Posts

Showing posts from August, 2019

ಗೌರೀ

ಹೊಯ್ಯುವ ಮಳೆಗೂ ತುಸು ಸುಧಾರಿಸಿಕೊಳ್ಳುವ ಹೊತ್ತದು. ಒಂದೇ ಸಮನೆ ಸುರಿದರೆ ಮಳೆಯಾದರೂ, ಮಾತಾದಾರೂ ಕೊನೆಗೆ ಪ್ರೀತಿಯಾದರೂ  ರೇಜಿಗೆ ಹುಟ್ಟಿಸುತ್ತದೆ. ನಿಂತರೆ ಸಾಕು ಅನ್ನಿಸುತ್ತದೆ. ಹಾಗಾಗಿ ಅದಕ್ಕೂ ಮೊದಲೇ ಮಳೆ ನಿಧಾನಕ್ಕೆ ಹೊರಡುವ ಸಿದ್ಧತೆ ಮಾಡಿಕೊಳ್ಳುತ್ತದೆ. ಆದೊಮ್ಮೆ ಈಗೊಮ್ಮೆ ಪುಟ್ಟ ಮಳೆ, ನಡುನಡುವೆ ತುಸು ಬಿಸಿಲು, ಮತ್ತೆ ಸಣ್ಣನೆಯ ಮೋಡ, ಮಬ್ಬಿಗಿಂತ ಸ್ವಲ್ಪ ಪ್ರಕಾಶಮಾನವಾದ ಬೆಳಕು ಇದು ಭಾದ್ರಪದದ ಲಕ್ಷಣ. ಬಿಡುವು ಬರೀ ಮಳೆಗಷ್ಟೇನಾ ಎಂದರೆ ಅಲ್ಲ, ಕೆಲಸಕ್ಕೂ ಸ್ವಲ್ಪ ವಿರಾಮ. ನಾಟಿ, ಕಳೆ ಅಂಚು ಕಡಿಯುವುದು ಎಂಬೆಲ್ಲಾ ಕೆಲಸಗಳು ಮುಗಿದು, ಪೈರೂ ದಟ್ಟ ಹಸಿರಿಗೆ ತಿರುಗುವ ಹೊತ್ತು, ಭೋರ್ಗೆರೆದು ಅಬ್ಬರಿಸಿ ಉಕ್ಕುತ್ತಾ ಕೆಂಪು ಕೆಂಪಾಗಿ ಹರಿವ ಹಳ್ಳ, ನದಿಗಳೂ ಮೂಲ ಸ್ವರೂಪಕ್ಕೆ ಮರಳುವ ಹಣಿಯಾಗುವ ಹೊತ್ತು, ಗಿಡಗಳು ಮೈತುಂಬಾ ಹೂ ಬಿಟ್ಟು ಇಡೀ ಪ್ರಕೃತಿಗೆ ಬಣ್ಣ ಬಳಿಯುವ ಸಮಯ, ಪ್ರಕೃತಿಯೇ ಸುಧಾರಿಸಿಕೊಳ್ಳುತ್ತಿದೆಯೇನೋ ಎಂದು ಕಾಣುವ ಹೊತ್ತಿನಲ್ಲಿ ನಡುಮನೆಯ ಗೋಡೆಗೆ ಒರಗಿ ಕಾಲುಚಾಚಿ ಕುಳಿತರೆ ಬಿಸಿಲುಕೋಲಿನ ಹಾಗೆ ಪಕ್ಕನೆ ಮಿಂಚುವ ತವರಿನ ನೆನಪು, ಹೋಗುವ ಹಂಬಲ, ಅಪ್ಪ ಬರುವುದು ಕಾಯುವ ನಿರೀಕ್ಷೆ. ಪ್ರತಿ ಹೆಣ್ಣಿಗೂ ತವರು ಕಾಡುವ ಮಾಯೆ, ಮನುಷ್ಯರ ಪಾಡು ಹಾಗಿರಲಿ ಅಂತ ಪರಶಿವನ ಪತ್ನಿ ಗೌರಿಯನ್ನೇ ತವರಿನ ಮೋಹ ಬಿಟ್ಟಿಲ್ಲ. ಜಗತ್ತೇ ಹೀಗೆ ಸುಧಾರಿಸಿಕೊಳ್ಳುವ ಹೊತ್ತಿಗೆ ಬೆಳ್ಳಂಬೆಳಿಗ್ಗೆ ತವರಿನ ನೆನಪಾಗಿ ಎದ್ದು ಹೊರಟಳಂ

ಸಮರ ಭೈರವಿ

ಅಷ್ಟೂ ಕೇಳಿಸಿಕೊಂಡು ಸುಮ್ನೆ ಬಂದ್ಯಾ, ನಿಂಗೆ ರಕ್ತ ಕುದಿಲಿಲ್ವಾ ಅದೆಂಥಾ ಷಂಡತನ ನಿಂದು ಎಂದು ಶಾಲೆಗೇ ಹೋಗುವಾಗ ರಸ್ತೆ ಬದಿಯ ಮನೆಯಿಂದ ತೂರಿಬಂದ ಮಾತುಗಳು ಕ್ಷಣಕಾಲ ಕಾಲುಗಳನ್ನು ಸ್ತಬ್ಧವಾಗಿಸಿತು. ಒಮ್ಮೆ ಪಕ್ಕದ ಮನೆಯವರಾರೋ ರೇಗಿಸಿದರು ಎಂದು ಅಳುತ್ತಾ ಬಂದಿದ್ದ ನಾಲ್ಕು ವರ್ಷದ ನನಗೂ ಅಳ್ತಾ ಬರೋದಲ್ಲ ಶೋಭಣ್ಣ ತಿರುಗಿಸಿ ಕೊಟ್ಟು ಬರಬೇಕು, ಹೇಡಿ ಆಗಬಾರದು, ಧೈರ್ಯ ಕಲಿಲಿಲ್ಲ ಅಂದ್ರೆ ಹೀಗೆ ಅಳ್ತಾ, ಯಾರಾದರೂ ಸಹಾಯಕ್ಕೆ ಬರ್ತಾರ ಅಂತ ಕಾಯ್ತಾ ಇನ್ನೊಬ್ಬರ ಕಡೆಗೆ ಕೈ ಚಾಚಬೇಕು ನೋಡು ಅಂದಿದ್ದ. ಇಷ್ಟು ದೀರ್ಘದ ಬದುಕಿನ ಉದ್ದಕ್ಕೂ ನನ್ನ ಕಾಡಿದ್ದು, ಕಾಪಾಡಿದ್ದು, ಎದೆಗುಂದದ ಹಾಗೆ ಕಾದದ್ದು ಇವೇ ಮಾತುಗಳು. ಬರೀ ತಾಳ್ಮೆ ಸಹನೆ ಅಷ್ಟೇ ಹೇಳಿಕೊಟ್ಟರೆ ಕಲಿತರೆ ಸಾಲದು ಧೈರ್ಯ ಛಲ ಎರಡೂ ಇರಬೇಕು, ಪೋಷಿಸಬೇಕು ಅಂತ ಕಲಿಸಿದ್ದು ನನ್ನಪ್ಪ... ಇವಷ್ಟೂ ಗುಣಗಳ ಎರಕ ಹೊಯ್ದಂತೆ ಬದುಕುವವರು ತುಂಬಾ ಕಡಿಮೆ. ಆದರೆ ಇವೆಲ್ಲವೂ ಕಾಣಿಸುವುದು ಒಬ್ಬ ಯೋಧನಲ್ಲಿ.  ಇದು ಮತ್ತೆ ಹಸಿರಾಗಿದ್ದು, ಇನ್ನಷ್ಟು ಅರ್ಥವಾಗಿದ್ದು ಸಮರ ಭೈರವಿ ಓದುವಾಗ. ಒಂದು ದೇಶದ ಮಾನಸಿಕತೆಯನ್ನು ಹಾಳು ಮಾಡುವುದಕ್ಕೆ ಹದಿನೈದು ವರ್ಷಗಳು ಸಾಕಂತೆ. ಕೊಂಚವೂ ರಕ್ತಪಾತವಿಲ್ಲದೆ, ಆಯುಧಧ ಹಂಗಿಲ್ಲದೇ ಮೈಯೂ ಮುಟ್ಟದೆ ಅದನ್ನು ಸುಲಭವಾಗಿ ಮಾಡಿಬಿಡಬಹುದು. ನಿನ್ನ ಆಚರಣೆ, ನಂಬಿಕೆ, ವಿದ್ಯೆ ಇವು ಸರಿಯಿಲ್ಲ ಅಂತ ಪದೇ ಪದೇ ಹೇಳುತ್ತಾ ಇನ್ನೆನ್ನೋ ಸುಲಭವಾದುದನ್ನು ತೋರಿಸಿಬಿಟ್ಟರ
ಇವತ್ತೇ ಹೊರಟು ಬಿಡು ಮಳೆ ಸ್ವಲ್ಪ ಕಡಿಮೆ ಆದ ಹಾಗಿದೆ ಅಂತ ಫೋನ್ ಬಂದಾಗ ಹೊರಡುವುದೋ ಬೇಡವೋ ಅನ್ನುವ ಗೊಂದಲಕ್ಕೆ ತೆರೆ ಬಿದ್ದು ಆದದ್ದಾಗಲಿ ಹೊರಟೇ ಬಿಡ್ತೀನಿ ಮತ್ತೆ ಏನಾಗುತ್ತೋ ನೋಡುವ ಎಂದು ಹೊರಟಿದ್ದಾಗಿತ್ತು. ಅದಾಗಲೇ ಉತ್ತರ ಕರ್ನಾಟಕ ಅರ್ಧ ಮುಳುಗಿದ ಸುದ್ದಿ ಕೇಳಿ ನೆಲೆ ಕಳೆದುಕೊಂಡವರ ನೋಡಿ ಸಂಕಟ. ಊರಲ್ಲಿ ಏನಾಗಿದೆಯೋ ಅನ್ನೋ ಆತಂಕ. ಮದುವೆಗಿನ್ನೂ ಒಂದೇ ವಾರ ಹೀಗೆ ಮಳೆ ಹೊಯ್ದರೆ ಹೇಗೆ ನಡೆಯುತ್ತೋ ಅನ್ನುವ ಭಯ. ಇವೆಲ್ಲಗಳನಡುವೆ ಊರಿನ ಮಳೆ ಹೊಳೆ ನೋಡುವ ಸಣ್ಣ ಸಂಭ್ರಮ. ಅಂತೂ ಇಂತೂ ಬಸ್ ಹತ್ತಿ ಕುಳಿತರೆ ಮೊದಲೇ ನಿದ್ದೆ ಬರದದ್ದು ಈಗ ಬರುವುದಾದರೂ ಹೇಗೆ? ದಾರಿಯ ಮಧ್ಯೆ ಸಿಗುವ ವಾಹನಗಳ ಹಾಗೆ ಮಳೆಯೂ ನಡು ನಡುವೆ ಸಿಗುತ್ತಾ, ಕಚಗುಳಿಯಿಟ್ಟು ಮಾತಾಡಿಸುತ್ತಾ ದಾರಿ ಸಾಗುತಿತ್ತು. ಯಾಕೋ ಕುಳಿತು ಕುಳಿತು ಬೆನ್ನು ನೋವು ಎಂದು ಹಾಗೆ ಒರಗುವಾಗ ಮಂಡಗದ್ದೆಯಲ್ಲಿ ದಾರಿ ಕ್ಲಿಯರ್ ಇದೆ ಅನ್ನುವ ಮಾತು ಕೇಳಿ ಇನ್ನಷ್ಟು ಸಮಾಧಾನದಿಂದ ಹಾಗೆ ಒರಗಿ ಗಾಜನೂರು ಬರುತ್ತಿದ್ದ ಹಾಗೆ ಮತ್ತೆ ತುಂಗೆಯ ಅಬ್ಬರ ನೋಡುವ ಮನಸ್ಸಾಗಿ ಎದ್ದು ಕಣ್ಣು ಕೀಲಿಸಿ ಕುಳಿತು ಸಮಯ ಎಷ್ಟು ಎಂದು ನೋಡುವ ಎಂದು ಮಗಳಿಗೆ ಹೊಚ್ಚಿದ್ದ ರಜಾಯಿ ನಿಧಾನಕ್ಕೆ ಸರಿಸಿ  ಹ್ಯಾಂಡ್ ಬ್ಯಾಗ್ ತೆಗೆಯಲು ಹೋದರೆ ಒಮ್ಮೆಗೆ ಎದೆ ಧಸಕ್ಕೆಂದಿತು. ಯಾವತ್ತೂ ಒಮ್ಮೆ ಹತ್ತಿದ ಮೇಲೆ ಕಾಲ ಬುಡದಲ್ಲಿ ಬ್ಯಾಗ್ ಇಟ್ಟರೆ ಇಳಿಯುವಾಗಲೇ ತೆಗೆಯುವ ಸ್ವಭಾವ. ಅವತ್ತೂ ಹಾಗೆ ಕಾಲ ಬುಡದಲ್ಲಿ

ಪಾರಿವಾಳ

ಪಾರಿವಾಳ ಮೊಟ್ಟೆ ಇಟ್ಟಿದೆ ನೋಡಮ್ಮಾ ಅಂತ ಅಹಿ ಕೊಂಚ ಬೆರಗು ಜಾಸ್ತಿ ಖುಷಿಯಲ್ಲಿ ಕೂಗಿದಾಗ  ಹೋಗಿ ನೋಡಿದರೆ ಎರಡು ಪುಟಾಣಿ ಮೊಟ್ಟೆಗಳು ವಾಶಿಂಗ್ ಮಷೀನ್ ಮೇಲೆ ಕಾಣಿಸಿತು. ಪಾರಿವಾಳ ಬರುತ್ತೆ ನೆಟ್ ಹಾಕಿಸಿ ಅಂತ ಮನೆ ಇಂಟೀರಿಯರ್ ಮಾಡುವಾಗ ಹೇಳಿದರೆ ಅಯ್ಯೋ ಬೇಡಾ ಬಿಡಿ ಅಂತ ಹೇಳಿ ಮೂರು ವರ್ಷಗಳ ತನಕ ಹೊರಗಿನಿಂದ ಎಲ್ಲೋ ಒಮ್ಮೊಮ್ಮೆ  ಕಾಣಿಸುತ್ತಿದ್ದ ಪಾರಿವಾಳ ಒಳಗೆ ತಲೆ ಹಾಕಿರಲಿಲ್ಲ.  ಆಮೇಲೆ ನಿಧಾನಕ್ಕೆ ಕಂಬಿಯ ಪಕ್ಕದಲ್ಲಿ ಬಂದು ಕೂರಲು ಶುರು ಮಾಡಿ ಬಾಗಿಲು ತೆಗೆದ ಕೂಡಲೇ ಹಾರಿ ಹೋಗುತ್ತಿದ್ದವು. ಹೊಸ ಪರಿಚಯ ಹಳೆಯದು ಆಗುತ್ತಿದ್ದ ಹಾಗೆ ಸ್ವಲ್ಪ ನಿರಾಳ, ಅಂಜಿಕೆ ಮಾಯವಾಗುವ ಹಾಗೆ ಅಲ್ಲೇ ಕುಳಿತರೂ ಆಮೇಲೆ ನಿಧಾನಕ್ಕೆ ಒಳಗೆ ಬಂದು ಡಸ್ಟ್ಬಿನ್ ನಲ್ಲಿರುವ ಅನ್ನದ ಅಗುಳು, ಕಾಳು ತಿನ್ನಲು ಶುರುಮಾಡಿದವು. ಅವುಗಳ ಹೊಟ್ಟೆಪಾಡು ಏನೋ ಮಾಡ್ಕೋತಾವೆ ಅಂತ ಸುಮ್ಮನಾಗಿದ್ದು ನೋಡಿ ನಿಧಾನಕ್ಕೆ ಬ್ರಿಟಿಷರ ಹಾಗೆ  ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳಲು ಹೊರಟಿದ್ದು ಗೊತ್ತಾಗಲು ಸ್ವಲ್ಪ ಸಮಯವೇ ಬೇಕಾಯಿತು. ಪಾರಿವಾಳಗಳು ಏನು ಮಹಾ ಮಾಡಿಯಾವು ಅನ್ನುವ ನನ್ನ ನಿರ್ಲಕ್ಷ್ಯ ಅವುಗಳ ಎಚ್ಚರಿಕೆಯ ಗಮನಿಸುವಿಕೆ ಎರಡೂ ಸೇರಿ  ಮನೆಯೂ ಮಾಡಿ ಸಂಸಾರವನ್ನೂ ಹೂಡಿಬಿಟ್ಟವು. ಜಾಗದ ಮೇಲೆ ಅಧಿಪತ್ಯವನ್ನೂ ಸ್ಥಾಪಿಸಿಬಿಟ್ಟವು ಮೊದಲೇ ಮಳೆಗಾಲ, ಚುಮು ಚುಮು ಚಳಿ, ಬೀಸುವ ಗಾಳಿ, ಆಗಾಗ ಸುರಿಯುವ ರಭಸಕ್ಕೆ ರಾಚುವ ಹನಿ, ಪಾಪ ಅಮ್ಮ ಅವಕ್ಕೆ ಬೆಚ್ಚಗೆ ಏನಾದರೂ ಮಾಡ

ಸಿದ್ಧಾರ್ಥ್..(ಹೊಸದಿಗಂತ 02.08.19)

ಮೊನ್ನೆಯಿನ್ನೂ ಬಂದ ಬೆಚ್ಚಿ ಬೀಳಿಸುವ ಸುದ್ದಿ ದಟ್ಟ ವಿಷಾದ ತುಂಬಿ ಹೋಗಿದೆ. ಸಾವು ಅಂದರೆ ಹಾಗೆ ಖಾಲಿತನ, ಶೂನ್ಯತನ. ಆ ಕ್ಷಣಕ್ಕೆ ಎಲ್ಲವೂ ಕ್ಷಣಿಕ ಅನ್ನಿಸುವ, ಈ ಬದುಕೇ ಇಷ್ಟೇ ಅನ್ನಿಸುವ ಹಾಗೆ ಮಾಡುತ್ತದೆ. ಯಾಕೆ ಬೇಕು ಹೋರಾಟ ಅನ್ನಿಸುತ್ತದೆ. ಹಾಗಾದರೆ ಈ ಭಾವ ನಿರಂತರವಾ ಅಂದರೆ ಅಲ್ಲ ಹಾಗಾಗಿಯೇ ಇದನ್ನು ಸ್ಮಶಾನ ವೈರಾಗ್ಯ ಅಂತಾರೆ ಅಂತಿದ್ಲು ಅಜ್ಜಿ. ಸಾವು ಕೇವಲ ಖಾಲಿತನ ಹುಟ್ಟಿ ಹಾಕುತ್ತದಾ ಅಂದರೆ ಕೆಲವು ಸಲ ಪ್ರಶ್ನೆಯನ್ನೂ ಹುಟ್ಟಿಹಾಕುತ್ತದೆ. ಅಂತಹದೊಂದು ಗಂಭೀರ ಪ್ರಶ್ನೆಯೊಂದನ್ನು ಸಿದ್ಧಾರ್ಥ್ ಸಾವು ಹುಟ್ಟಿಹಾಕಿದೆ. ಹಾಗೂ ಆ ಪ್ರಶ್ನೆ ಕೇವಲ ಅವರ ಸಾವಿಗೆ ಮಾತ್ರ ಸಂಬಂಧ ಪಡದೆ ಇಡೀ ದೇಶಕ್ಕೆ, ಹಲವಾರು ಉದ್ಯಮಿಗಳಿಗೆ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಂಬಂಧ ಪಟ್ಟಿದೆ. ಅದು ಅವರ ಸಾವಿಗೆ ಕಾರಣ ಇನ್ಕಮ್ ಟ್ಯಾಕ್ಸ್ ಡಿಪಾರ್ಟ್ಮೆಂಟ್ ಎನ್ನುವುದು. ಅದು ನಿಜವಾ.... ಬಹುತೇಕ ಉದ್ಯಮಗಳು ಶುರುವಾಗುವುದು ನದಿಯ ಮೂಲದ ಹಾಗೆ ಚಿಕ್ಕದಾಗಿ. ಸಿದ್ಧಾರ್ಥ್ ಬದುಕು ಸಹ ಆರಂಭವಾಗಿದ್ದು ಆ ಜಿಲ್ಲೆಯಲ್ಲಿಯೇ ಹುಟ್ಟುವ ನೇತ್ರಾವತಿ ನದಿಯ ಹಾಗೆಯೇ. ನದಿಯೊಂದು ಹರಿಯುತ್ತಾ ಹೋದ ಹಾಗೆ ತೊರೆ, ಹಳ್ಳ, ಒಡ್ಡು ಬಂದು ಸೇರಿ ನಿಧಾನಕ್ಕೆ ತನ್ನ ಪಾತ್ರ ಹರಿವು ಹೆಚ್ಚಿಸಿಕೊಳ್ಳುವ ಹಾಗೆಯೇ ಉದ್ಯಮವೂ ವಿಸ್ತಾರವಾಗುತ್ತಾ ಹೋಗುತ್ತದೆ. ಯಾವುದೇ ಉದ್ಯಮವೂ ಸಹ ಸಾಲ ತೆಗೆದುಕೊಳ್ಳದೆ ನಡೆಯುವುದಿಲ್ಲ. ಪಡೆಯುವ ಸಾಲ ನದಿಗೆ ಬಂದು ಸೇರುವ ಇತರ ಜಲಮೂಲದ ಹಾಗೆ