Posts

Showing posts from November, 2017

ರಕ್ತರಾತ್ರಿ.

ಕಂಬನಿ ತುಂಬಿ ಮಬ್ಬಾದ ಕಣ್ಣುಗಳಿಂದಲೇ ಎತ್ತಿಕೊಂಡಿದ್ದು ರಕ್ತರಾತ್ರಿ. ಹೆಸರೇ ಭೀಭತ್ಸ ಅನ್ನಿಸೋ ಹಾಗಿತ್ತು. ರಾತ್ರಿ ಇರೋದೇ ವಿಶ್ರಾಂತಿಗೆ ಅನ್ನಿಸಿದರು ಯಾವ್ಯಾವುದಕ್ಕೆಲ್ಲಾ ವಿಶ್ರಾಂತಿ ಸಿಗುತ್ತೆ ಅನ್ನೋದರ ಲೆಕ್ಕ ಹಾಕಿದರೆ ಕೆಲವೊಮ್ಮೆ ಮೈ ಜುಮ್ ಅನ್ನುತ್ತೆ. ತ.ರಾ.ಸು ವೈಶಿಷ್ಟ್ಯವೇ ಅವರು ಇಡುವ ಹೆಸರುಗಳು. ಇಡೀ ಪುಸ್ತಕದ ಆಶಯವನ್ನು, ಹೂರಣವನ್ನು ಒಂದು ಪದದಲ್ಲಿ ಹೇಳುವುದಿದೆಯಲ್ಲ ಅದು ಸುಲಭ ಸಾಧ್ಯವಲ್ಲ. ಅಲ್ಲಿ ಶುರುವಾದ ನೆತ್ತರಿನ ದಾಹ ಇಲ್ಲೂ ಮುಂದುವರಿಯುತ್ತದೆಯೇನೋ  ಅನ್ನೋ ಭಾವದಲ್ಲೇ ಪುಸ್ತಕ ಬಿಡಿಸಿದೆ. ಏನೇ ಘಟಿಸಿದರೂ ಪ್ರಕೃತಿ ಎಷ್ಟು ಸಹಜವಾಗಿ ತೆಗೆದುಕೊಂಡು ತನ್ನ ಪಾಡಿಗೆ ತಾನು ತನ್ನ ಕೆಲಸ ನಿರ್ವಹಿಸುತ್ತದೆ. ಯೋಚಿಸುವ, ಬುದ್ಧಿ ಇರುವ ಮನುಷ್ಯ ಮಾತ್ರ ಆಗಿ ಹೋಗಿದ್ದಕ್ಕೆ ಕೊರಗುತ್ತಾನೆ, ಹಳಹಳಿಸುತ್ತಾನೆ, ಕೆಲವೊಮ್ಮೆ ತನ್ನ ಕರ್ತವ್ಯವನ್ನೂ ಮರೆತುಬಿಡುತ್ತಾನೆ. ಒಣ ವೇದಾಂತವನ್ನು ಧರಿಸಿ ಕುರುಡನಾಗುತ್ತಾನೆ. ಜಗತ್ತಿನಲ್ಲಿ ಕಣ್ಣಿಲ್ಲದ ಕುರುಡರಿಗಿಂತ ಕಣ್ಣಿರುವ ಕುರುಡರೇ ಜಾಸ್ತಿಯೇನೋ. ಅಂಥಹ ಕುರುಡುತನದಿಂದ, ದುಃಖಕ್ಕೆ ವೇದಾಂತದ ಹೊದಿಕೆ ಹೊಚ್ಚಿ ಕುಳಿತ ಲಿಂಗಣ್ಣ ನಾಯಕನೂ ಎಚ್ಚರವಾಗುವ ಅನಿವಾರ್ಯತೆ ಎದುರಾಗುತ್ತದೆ. ಮನಸ್ಸಿನಲ್ಲಿ ಅದುಮಿಟ್ಟ ಯಾವ ಬಯಕೆಗಳೂ ಸಾಯುವುದಿಲ್ಲ. ಅದು ಸಮಯಕ್ಕಾಗಿ ಕಾಯುತ್ತದೆ. ಅಲ್ಲಿಯವರೆಗೂ ಅದು  ನಮ್ಮ ನಿರೀಕ್ಷೆಯನ್ನೂ ಮೀರಿ ಬೆಳೆದಿರುತ್ತದೆ. ಯಾವದೂ ಒಳಗೆ ಉಳಿಯುವುದಿಲ್ಲ ಒಂದ

ಕಂಬನಿಯ kuyilu

ದುರ್ಗದ ಬೆಟ್ಟ ಇಳಿಯುವಾಗಲೇ ನಿರ್ಧರಿಸಿದ್ದೆ. ಇದರ ಕುರಿತು ಬಂದಿರುವ ಅಷ್ಟೂ ಕಾದಂಬರಿ ಓದಲೇ ಬೇಕು ಅಂತ. ಕಲ್ಲುಗಳಿಗೆ ಮಾತು ಬರಬಾರದಿತ್ತಾ ಅಂತ ಯೋಚಿಸುತ್ತಾ ಬಂದವಳಿಗೆ ಅವುಗಳಿಗೆ ದನಿಯಾದ ತ.ರಾ.ಸು ಸಿಕ್ಕಿದ್ದು. ಮೊದಲ ಪುಸ್ತಕವೇ ಕಂಬನಿಯ ಕುಯಿಲು. ಎತ್ತಿಕೊಳ್ಳುವಾಗಲೇ ಏನೋ ಸಂಕಟ, ಅವ್ಯಕ್ತ ವೇದನೆ. ಮಧ್ಯಾನ ಕೆಲಸ ಮುಗಿಸಿ ಹಿಡಿದವಳು ಪುಟ ತಿರುಗಿಸಿ ಕೆಳಗಿಟ್ಟಾಗ ಕತ್ತಲಾಗಿತ್ತು, ಹೊರಗೂ ಒಳಗೂ... ಶುರುವಾಗೋದೇ ಕಂಬನಿಯ ಮಳೆಯಿಂದ.ಇದ್ದಕ್ಕಿದ್ದಂತೆ ಸುಳಿವೇ ಕೊಡದೇ ಆಕ್ರಮಣ ಮಾಡಿ ನಾಯಕರ ಮೇಲೆ ವಿಜಯ ಸಾಧಿಸುವ ಸಾವು, ಆ ಸಾವು ಮೂಡಿಸುವ ದುಗುಡದ ಕಾರ್ಮೋಡ, ಕವಿಯುವ ಮಬ್ಬು, ಸುರಿಯುವ ದುಃಖದ ಆಶ್ರುಗಳ ಧಾರೆ, ಮೊಳಕೆಯೊಡೆಯುವ ಅಧಿಕಾರದ ಆಸೆಯ ಹೆಮ್ಮರ. ಬದುಕಿನ ವೈಚಿತ್ರ್ಯವೇ ಅದೇನೋ.. ಒಂದು ಸಾವು ಮುಗಿಯುತ್ತಿದ್ದಂತೆ ದೇಹವನ್ನು ಮೊದಲು ದಹಿಸುವುದೇ ಅಧಿಕಾರದ ಜ್ವಾಲೆ.. ಉತ್ತರಾಧಿಕಾರಿಯ ಹುಟ್ಟು.  ಸಿಂಹಾಸನವೆಂದರೆ ಕೇದಿಗೆಯ ಹೂ ಇದ್ದಂತೆ.  ಕುಟಿಲತೆಯ ಪೊದೆಗಳ ನಡುವೆ, ಮುಳ್ಳುಗಳ ಹಂದರದಲ್ಲಿ, ಅಧಿಕಾರದಾಸೆಯ ಸರ್ಪದೊಡಲಿನ ಸುತ್ತ ನಗುವ ಹೂ ಅದು. ರಕ್ತದಲ್ಲಿ ಕಟ್ಟಿದ ಕೋಟೆ ರಕ್ತದಲ್ಲಿ ಮುಳುಗುತ್ತದೆ, ಕತ್ತಿಯಲ್ಲೇ ಬಿತ್ತಿದುದು ಕತ್ತಿಯಲ್ಲೇ ಕೊಯಿಲಾಗುತ್ತದೆ ಅನ್ನುವ ನಾಯಕರ ಮಾತು ಅದೆಷ್ಟು ಸೂಚ್ಯ. ಯಾವುದರಿಂದ ಆರಂಭಿಸುತ್ತೆವೋ, ಎಲ್ಲಿಂದ ಶುರುವಾಗುತ್ತೋ ಅಲ್ಲಿಗೆ ತಂದು ನಿಲ್ಲಿಸುತ್ತದೆ ಪ್ರಕೃತಿ. ಚಕ್ರದ ಚಲನೆಯೇ ಹಾಗ

ಮರಳು ಸೇತುವೆ.

ಮರಳು ಸೇತುವೆ ಅಂದಾಗಲೇ ಕೈ ಅದರೆಡೆಗೆ ಹೋಗಿ ಬಾಚಿ ಎತ್ತಿಕೊಂಡಿತ್ತು. ಈ ತ.ರಾ.ಸು ಕಾದಂಬರಿಯ ಹೆಸರುಗಳೇ ಹಾಗೆ ಕಣ್ಣನ್ನು ತಕ್ಷಣ ಸೆಳೆಯೋದು ಮಾತ್ರವಲ್ಲ ಇಡೀ ಪುಸ್ತಕದ ವಿಸ್ತಾರವನ್ನು ಸೂಕ್ಷ್ಮವಾಗಿ ಹೇಳಿಬಿಡುತ್ತದೆ. ಇದು ಅರ್ಥವಾಗಿದ್ದು ಬಿಡುಗಡೆಯ ಬೇಡಿ ಪುಸ್ತಕದ ಕುರಿತು ಬರೆದ ಅನಿಸಿಕೆಯಲ್ಲಿ ಮಾಲಿನಿ ಅಕ್ಕ ಹೆಸರೇ ಹಾಗಿದೆ ನೋಡು ಅಂದಾಗ. ಅರೆ ಹೆಸರು ಇಷ್ಟವಾಗಿತ್ತು ಆದ್ರೆ ಇಡೀ ಪುಸ್ತಕದ ಆಶಯ ಹೇಗೆ ಬಿಂಬಿತವಾಗಿದೆ ಅನ್ನೋದು ಗಮನಿಸಿಯೇ ಇರ್ಲಿಲ್ಲ ಅಂತ ಆಶ್ಚರ್ಯದ ಜೊತೆಗೆ ಮಾಲಿನಿ ಅಕ್ಕನ ಸೂಕ್ಷ್ಮತೆ ಬಗ್ಗೆ ಬೆರಗು ಸಹ. "ಎಲ್ಲವುದಕ್ಕೂ ಮುಕ್ತಾಯವಿರುವಂತಯೇ, ಒಂದು ಆರಂಭವೂ ಇದೆ ಅನ್ನೋ ಸಾಲಿಂದಲೇ ಶುರುವಾಗುವ ಕಾದಂಬರಿ ಮುಂದೆ ಓದದಂತೆ ಒಂದು ಕ್ಷಣ ತಡೆ ಹಿಡಿದಿದ್ದು ಹೌದು. ಅರೆ ಹೌದಲ್ವಾ ನಂಗೆ ಯಾಕೆ ಹೀಗಾಗುತ್ತೆ ಅನ್ನೋ ಎಷ್ಟೋ ಪ್ರಶ್ನೆಗಳಿಗೆ ಇದೊಂದು ಸಾಲು ಉತ್ತರ ಕೊಡುತ್ತಲ್ವಾ, ಯಾವುದೋ ತಿರುವಿನಲ್ಲಿ ನಿಂತು ಕಂಗಾಲಾಗುವ ಮುನ್ನ ಆರಂಭವನ್ನು ಒಮ್ಮೆ ಅವಲೋಕಿಸಿದರೆ ಮುಂದಿನ ದಾರಿ ನಿಚ್ಚಳವಾಗಬಹುದೇನೋ, ಅಥವಾ ಕೊನೆಪಕ್ಷ ನಡೆಯಲು ಕಾಲಿಗೆ ಕಸುವಾದರೂ ತುಂಬಬಹುದೇನೋ. ಯಾಕೆಂದರೆ ಬದುಕು ಅನಿರೀಕ್ಷಿತ ತಿರುವಿನಲ್ಲಿ ತಂದು ನಿಲ್ಲಿಸಿಬಿಡುತ್ತದೆ,  ವಿನಾಕಾರಣ ಅನುಭವಿಸವ ಹಾಗೆ ಮಾಡುತ್ತೆ ಅನ್ನೋ ನಮ್ಮ ಯೋಚನೆಯೇ ತಪ್ಪು, ಅಕಾರಣವಾಗಿ ಯಾವುದೂ ಜರುಗುವುದಿಲ್ಲ  ಅನ್ನೋದಕ್ಕೆ ಪುನಃ ಪುನಃ ಇಂಥ ಹಲವಾರು ಕಾರಣಗಳು ಪುಷ್ಟಿ ಕೊಟ್ಟ
ತೋರಿಸಿ ಕೊಂಡು ಅವರು ಕೊಟ್ಟ ಔಷಧಿ ಕೊಟ್ಟರೂ ಅಹಿಯ  ನೋವು ಮಾತ್ರ ಕಡಿಮೆಯಾಗಲೇ ಇಲ್ಲ. ಜೊತೆಗೆ ವೊಮಿಟ್. ಕೊನೆಗೆ ಬೇರೆ ದಾರಿ ಕಾಣದೆ ಮತ್ತೆ ಕರೆದುಕೊಂಡು ಹೋದರೆ ಇಂಜೆಕ್ಷನ್ ಕೊಟ್ಟು ಒಂದೆರೆಡು ಗಂಟೆ ನೋಡೋಣ, ಮೋಶನ್ ಆದ್ರೆ ಸರಿ ಹೋಗಬಹುದು ಅಂತ ಹೇಳಿ ಅಡ್ಮಿಟ್ ಮಾಡ್ಕೊಂಡ್ರು. ಅದಾಗಲೇ ನೋವು ಶುರುವಾಗಿ ದಿನವಾಗಿತ್ತು. ತೀರಾ ಸುಸ್ತಾಗಬಾರದು ಅಂತ ಡ್ರಿಪ್ ಕೂಡ ಹಾಕಿದ್ದಾಯ್ತು. ಅಬ್ಬರದ ಅಲೆಗಳಿಗೆ ಸುಸ್ತಾಯಿತೇನೋ ಎಂಬಂತೆ ಬಡಿಯುವುದು ನಿಧಾನಕ್ಕೆ ಒಂದು ಹದಕ್ಕೆ ಬರತೊಡಗಿತು.  ಡ್ರಿಪ್ ಹನಿ ಒಳಕ್ಕೆ ಇಳಿಯುತಿದ್ದಂತೆ ಅವಳೂ ಸ್ವಲ್ಪ ನಿರಾಳವಾಗುತ್ತಿದ್ದಳು. ಆದರೂ ಏನೋ ಆತಂಕ. ಆಗಾಗ ಒಮ್ಮೆ ಹಿಂಡಿದಂತೆ ಬರುವ ನೋವು ಅವಳಿಗೆ ಸುಧಾರಿಸಿಕೊಳ್ಳಲೇ ಸಮಯ ಹಿಡಿಯುವ ಹಾಗೆ ಮಾಡಿತ್ತು. ಸದ್ಯ ಹಾಸ್ಪಿಟಲ್ ಒಳಗೆ ಇದ್ದೇವೆ ಅನ್ನೋ ನಂಬಿಕೆ ಒಂದೇ ಆ ಕ್ಷಣಕ್ಕೆ ಧೈರ್ಯ ತುಂಬುತ್ತಿತ್ತು. ಹನಿ ಹನಿಯಾಗಿ ಇಳಿಯುವ ಅದನ್ನೇ ಗಮನಿಸುತ್ತಾ ಇದ್ದೆ  ನೀರವ ರಾತ್ರಿಯಲಿ ಟಪ್ ಟಪ್ ಬೀಳುವ ಡ್ರಿಪ್ ಸಹ ಇಷ್ಟು ಸದ್ದು ಮಾಡಬಲ್ಲದಾ ಹೊರಗಿನ, ಒಳಗಿನ  ಗೌಜಿನಲ್ಲಿ ಕೇಳದೆ ಹೋಗುವ ಸದ್ದುಗಳೆಷ್ಟು? ಕೈ ಅಲುಗಾಡಿಸದೆ ನಿದ್ದೆ ಹತ್ತುವ ಹಾಗಿದ್ದ ಅವಳ ಮುಖವನ್ನೇ ಆಗಾಗ ದಿಟ್ಟಿಸುವ, ಹನಿ ಹನಿಯಾಗಿ ಇಳಿಯುವ ಡ್ರಿಪ್ ಅನ್ನು ಎಣಿಸುವ ವಿನಃ ಮತ್ತೇನು ತಾನೇ ಸಾಧ್ಯವಿತ್ತು. ಆಗಾಗ ಸುರಿಯುವ ಮಳೆಯಂತೆ ಬರುವ ನೋವಿನ ಕಾರಣ ಹುಡುಕಲು ಸ್ಕ್ಯಾನ್ ಮೊರೆ ಹೋಗಿದ್ದಾಯಿತು. ಮೈಲ್ಡ್
ಅಮ್ಮಾ ಹೊಟ್ಟೆನೋವುತ್ತೆ ಅಂತ ಬೆಳಗಿನ ಜಾವವೇ ಎಬ್ಬಿಸಿದವಳಿಗೆ ನೀರು ಕುಡಿದು ಮಲಕ್ಕೋ ಕಂದ ಹೋಗುತ್ತೆ ಅಂತ ಹೊಟ್ಟೆಗೆ ತುಪ್ಪ ಹಚ್ಚಿ ಹೊದಿಕೆ ಹೊದ್ದಿಸಿದವಳಿಗೆ ಮತ್ತೆ ನಿದ್ದೆ ಬರಲಿಲ್ಲ. ಹೂ ಅಂದು ತಿರುಗಿ ಮಲಗಿದವಳನ್ನೇ ದಿಟ್ಟಿಸುತಿದ್ದೆ. ನಿನ್ನೆ ಸ್ಕೂಲ್ ಡೇ ಲೇಟ್ ಆಗಿ ತಿಂದಿದಕ್ಕೆ ಎಲ್ಲೋ ಗ್ಯಾಸ್ ಫಾರಂ ಆದ ಆಗಿರಬಹುದಾ... ಇನ್ನೇನು ಆಗಿರಬಹುದು ಅನ್ನೋ ಯೋಚನೆಗಳು ಅಪ್ಪಳಿಸಲು ತೊಡಗುತಿದ್ದಂತೆ ಮನದ ಕಡಲಲ್ಲಿ ಉಬ್ಬರ ಶುರುವಾಗಿತ್ತು. ಯಾಕೋ ಎಂದಿನಂತೆ ಸಮಾಧಾನವಾಗಲೇ ಇಲ್ಲ. ಮಲಗಿದ್ದಲ್ಲೇ ನಿಧಾನವಾಗಿ ಮುಲುಕುತಿದ್ದಳು ಅವಳು. ನೀನು ಉಸಿರಾಡೋದು ಚೂರು ವ್ಯತ್ಯಾಸ ಆದರೂ ನಂಗೆ ಗೊತ್ತಾಗುತ್ತೆ ಕಣೆ ಅಂತ ಅನ್ನುತ್ತಿದ್ದವಳು ನಾನು ನನ್ನ ನೋವು ಜಾಸ್ತಿ ಆಗ್ತಾ ಇದೆ ಅಂತ ಅಮ್ಮಂಗೆ ಗೊತ್ತಾಗ್ತಾ ಇದೆಯಾ ಅಂತ ತಿರುಗಿ ನೋಡಿದ್ಲಾ... ಆಗಲೇ ನನಗೂ ಹೊಟ್ಟೆಯೊಳಗೆ ಸಂಕಟ ಶುರುವಾಗಿತ್ತು. ಭಾನುವಾರ ಯಾವ ಡಾಕ್ಟರ್ ಸಹ ಇರೋಲ್ಲ ಏನು ಮಾಡೋದು ಒಬ್ಬರಾದರೂ ಸಿಗಲಿ ದೇವ್ರೇ ಅಂತ ಮನಸ್ಸು ಒಂದೇ ಸಮನೆ ಪ್ರಾರ್ಥಿಸುತಿತ್ತಾ? ಆ ಅಬ್ಬರದಲ್ಲಿ ಯಾವ ಅಲೆಯದು ಯಾವ ಭಾವ ಗುರುತಿಸುವರಾರು? ಗಡಿಯಾರವನ್ನೇ ದಿಟ್ಟಿಸಿದೆ. ತನ್ನ ಪಾಡಿಗೆ ತಾನು ಚಲಿಸುತ್ತಿತ್ತು. ಸ್ವಲ್ಪ ಬೇಗ ಹೋಗಬಾರದಾ ಅಂತ ಮನಸ್ಸಲ್ಲೇ ಬೈದುಕೊಂಡೆ. ಬೇರೆ ಸಮಯದಲ್ಲಿ ಕೇಳಿಸದ ಈ ಟಿಕ್ ಟಿಕ್ ಸಹ ಇಷ್ಟು ನಿಧಾನ ಹಾಗೂ ಕರ್ಕಶ ಅನ್ನೋದು ನಿಧಾನಕ್ಕೆ ಅರ್ಥವಾಗತೊಡಗಿತ್ತು. ಒಂಬತ್ತು ತಿಂಗಳು ಹೊಟ
Image
ಎಲ್ಲೋ ಕೇದಿಗೆ ಹೂ ಬಿಟ್ಟಿದೆ ನೋಡು ಹೇಗೆ ಘಂ ಅಂತಾ ಇದೆ ಅಂತ ಅಜ್ಜಿ ಹೇಳುತಿದ್ದರೆ ಸಣ್ಣದೊಂದು ಪುಳಕ ಶುರುವಾಗುತ್ತಿತ್ತು. ಯಾರಿಗೆ ತಂದು ಕೊಡಲು ಹೇಳೋದು ಅನ್ನೋ ಲೆಕ್ಕಾಚಾರ ಕೂಡ. ನಾವ್ಯಾರು ಹೋಗಿ ಸುಲಭಕ್ಕೆ ಕಿತ್ತು ತರುವ ಹಾಗಿರಲಿಲ್ಲ ಅದು. ಅಸಲಿಗೆ ಅದು ಹೂವಾ... ಬೆಳಂದಿಗಳನ್ನ ಕುಡಿದ ಬೆಳೆದ ಹಾಳೆಯಂತೆ ಕಂಡರೂ ಹಾಳೆಯಂತೆ ಸುಲಭವಾಗಿ ಮುಟ್ಟುವ ಹಾಗಿರಲಿಲ್ಲ. ಬದಿಯಲ್ಲಿದ್ದ ಮುಳ್ಳುಗಳು ಮೊದಲು ಕೈಯನ್ನು ಚುಂಬಿಸುತ್ತಿದ್ದವು. ಆ ಕಾಲದಲ್ಲಿ ಹೂ ಮುಡಿಯುವುದೆಂದರೆ ಎಲ್ಲರಿಗೂ ಸಂಭ್ರಮವೇ. ಹೊರಗೆ ಹೋಗುವಾಗ ತಲೆಯಲ್ಲಿ ಯಾವುದಾದರೂ ಹೂವಿದ್ದರೆ ಮಾತ್ರ ಅದಕ್ಕೊಂದು ಘನತೆ. ಹಾಗಾಗಿ ಕಾಲಕ್ಕೆ ತಕ್ಕ ಹಾಗೆ ಡೇರೆ, ಗುಲಾಬಿ, ಸೀತಾಳೆ, ಮಲ್ಲಿಗೆ, ಕೇದಿಗೆ ಹೀಗೆ ಯಾವುದೋ ಒಂದು ತಲೆಯನ್ನು ಅಲಂಕರಿಸಿ ನಗುತ್ತಿದ್ದವು. ನಾವೂ ಕಿರೀಟ ಧರಿಸಿದ ರಾಜರಂತೆ ತಲೆಯೆತ್ತಿ ಹೆಮ್ಮೆಯಿಂದ  ಮುನ್ನುಗ್ಗುತ್ತಿದ್ದೆವು. ಅದ್ಯಾವಾಗ ಹೂ ಮುಡಿಯುವುದು ಗೊಡ್ಡು ಅನ್ನಿಸಿತೋ ಆ ದೇವರೇ ಬಲ್ಲ. ನಿಮ್ಮ ತಲೆಯಲ್ಲಿ ನಲುಗುವ ಆ ಎಣ್ಣೆಯದೋ, ಶಾಂಪೂವಿನದೋ ಘಾಟು ಸಹಿಸಿ ಉಸಿರುಗಟ್ಟುವ ಕೆಲಸವಿಲ್ಲ ಅಂತ ಅವೂ ನೆಮ್ಮದಿಯ ಉಸಿರುಬಿಟ್ಟವಾ, ಇಲ್ಲಾ ನೊಂದವಾ ಯಾರಿಗೆ ಪುರುಸೊತ್ತು ಕೇಳೋಕೆ, ನೋಡೋಕೆ... ಕೇದಿಗೆ ಬೆಳೆಯುತ್ತಿದ್ದದ್ದು ಪೊದೆಗಳ ನಡುವೆ. ಎಲೆಯ ಅಂಚಿನಲ್ಲೂ ಸಾಲಾಗಿ ಶಿಸ್ತಿನ ಸಿಪಾಯಿಯಂತೆ ಮುಳ್ಳುಗಳು ನಿಂತಿರುತಿದ್ದವು. ಆ ಮುಳ್ಳಿನ ಪೊದೆಯನ್ನು ಹೇಗೋ ದಾಟಿದರೂ
ಅದೊಂದು ಹೂವಿಗಾಗಿ ಎಷ್ಟು ಹಂಬಲಿಕೆ ಬಾಲ್ಯದಲ್ಲಿ ಅಸಲಿಗೆ ಅದು ಹೂವಾ  ಉದ್ದನೆಯ ಹಾಳೆಯ ತರಹದ ಅದು ಬೆಳಂದಿಗಳನ್ನ ಕುಡಿದು ಬೆಳದಿತ್ತೇನೋ ಅನ್ನೋ ಹಾಗೆ ಇರುತಿತ್ತು. ಮಾರು ದೂರದವರೆಗೆ ಅದರ ಘಮ ಹರಡುತಿತ್ತು. ಅದಕ್ಕೆ ಮರುಳಾಗದವರೇ ಇಲ್ಲಾ, ಹಾಗಾಗಿ ಅದು ಮನುಷ್ಯರಿಗಷ್ಟೇ ಅಲ್ಲಾ ಹಾವಿಗೂ ಪ್ರಿಯ. ಕೇದಿಗೆ ಅನ್ನೋ ಆ ಘಮ ನನ್ನ ಈಗಲೂ ಕಾಡುತ್ತೆ. ಅಂತಹ ಕೇದಿಗೆ ವನ ಅನ್ನೋ ಪುಸ್ತಕವನ್ನು  ಕಳಿಸಿ,  ತ.ರಾ.ಸು ಇನ್ನಷ್ಟು ಆಳವಾಗಿ ಎದೆಯೊಳಗೆ ಇಳಿಯಲು ಅವಕಾಶ ಮಾಡಿಕೊಟ್ಟವರು,  ಷಣ್ಮುಖಮ್ ಸರ್. ಫೇಸ್ಬುಕ್ ಆಪ್ತವಾಗೋದೆ ಇಂಥಹ ಕಾರಣಕ್ಕೆ. ಕಥಾ ನಾಯಕ ರಾಜಶೇಖರನಿಗೆ ಗೊಂದಲದ ಪರಿಸ್ಥಿತಿ. ಬದುಕು ಕೆಲವೊಮ್ಮೆ ಅಚ್ಚರಿಯ ತಂದಿಟ್ಟು ತಮಾಷೆ ನೋಡುತ್ತದೆ ಅಂದ್ಕೊತಿವಿ. ಉಹೂ ಅದು ನಮ್ಮ ದೃಢತೆಯನ್ನು ಅಳೆಯುತ್ತದೆ. ಯಾವುದೋ ತಿರುವಿನಲ್ಲಿ ತಂದು ನಿಲ್ಲಿಸಿ ಹೇಗೆ ಸಾಗಬೇಕು ಅನ್ನುವುದರ ಬಗ್ಗೆ ಆಲೋಚನೆ ಹುಟ್ಟುವ ಹಾಗೆ ಮಾಡುತ್ತೆ. ಅಂಥಾ ಪರಿಸ್ಥಿತಿಯಲ್ಲಿ ಮನಸ್ಸು ಹೇಗಿರುತ್ತೆ ಅನ್ನೋದನ್ನ ತ.ರಾ.ಸು ಎಷ್ಟು ಚೆಂದವಾಗಿ ಹೇಳಿದ್ದಾರೆ ನೋಡಿ. "ಟಗರುಗಳೆರೆಡರ ಕಾಳಗದ ನಡುವೆ ಸಿಕ್ಕ ಗಿಡದಂತೆ"  ಆ ಸಂಕಟ, ಗೊಂದಲ, ಅಸಹಾಯಕತೆ, ಕೆಲವೊಮ್ಮೆ ನನ್ನ ತಪ್ಪೇನು ಅನ್ನೋ ಪ್ರಶ್ನೆ ಇವೆಲ್ಲವನ್ನೂ ಒಂದು ಸಾಲಿನಲ್ಲಿ ಕಟ್ಟಿ ಕೊಡುವ ಅವರ ಭಾಷೆ. ಮೃದು ಸ್ವಭಾವ, ಮುಗ್ಧ , ಲೋಕವನ್ನು ಅರಿಯದವ ಅಂತಲೇ ಜಗತ್ತು ಗುರುತಿಸಿದ ರಾಜಶೇಖರನಿಗೆ ಕಾಲೇಜ್ ಗೆ ಬರುವವರೆ
ಮೌನವಾಗಿದ್ದೇನೆ ಎಂದರೆ ಹೆದರಿದ್ದೇನೆ ಅಂದಲ್ಲ.. ನಿನಗೆ ಉತ್ತರಿಸುವ ಅಗತ್ಯವಿಲ್ಲ ಎಂದೂ ಆಗಬಹುದು. ಮಾತಲ್ಲೂ ನೂರಾರು ಅರ್ಥ ಹುಡುಕುವ ನೀನು ನನ್ನ ಮೌನವನ್ನು ಅರ್ಥ ಮಾಡಿಕೊಳ್ಳಲು ಪಡುವ ಪರಿದಾಟ ನೋಡಬೇಕು. ನಂಗೊತ್ತು, ನೀನು ಸುಮ್ಮನಿರಲಾರೆ. ಆಕ್ಷಣಕ್ಕೆ ನಿನಗೊಂದು ಅರ್ಥಬೇಕು ಅದಕ್ಕೆ ಉತ್ತರಿಸಬೇಕು, ನನ್ನ ರೊಚ್ಚಿಗೆಬ್ಬಿಸಬೇಕು ಅನ್ನುವ ನಿನ್ನ ಆಸೆ ಅರ್ಥವಾಗದ್ದೇನಲ್ಲ. ಮೌನವಾಗಿದ್ದೇನೆ ಅಂದ್ರೆ ಉತ್ತರವಿಲ್ಲ ಎಂದಲ್ಲ... ನಿನ್ನ ಬಗೆಗಿನ ದಿವ್ಯ ನಿರ್ಲಕ್ಷ್ಯವೂ ಆಗಿರಬಹುದು. ಮಾತನ್ನು ನಿರೀಕ್ಷಿಸಿ ನನ್ನ ಹಣಿಯಲು ಯತ್ನಿಸುತ್ತಿರುವ ನಿನ್ನ ಪ್ರಯತ್ನಕ್ಕೆ ಬೆಲೆಯೇ ಕೊಡದ ನನ್ನ ಮೌನ ನಿನ್ನ ಅದ್ಯಾವ ಪರಿ ಕಾಡಬಹುದು ಅನ್ನುವುದು ನೋಡಬೇಕು. ಮೌನವಾಗಿದ್ದೇನೆ ಅಂದ್ರೆ ತಪ್ಪು ನನ್ನದೆಂದು ಕೊಂಡಿದ್ದೇನೆ ಎಂದಲ್ಲ . ಯಾರಿಗೋ ಸಮರ್ಥನೆ ಕೊಡಬೇಕು ಅನ್ನುವ ಅನಿವಾರ್ಯತೆ ಇಲ್ಲದಿರಬಹುದು. ನನ್ನ ಉತ್ತರಕ್ಕೆ ಏನು ಪ್ರತ್ಯುತ್ತರ ಕೊಡಬಹುದು ಎಂಬ ನಿನ್ನ ಲೆಕ್ಕಾಚಾರ ನಿರಂತರ ಜಾರಿಯಲ್ಲಿರಲಿ ಅನ್ನೋ ಬಯಕೆಯೂ ಇರಬಹುದು. ಮೌನವಾಗಿದ್ದೇನೆ ಎಂದರೆ ಅಸಹಾಯಕಳಾಗಿದ್ದೇನೆ ಎಂದಲ್ಲ. ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರವೇಕೆ ಎಂಬ ಸಾಮಾನ್ಯ ಜ್ಞಾನವೂ ಆಗಿರಬಹುದು. ಯಾವುದನ್ನು ಎಲ್ಲಿ ಹೇಗೆ ಉಪಯೋಗಿಸಬೇಕು ಅನ್ನುವ ಅರಿವಿದ್ದವ ಮಾತ್ರ ಬುಧ್ಹಿವಂತ ಅನ್ನೋದು ನಿಂಗೆ ಗೊತ್ತಾಗೋದಾದರೂ ಹೇಗೆ ಬಿಡು. ಮೌನವಾಗಿದ್ದೇನೆ ಎಂದರೆ ಕಳೆದುಕೊಳ್ಳುವ ಭಯವಿದೆ ಎಂದಲ್ಲ.

ಎಲ್ಲಿಯೂ ನಿಲ್ಲದಿರು, ಕೊನೆಯನೆಂದು ಮುಟ್ಟದಿರು...

ಡೆಲ್ಲಿಗೆ ಹೋದಾಗ ಗಾಡಿಯಲ್ಲಿ ಎಲ್ಲಾದರೂ ಹೋಗೋದು ನನ್ನ ಹಾಗೂ ಸೀಮಾಳ ಪ್ರೀತಿಯ ಹವ್ಯಾಸ. ಹಾಗೆ ಒಂದು ದಿನ ಎಲ್ಲೋ ಹೋಗಿ ಬರುತ್ತಿರುವಾಗ ಸಿಗ್ನಲ್ ಗಾಗಿ ಕಾಯುತ್ತಿದ್ದೆವು.ಸಮುದ್ರ ಅಲೆಯೋಪಾದಿಯಲ್ಲಿ ಸಾಲಾಗಿ ನಿಂತು ಯಾವ ಕ್ಷಣದಲ್ಲಾದರೂ ಹಸಿರಿನ ಗುಂಡು ಹೊಡೆಯಬಹುದು ಓಡಬೇಕು ಅನ್ನೋ ಧಾವಂತದಲ್ಲಿದ್ದ ವಾಹನಗಳು, ಹಾರನ್ನಿನ ಕಿವಿಗಿಡಚಿಕ್ಕುವ ಸದ್ದು, ಮುಸುಕು ಬೆಳಕು, ಅಸಹನೀಯ ಧಗೆ,   ಬೋರ್ ಅನ್ನಿಸಿ ಪಕ್ಕಕ್ಕೆ ತಿರುಗಿದೆ. ಅದಾಗಲೇ ರಾತ್ರಿ ತನ್ನ ಕಳ್ಳ ಹೆಜ್ಜೆಯಿಟ್ಟು ಬೆಳಕನ್ನು ಇಷ್ಟಿಷ್ಟೇ ಆವರಿಸುತಿತ್ತು. ಬೆಳಕೂ ಅದರ ಆಲಿಂಗನದಲ್ಲಿ ಮೈಮರೆತು ಅಷ್ಟಷ್ಟೇ ಕರಗುತ್ತಿತ್ತು. ಇವರಿಬ್ಬರ ಸಂಭ್ರಮ ಕಂಡು ಅಲ್ಲೆಲ್ಲೋ ಉರಿಯುತಿದ್ದ ದೀಪದ ಮಸುಕು ಬೆಳಕಿನಲ್ಲಿ ಕತ್ತಲಲ್ಲಿ ಗಿಜಿಗುಡುವ ರಸ್ತೆಯ ಬದಿಯಲ್ಲಿ  ಗುರುತು ಸಿಗದ ಮರದ ನೆರಳಲ್ಲಿ ಒಂದು ಡೇರೆಯಿತ್ತು. ಅದೇ ಗಿಜಿಗುಡುವ ರಸ್ತೆಯ ಬದಿಯಲ್ಲಿ ಎಲ್ಲಿಂದಲೋ ಆರಿಸಿಕೊಂಡು ತಂದ ನಾಲ್ಕು ಕಟ್ಟಿಗೆಯನ್ನು ಮೂರು ಕಲ್ಲುಗಳ ನಡುವೆ ಇಟ್ಟು ಹೊತ್ತಿಸಿ ಅದರ ಮೇಲೆ ಕತ್ತಲೆಗಿಂತಲೂ ಕಪ್ಪಾಗಿದ್ದ ಹೆಂಚು ಇಟ್ಟು ರೊಟ್ಟಿ ತಟ್ಟುತಿದ್ದಳು ಒಬ್ಬಳು ತಾಯಿ. ಕತ್ತಲೆಯ ಸೆರಗಿನಲ್ಲಿ ಬೆಳಕಿನ ಗೆರೆಯೊಂದು ಮಿಂಚಿದಂತೆ, ಎಲ್ಲವೂ ಸ್ತಬ್ಧವಾಗಿ ಹೋದಂತೆ   ತದೇಕಚಿತ್ತಳಾಗಿ ಅವಳನ್ನೇ ದಿಟ್ಟಿಸುತಿದ್ದೆ. ಆಗಾಗ ಉರಿಯನ್ನು ಹೆಚ್ಚು ಕಡಿಮೆ ಮಾಡುತ್ತಾ ಆಯ್ದು ತಂದ ಕಟ್ಟಿಗೆಯೆಂಬ ಪುಟ್ಟ ಪುಟ್ಟ ಕೋಲು, ಕಡ್ಡಿಗಳನ್ನು ಒಡ
ಒಂದು ದೇಶದ ಇತಿಹಾಸವನ್ನು ತಿರುಚಿ ಬರೆಯುವದಕ್ಕಿಂತ ದೊಡ್ಡ ಬ್ಲಂಡರ್ ಇನ್ನೊಂದಿಲ್ಲ ಅನ್ನ್ನಿಸೋದು ಟಿಪ್ಪುವಿನ ಬಗೆಗಿನ ಸತ್ಯಗಳು ಅರಿವಾದಾಗ. ಒಂದಿಡೀ ಜನಾಂಗವನ್ನು ದಿಕ್ಕು ತಪ್ಪಿಸುವ ಕಾರ್ಯವನ್ನು ಗೊತ್ತಿದ್ದೂ ಗೊತ್ತಿದ್ದೂ ಮಾಡುವ ಇತಿಹಾಸಕಾರರನ್ನು ನೋಡಿದಾಗ ಅವರಿಗೆ ಮನಃಸಾಕ್ಷಿ ಅನ್ನೋದು ಇರಲೇ ಇಲ್ಲವಾ ಅನ್ನೋ ಪ್ರಶ್ನೆಯೂ ಕಾಡುತ್ತೆ. ಎಷ್ಟರಮಟ್ಟಿಗೆ ಅವರು ನೈತಿಕವಾಗಿ ಅಧಃಪತನಕ್ಕೆ ಇಳಿದಿದ್ದರು ಅನ್ನೋದು ಗೊತ್ತಾದಾಗ ಅವರಿಗೆ ಯಾವತ್ತೂ ಆತ್ಮಸಾಕ್ಷಿ ಅನ್ನೋದು ಪ್ರಶ್ನಿಸಲೇ ಇಲ್ಲವಾ ಅನ್ನೋ ಗೊಂದಲ. ಬಹುಶಃ ಇದು ಕಾಡುವುದು ಮನುಷ್ಯರಿಗೆ ಮಾತ್ರ ಮನುಷ್ಯ ರೂಪಿ ಜೀವಕ್ಕಲ್ಲ. ಅವನ ಕ್ರೌರ್ಯ, ಮತಾಂತರ ಮಾಡಲು ಅವನು ನಡೆಸಿದ ಮಾರಣ ಹೋಮ, ಜಿಹಾದ್ ಗಾಗಿ ಅವನು ಪಟ್ಟ ಶ್ರಮ, ನೋಡಿದಾಗ ಅವನು ದಕ್ಷಿಣದ ಔರಂಗಜೇಬ್ ಅಂತ ಹೇಳುವುದರಲ್ಲಿ ಸಂದೇಹವೇ ಇಲ್ಲ. ಟಿಪ್ಪು ಸ್ವತಃ ಬರೆದ ಅನೇಕ ಪತ್ರಗಳು ಇದಕ್ಕೆ ಸಾಕ್ಷಿಯಾಗಿ ನಿಲ್ಲುತ್ತವೆ. ಕೊಡಗಿನಲ್ಲಿ ಅವನು ನಡೆಸಿದ ಮಾರಣ ಹೋಮ ಜಲಿಯನ್ ವಾಲ್ ಬಾಗ್ ನಡೆದ ಕ್ರೌರ್ಯವನ್ನೂ ಮೀರಿಸುತ್ತದೆ. ಶಾಂತಿ ಸಂಧಾನಕ್ಕಾಗಿ ಅವರನ್ನು ಆಹ್ವಾನಿಸಿ ನಂಬಿ ನಿಶಸ್ತ್ರರಾಗಿ ಬಂದ ಕೊಡವರನ್ನು ಅವಿತುಕೊಂಡು ಧಾಳಿ ಮಾಡಿ ಕೊಂದಿದ್ದು 35 ಸಾವಿರಕ್ಕೂ ಹೆಚ್ಚು ಜನರನ್ನ. ಮತಾಂತರವಾಗಲು ತಿರಸ್ಕರಿಸಿದ ಮೇಲುಕೋಟೆಯ 700 ಕ್ಕೂ ಹೆಚ್ಚು ಅಯ್ಯಂಗಾರರನ್ನು ಹಿಡಿದು ಅವರನ್ನು ದೀಪಾವಳಿಯ ನರಕ ಚತುರ್ದ
 ಚಕ್ರೇಶ್ವರಿಯಿಂದಲೇ  ತ. ರಾ. ಸು ಓದಲು ಶುರುಮಾಡಿದ್ದು ನಾನು. ಚಿತ್ರದುರ್ಗಕ್ಕೆ ಹೋಗಿ ಬಂದ ಮೇಲೆ ಓದಿದ್ದು ದುರ್ಗಾಸ್ತಮಾನ. ಆಮೇಲೆ ಅದರ ಸರಣಿ ಕೃತಿಗಳು ಇವೆ ಅಂತ ಗೊತ್ತಾಗಿ ಅದನ್ನ ಓದಿದ ಮೇಲೆ ಇನ್ನೊಮ್ಮೆ ಅದನ್ನ ಓದಬೇಕು ಅಂತ ಅಂದ್ಕೊಂಡ್ ಸುಮ್ಮನಾಗಿರುವಾಗಲೇ ಸ್ನೇಹಿತರ ಮನೆಯಲ್ಲಿ ಮೊದಲ ಪುಟ ಕಿತ್ತು ಜೀರ್ಣಾವಸ್ಥೆಗೆ ತಲುಪಿದ ಪುಸ್ತಕವೊಂದು ಕಣ್ಣಿಗೆ ಬಿಟ್ಟು. ಮೊದಲಿಂದಲೂ ಈ ಜೀರ್ಣಾವಸ್ಥೆ ತಲುಪಿದ ಯಾವುದೇ ಆಗಲಿ ಅದರ ಬಗ್ಗೆ ನನಗೊಂದು ಕುತೂಹಲ, ಆಸಕ್ತಿ. ಯಾವುದು ಅಂತ ನೋಡಲು ಹೋದವಳಿಗೆ ಶೀರ್ಷಿಕೆಯೇ ಇಷ್ಟವಾಗಿ ಬಿಡ್ತು. ಬಿಡುಗಡೆಯ ಬೇಡಿ. ಮತ್ತದನ್ನ ಬರೆದಿದ್ದು ತ. ರಾ. ಸು. ಈ ಬದುಕು ಮತ್ತು ಬಂಧನ ಅವಳಿ ಜವಳಿಗಳೇನೋ ಅನ್ನಿಸುತ್ತಿರುತ್ತದೆ ನಂಗೆ. ಮನುಷ್ಯನಲ್ಲಿ ಯಾವುದನ್ನೂ ಮೀರುವ, ಹೊರಬರುವ ಪ್ರಯತ್ನ ಕೊನೆಯ ಉಸಿರಿನ ತನಕವೂ ಚಾಲನೆಯಲ್ಲಿರುತ್ತೆ. ಅದು ಅರಿವಿಗೆ ಬಂದಿರಬಹುದು ಬರದಿರಲೂ ಇರಬಹುದು. ಈ ನೆಲದ ಮುಖ್ಯ ಗುಣವೂ ಅದೇ ಈ ದೇಹದಿಂದ ಬಿಡುಗಡೆ, ಆಥವಾ ಮುಕ್ತಿಗಾಗಿ ಪ್ರಯತ್ನ ಪಡೋದು. ಇಡೀ ಬದುಕಿನ ಗಮ್ಯವೇ ಬಿಡುಗಡೆ ಅಲ್ವಾ ಅಂತ ಅನ್ನಿಸಿ ಬೆರಗು, ಬೇಜಾರು ಎರಡೂ ಆಗುತ್ತೆ ಒಂದೊಂದುಸಲ. ಮುಖ್ಯ ಪಾತ್ರಧಾರಿ ಪ್ರಭಾವತಿ, ಅವಳಿಗೋ ಯಾವುದೋ ಬಲೆಯಲ್ಲಿ ಸಿಲುಕಿಕೊಂಡ ಭಾವ, ಆ ಉಸಿರುಗಟ್ಟಿಸುವ ಪರಿಸರದಿಂದ ಬಿಡಿಸಿಕೊಳ್ಳುವ ಬಯಕೆ. ಪಂಜರದಿಂದ ಬಿಡಿಸಿಕೊಂಡು ಸ್ವಚ್ಚಂದವಾಗಿ ಹಾರಾಡುವ ಬಯಕೆ. ಆದರೆ ಅವಳಿಗೆ ಪ್ರತಿಯೊಂದು ಪಂಜರ