಡಲು ತಯಾರಿರಲಿಲ್ಲ. ಯಾವಾಗ ಆದಷ್ಟು ಮನೆಯಿಂದಲೇ ಕೆಲಸ ಮಾಡಿ ಅನ್ನುವ ಆದೇಶ ಬಂತೋ ಆಗ ಕೊಂಚ ಯೋಚಿಸುವ ಹಾಗಾಗಿತ್ತು. ನೋಡು ಹೋಗುವುದಾದರೆ ಎಲ್ಲರೂ ಹೋಗುವ, ಅಬ್ಬಬ್ಬಾ ಅಂದರೆ ಒಂದು ಹದಿನೈದು ದಿನ ಆಗಬಹುದು. ರಜೆಗೆ ಅಪ್ಲೈ ಮಾಡಿ ಬಾ ಇಲ್ಲಾಂದ್ರೆ ಎಲ್ಲರೂ ಒಟ್ಟಿಗೆ ಇಲ್ಲೇ ಇರುವ ಅಂದಿದ್ದೆ. ಅವನಾಗಲೇ ದೇಶ ವಿದೇಶಗಳ ಪರಿಸ್ಥಿತಿ ಅವಲೋಕಿಸುತ್ತಿದ್ದ. ಅಪಾಯದ ಅರಿವು ಕೊಂಚವಿತ್ತು. ಹಾಗಾಗಿ ಊರಿಗೆ ಹೋಗುವ ಎನ್ನುವ ಯೋಚನೆ ಮಾಡಿದ್ದೆವು. ಬಹುಶ ಅವನ ತಲೆಯಲ್ಲಿ ಹೋಗಿ ಬಿಟ್ಟು ಬರುವಾ ಅನ್ನುವ ಯೋಚನೆಯೂ ಇತ್ತೇನೋ. ಹೋಗಿ ಎರಡು ದಿನಕ್ಕೆ ಮೋದಿ ಜನತಾ ಕರ್ಪ್ಯೂ ಅಂದರು. ಮತ್ತೊಂದು ದಿನಕ್ಕೆ ಲಾಕ್ ಡೌನ್. ಊರಿಗೆ ಬರುವಾಗಲೂ ಕೊಂಚ ಆತಂಕವೇ ಇತ್ತು. ದಾರಿಯಲ್ಲಿ ಎಲ್ಲೂ ನಿಲ್ಲಿಸದೆ ಬಂದು ಬಂದ ಕೂಡಲೇ ಬಂದಿರುವ ಮಾಹಿತಿ ಆರೋಗ್ಯ ಇಲಾಖೆಗೆ ತಲುಪಿಸಿ ನೆಮ್ಮದಿಯಾಗಿದ್ದೆವು. ಸದ್ಯ ಬಂದು ಒಳ್ಳೆಯದು ಮಾಡಿದ್ರಿ ಅಂತ ಗೆಳೆಯರು, ಆತ್ಮೀಯರು ಹೇಳುವಾಗ ಆತಂಕ ಕೊಂಚ ಕರಗಿತ್ತು. ಇನ್ನೇನು ಸಹಜಸ್ಥಿತಿಗೆ ಮರಳಬೇಕು ಅನ್ನುವಷ್ಟರ ಹೊತ್ತಿಗೆ ಯುಗಾದಿ ಬಂದು ನಮ್ಮ ಮು.ಮ ಗಳು ಯಾರು ಬೇಕಾದರೂ ಬರಬಹುದು, ಯಾರು ಬೇಕಾದರೂ ಹೋಗಬಹುದು ಎಂದು ಹೇಳಿದರೋ ಆಗ ಊರಿಗೆ ಬಂದ ನೂರಾರು ಜನರನ್ನು ಕ್ವಾರಂ
ಅಯ್ಯಪ್ಪ. (ಉಭಯಭಾರತೀಯರು)
- Get link
- Other Apps
ಬೆಳಗಿನ ಜಾವದ ಸಿಹಿ ನಿದ್ದೆಯಲ್ಲಿದ್ದವರಿಗೆ ಚಳಿಯ ತಡುವಿಕೆಗೆ ಎಚ್ಚರವಾಗಿ ಹೊದ್ದ ಕಂಬಳಿಯನ್ನು ಇನ್ನಷ್ಟು ಬಿಗಿಯಾಗಿ ಎಳೆದು ಕಿವಿಗೆ ಗಾಳಿ ಹೋಗದಂತೆ ಮಾಡುವ ಪ್ರಯತ್ನದಲ್ಲಿರುವಾಗಲೇ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನುವ ಕೂಗು ಕೇಳಿಸುತಿತ್ತು. ಅದಾಗಲೇ ನಾಲ್ಕು ಗಂಟೆ ಆಗಿ ಹೋಯಿತಾ ಎಂದು ಇನ್ನಷ್ಟು ಮುದುರಿ ಮಲಗುವಾಗ ಅರೆ ಅವರಿಗೆ ಚಳಿ ಯಾಕಾಗಲ್ಲ ಎನ್ನುವ ಪ್ರಶ್ನೆ ಕಾಡುತಿತ್ತು. ಮಲೆನಾಡಿನ ಅದರಲ್ಲೂ ಧನುರ್ಮಾಸದ ಚಳಿಯ ಪರಿ ಕೇಳುವುದೇ ಬೇಡ. ಅಲ್ಲಿ ಚಳಿಯನ್ನು ಅಳೆಯುತ್ತಿದ್ದದ್ದೆ ಹೊದೆಯಲು ಎಷ್ಟು ಕಂಬಳಿ ಬೇಕು ಎನ್ನುವ ಆಧಾರದ ಮೇಲೆ. ಡಿಸೆಂಬರಿನ ಆ ಕರುಳು ನಡುಗಿಸುವ ಚಳಿಗೆ ಮೂರು ಕಂಬಳಿಯಾದರೂ ಬೇಕಿತ್ತು. ಇಂಥ ಚಳಿಗಾಲದಲ್ಲಿ ಬ್ರಾಹ್ಮಿ ಮಹೂರ್ತ ದಲ್ಲಿ ಎದ್ದು, ತುಂಗೆಯಲ್ಲಿ ಸ್ನಾನ ಮಾಡಿ ಒಂದು ಪಂಚೆ ಉಟ್ಟು , ಶಲ್ಯ ಹೊದ್ದು ಅಯ್ಯಪ್ಪನ ಸ್ಮರಣೆ ಮಾಡುತ್ತಾ ಬರಿಗಾಲಿನಲ್ಲಿ ದೇವಸ್ಥಾನದವರೆಗೂ ಸುಮಾರು ಒಂದು ಮೈಲಿ ಆ ಕತ್ತಲೆಯಲ್ಲಿ ನಡೆದು ಬರುತ್ತಿದ್ದ ಅವರು ಅಚ್ಚರಿ ಹುಟ್ಟಿಸುತ್ತಿದ್ದರು. ಆ ಚಳಿಯನ್ನು ಅವರು ಎದುರಿಸುತ್ತಿದ್ದದ್ದು ಹೇಗೆ? ಇನ್ನಷ್ಟು ಬೆಚ್ಚಗೆ ಮಲಗಬೇಕು ಎನ್ನುವ ಆಸೆ ಕೊಡವಿ ಏಳುವುದು ಸುಲಭವಾ ಎನ್ನುವ ಪ್ರಶ್ನೆಮೂಡುವುದರ ಜೊತೆಜೊತೆಗೆ ಅವರ ಧೀ ಶಕ್ತಿ ಬೆರಗು ಹುಟ್ಟಿಸುತ್ತಿತ್ತು. ಒಂದು ಹೆಸರು ಅಥವಾ ವ್ರತ ಇಷ್ಟು ಗಟ್ಟಿಗರನ್ನಾಗಿ ಮಾಡಬಹುದಾ.. ಆ ದೇವಾಲಯದ ಆಕರ್ಷಣೆ ಇಷ್ಟು ಸಂಕಲ್ಪ ಶಕ್ತಿ ತುಂಬಬಹುದಾ ಎನ್ನುವ