Posts

Showing posts from November, 2018

ಜೀವನವದೊಂದು ಕಲೆ

ಜೀವನವದೊಂದು ಕಲೆ; ಕಲೆಯ ಕಲಿಸುವುದೆಂತು? । ಸಾವಿರದ ನಿಯಮ ಯುಕ್ತಿಗಳನೊರೆದೊಡೆಯುಂ ॥ ಆವುದೋ ಕುಶಲತೆಯದೊಂದಿರದೆ ಜಯವಿರದು । ಆ ವಿವರ ನಿನ್ನೊಳಗೆ - ಮಂಕುತಿಮ್ಮ !! ಬದುಕಿನ ಬಗ್ಗೆ ಡಿ.ವಿ.ಜಿ ಯವರು ಬರೆದ ಅಧ್ಭುತ ಸಾಲುಗಳು ಇವು. ಜೀವನ ಒಂದು ಕಲೆ. ಅದನ್ನು  ಕೊಳೆಯ ಕಲೆಯಾಗಿಸಿಕೊಳ್ಳದೇ ಕಲೆಯ  ಕಲೆಯಾಗಿಸಿ ಕೊಳ್ಳುವುದು ಸಹ ಒಂದು ಕಲೆ. ಕಲೆಯೆಂದರೆ ಕೇವಲ ಲಲಿತಕಲೆಗಳು ಮಾತ್ರವಲ್ಲ, ಬದುಕನ್ನ ಕಲೆಯಾಗಿಸಿಕೊಳ್ಳುವಲ್ಲಿ ಅವುಗಳು ಮೆಟ್ಟಿಲು. ಆದರೆ ಬದುಕೇ ಕಲೆಯಾದರೆ ಅದಕ್ಕಿಂತ ಸಾರ್ಥಕತೆ ಇನ್ನೇನಿದೆ? ಹಾಗಾದರೆ ಬದುಕನ್ನ ಕಲೆಯಾಗಿಸಿಕೊಳ್ಳುವುದು ಹೇಗೆ? ಅನ್ನುವುದನ್ನೇ ಜೀವನವೊಂದು ಕಲೆ ಎನ್ನುವ ಪುಸ್ತಕ ಹೇಳುತ್ತದೆ. ಕಲೆಯಾಗಿಸಿಕೊಳ್ಳುವ ಪ್ರಯತ್ನಕ್ಕೆ ಪುಟ್ಟ ಹಣತೆಯಾಗುತ್ತದೆ. ದಾರಿ ತೋರುವ ಸೊಡರಾಗುತ್ತದೆ. ಕಲೆ ಎಂದರೆ ಸೌಂದರ್ಯ, ಕಲೆ ಎಂದರೆ ಪರಮಾನಂದ,  ಕಲೆ ಎಂದರೆ ಪರಿಪೂರ್ಣತೆ. ಪರಿಪೂರ್ಣತೆ ಸುಲಭಕ್ಕೆ ದಕ್ಕುವುದಿಲ್ಲ. ಹಾಗಾಗಿಯೇ ಯಾವ ನಿಜವಾದ ಕಲಾಸಾಧಕನೂ ತಾನು ಪರಿಪೂರ್ಣ ಎಂದು ಬೀಗುವುದಿಲ್ಲ. ಬದುಕು ಕಲೆ ಎರಡೂ ಸಾಗರದಂತೆ. ಅಗಾಧ. ಹಾಗಾಗಿ ಬಿಂದು ಮಾತ್ರವಾಗಿ ಅದರಲ್ಲಿ ಸೇರಿ ಹೋಗುವುದಷ್ಟೇ ನಮಗುಳಿದದ್ದು. ಹಾಗೆ ಬಿಂದುವಾಗಿ ಸೇರಿಹೊಗುವುದು ಹೇಗೆ, ಸೃಷ್ಟಿಯಲ್ಲಿ ಒಂದಾಗುವುದು ಹೇಗೆ? ಎನ್ನುವುದರತ್ತ ಬೆಳಕು ಚೆಲ್ಲುವುದೇ ಈ ಕೃತಿಯ ಉದ್ದೇಶವಾ? ಓದಿದ ಮೇಲೆ ಅದು ಅವರವರಿಗೆ ದಕ್ಕುವ ಉತ್ತರ ಹಾಗೂ ಕಂಡುಕೊಳ್ಳುವ ಬೆಳಕಿ

ಫೇಸ್ಬುಕ್ ಮಾಯಾಜಾಲ

ತಿಂಡಿ ತಿಂದು ಆರಾಮಾಗಿ ಕಾಫಿ ಕುಡಿಯುತ್ತಾ ಕುಳಿತಿರುವಾಗಲೇ  ಫೋನ್ ರಿಂಗಾಯಿತು. ಎತ್ತಿ ಹಲೋ ಅನ್ನುವುದರೊಳಗೆ ಬೇಗ ಬಾ ಮಾತಾಡಬೇಕು ಅನ್ನುವ ಅಪ್ಪಣೆ. ಏನಾಯ್ತೆ ಎನ್ನುವುದರೊಳಗೆ ಫೋನ್ ಮೌನವಾಗಿತ್ತು. ಏನಾಯ್ತೋ ಅನ್ನುವ ಆತಂಕದಲ್ಲಿ ಧಾವಿಸಿದವಳ ಎದುರು ಮೊಬೈಲ್ ಪರದೆ ಹಿಡಿದಳು... ಸಮಯ ಕಳೆಯಲು ಹೊಸತೊಂದು ಮಾರ್ಗ ಸಿಕ್ಕಿತ್ತು. ಮದುವೆಯಾದ ಮೇಲೆ ಅತ್ತೆಯ ಮನೆಗೆ ಅಡಿಯಿಡುವ ನವ ವಧುವಿನಂತೆ ಕೊಂಚ ಆತಂಕ, ಸ್ವಲ್ಪ ಬೆರಗು, ತುಸು ಕುತೂಹಲ, ಅವ್ಯಕ್ತ ಪುಳಕ, ಹೊತ್ತು ಫೇಸ್ಬುಕ್ ಪ್ರವೇಶಿಸಿದ್ದಳು.  ಒಮ್ಮೆ ಆ ಮಾಯಾಜಾಲಕ್ಕೆ ಕಾಲಿಟ್ಟು ಒಳಬಂದ ಮೇಲೆ ಗಡಿಯಾರದ ಮುಳ್ಳುಗಳೂ ಓಡುತ್ತವೇನೋ ಅನ್ನಿಸುವ ಹಾಗೆ ಸಮಯ ಉರುಳಿ ಹೋಗುತಿತ್ತು. ಕೈ ಬೆರಳ ತುದಿಯಲ್ಲಿ ಅಸಂಖ್ಯಾತ ಜನರೂ, ವೈವಿಧ್ಯಮಯ ವಿಷಯಗಳು, ಹೊಸ ಸ್ನೇಹ, ಹೊಸ ಬಂಧ ಹೀಗೆ ಹೊಸತು ಎಲ್ಲೆಲ್ಲೂ ಆವರಿಸಿ ಬದುಕೂ ಹೊಸತೆನಿಸಿತ್ತು. ಹಂಚಿಕೊಳ್ಳಲು ವೇದಿಕೆಯಾಗಿ ಜೊತೆಯಾಗಿತ್ತು. ಕಾಲ ಪರಿವಿಲ್ಲದೆ ಸರಿದು ಹೋಗುತಿತ್ತು. ಅಪರಿಚಿತರಿಬ್ಬರೂ ಫೇಸ್ಬುಕ್ ನಲ್ಲಿ ಪರಿಚಿತರಾಗಲು ಬಹಳ ಸಮಯವೇನೂ ಬೇಕಾಗಿರಲಿಲ್ಲ. ಲೈಕ್ ಕಾಮೆಂಟ್ ಗಳ ಹೊಸ್ತಿಲು ದಾಟಿ  ಮೆಸ್ಸೆಂಜರ್ ಬಾಗಿಲು ತೆರೆದು ಬಂದ  ಸ್ನೇಹ ಮೊಬೈಲ್ ನ ಕಾಂಟಾಕ್ಟ್ ಲಿಸ್ಟ್ ನಲ್ಲಿ ಜಾಗ ಪಡೆದಿತ್ತು. ಮಾತು, ನಗು, ಓಡಾಟ, ಗಾಸಿಪ್ ಎಲ್ಲವೂ ಮಳೆಗಾಲದಲ್ಲಿ  ದಬ ದಬನೆ ಧುಮ್ಮಿಕ್ಕುವ ಜಲಪಾತದಂತಿತ್ತು.  ಸುರಿಯುವ  ಸಂಭ್ರಮದಲ್ಲಿ  ಬೇಸಿಗೆ ಬಂತು

ಮೀ ಟೂ

ದಿನದಿನಕ್ಕೂ ಸದ್ದು ಮಾಡುತ್ತಿರುವ ಮೀ ಟೂ ಅಭಿಯಾನ ಕ್ಷಣ ಕ್ಷಣಕ್ಕೂ ತೆಗೆದುಕೊಳುತ್ತಿರುವ ತಿರುವು ಮಾತ್ರ ಗೊಂದಲ ಹುಟ್ಟಿಸುತ್ತಿದೆ. ಬಳಸಿಕೊಳ್ಳುವಿಕೆ ಇವತ್ತಿಗೆ ಹೊಸದಲ್ಲ. ಘಾತುಕತನ ಅನ್ನೋದು ಅಂದಿನಿಂದಲೂ ಇದೆ. ಮುಂದುವರಿದ, ಅಭಿವ್ಯಕ್ತಿ ಸ್ವಾತಂತ್ರ್ಯ, ನನ್ನ ಬದುಕು ನನ್ನ ಇಚ್ಚೆ ಅನ್ನುವ ಈ ಕಾಲದಲ್ಲೂ ಇದೆ. ಹಾಗೆ ಹೇಳುವುದಾದರೆ ಈಗ ಸ್ವಲ್ಪ ಹೆಚ್ಚೇ ಅನ್ನಿಸುವಷ್ಟು ಇದೆಯಾ? ರಸ್ತೆಯಲ್ಲಿ ಹೋಗುವಾಗ, ಬಸ್ಸಿನಲ್ಲಿ ಕುಳಿತಾಗ, ಫಿಲಂ ಥಿಯೇಟರ್, ಶಾಲಾ ಕಾಲೇಜ್,  ಜನ ಜಂಗುಳಿ ಸೇರುವ ಕಡೆ ಕಾಮುಕರು ಇದ್ದೇ ಇರುತ್ತಾರೆ. ಅವರಿಗೆ ಆ ಕ್ಷಣಕ್ಕೆ ಹೆಣ್ಣು ಅನ್ನುವ ಒಂದು ಜೀವ ಸಾಕು. ಹಸಿದ ಹೆಬ್ಬುಲಿಗಳ ಹಾಗೆ ವರ್ತಿಸುತ್ತಾರೆ. ಕಾಮಾತುರಾಣಂ ನ ಭಯಂ ನ ಲಜ್ಜಾಂ ಅನ್ನೋದು ಅಕ್ಷರಶಃ ಅರಿವಿಗೆ ಬರುತ್ತದೆ. ಆದರೆ ಬಲಿಯಾದವರ ಪರಿಸ್ಥಿತಿ.. ಕೆಲವೊಮ್ಮೆ ಯಾರೂ ಎನ್ನುವುದು ಅರಿವಿಗೆ ಬರದೇ ಹೋಗುವ ಸಾಧ್ಯತೆಗಳೂ ಇರುತ್ತವೆ. ಹಾಗಾಗಿ ಅಲ್ಲಿ ಆಗ ದನಿ ಎತ್ತಲಿಲ್ಲ ಎನ್ನುವುದು ಹಾಸ್ಪಾಸ್ಪದ ಮಾತ್ರವಲ್ಲ ಅಮಾನುವಿಯ ಕೂಡಾ. ಆದರೆ ಉದ್ಯೋಗದ ಸ್ಥಳದಲ್ಲಿ ಇಂಥ ಪರಿಸ್ಥಿತಿ ಎದುರಾದಾಗ ಅಲ್ಲಿ ವ್ಯಕ್ತಿ ಯಾರೆಂದು ಗೊತ್ತಿರುತ್ತದೆ. ಅನಿವಾರ್ಯತೆ ಹಾಗೂ ಅಸಹಾಯಕತೆ ಕೆಲವೊಮ್ಮೆ ಉಸಿರುಬಿಗಿ ಹಿಡಿದು ನೋಡಿಯೂ ನೋಡದಂತೆ ಇರುವ ಹಾಗೆ ಆಗುವ ಆಗುತ್ತದೆ ಎನ್ನುವುದು ಸತ್ಯವಾದರೂ ಉಸಿರು ಎತ್ತಬೇಕು ಎನ್ನುವುದು ಅಷ್ಟೇ ನಿಜ. ಆದರೆ ಅಲ್ಲಿ ಹಾಗೆ ಎತ್ತಿದ ಉಸಿರಿಗೆ ಶಕ್