ಶಿವಾಜಿ
ಯಕಶ್ಚಿತ್ ಸಾಮಂತನ ಮಗ ನನ್ನನ್ನೇ ಎದುರಿಸುವ ನನ್ನ ರಾಜ್ಯವನ್ನೇ ವಶಪಡಿಸಿಕೊಳ್ಳುವ ಮಟ್ಟಕ್ಕೆ ಬೆಳೆದು ಬಿಟ್ಟನಲ್ಲ, ಅಂದೇ ಬಾಲಕನಾಗಿದ್ದಾಗ ತಂದೆ ಮುಜುರೆ ಮಾಡಿದರೂ ದಿಟ್ಟಿಸಿ ನೋಡುತ್ತಾ ನಿಂತ ಬಾಗದ ಅವನನ್ನು ಅರ್ಥಮಾಡಿಕೊಳ್ಳಬೇಕಿತ್ತು. ಏನೋ ಹುಡುಗುತನ ಎಂದು ಸುಮ್ಮನಾಗಿದ್ದಕ್ಕೆ ಇಷ್ಟು ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಅಂದೇ ಗೊತ್ತಿದ್ದರೆ ಅಲ್ಲೇ ಆ ಸಭೆಯಲ್ಲಿಯೇ ಹೊಸಕಿ ಹಾಕಬಹುದಿತ್ತು. ನಂತರವೂ ಒಂದೆರೆಡು ಕೊಂಡಗಳನ್ನು ವಶಪಡಿಸಿಕೊಂಡಾಗ ಏನೋ ವಯಸ್ಸಿನ ಪುಂಡಾಟ ಎಂದು ಸುಮ್ಮನಿರಬಾರದಿತ್ತು ಈ ಶಿವಾಜಿ ನನ್ನನ್ನೇ ಮೀರಿಸುವ ಹಾಗೆ ಬೆಳೆದುದಲ್ಲದೆ ಈಗ ದೆಹಲಿಯ ನವಾಬರಿಗೆ ಹತ್ತಿರವಾಗುತ್ತಿದ್ದಾನೆ ಇನ್ನು ಸುಮ್ಮನಿರುವುದು ಹೇಡಿತನ ಮಾತ್ರವಲ್ಲ ಎಲ್ಲವನ್ನೂ ಕಳೆದುಕೊಳ್ಳುವ ಮುನ್ಸೂಚನೆ ಕೂಡಾ ಬಿಜಾಪುರದ ಸುಲ್ತಾನ ತನ್ನೊಳಗೆ ಕುದಿಯುತ್ತಿದ್ದ, ದಾರಿಗಾಗಿ ಹುಡುಕುತ್ತಿದ್ದ. ಸುಲ್ತಾನ ಹೀಗೆ ಯೋಚಿಸುತ್ತಿರುವಾಗಲೇ ಅತ್ತ ಅವನ ಮಲತಾಯಿ ಉಲಿಯಾ ಬಡಿಯಾ ಬೇಗಂ ಸರ್ಪಿಣಿಯಾಗಿದ್ದಳು. ಶಿವಾಜಿಯ ಪುಂಡಾಟ ಅಡಗಿಸಲು ಕ್ರಮ ಕೈಗೊಳ್ಳುವ ಹಾದಿಯಲ್ಲಿದ್ದಳು. ಅದರ ಮೊದಲ ಸೂಚನೆ ಎಂಬಂತೆ ಶಹಾಜಿಗೆ ಪತ್ರ ಬರೆದು ಮಗನನ್ನು ಹದ್ದುಬಸ್ತಿನಲ್ಲಿಡಲು ತಪ್ಪಿದರೆ ಭೀಷಣ ಕ್ರಮದ ಬೆದರಿಕೆ ಒಡ್ಡಿದ್ದಳು. ಪತ್ರವನ್ನು ಓದಿದ ಶಹಾಜಿ ಭಯಗೊಂಡಿರಲಿಲ್ಲ. ಮಗನ ಪ್ರತಾಪದ ಬಗ್ಗೆ ಹೆಮ್ಮೆ ಪಟ್ಟಿದ್ದ. ತನ್ನ ತಲೆಗೆ ಈ ಸಾಮಂತ ಪಟ್ಟ ಕೊನೆಯಾಗಲಿ ಎಂದು ಬಯಸಿದ್ದ. ಯಾವಾಗ