Posts

ಮಳೆಗಾಲದ ತಯಾರಿ. (ಹನಿ ಕಡಿಯದ ಮಳೆ)

ಮೇ ತಿಂಗಳ ಕೊನೆಯ ಹೊತ್ತಿಗೆಲ್ಲಾ ಮಳೆಯ ದಿಬ್ಬಣ ಅಡಿಯಿಡುತಿತ್ತು. ದಿಬ್ಬಣವೆಂದರೆ ಗೌಜಿ ಗದ್ದಲ ಇಲ್ಲದೆ ಇದ್ದರೆ ಆಗುತ್ತದೆಯೇ? ಹಾಗಾಗಿ ಗುಡುಗು ಸಿಡಿಲುಗಳ ಆರ್ಭಟ, ಕೋರೈಸುವ ಮಿಂಚು, ಭೋರೆಂದು ಬೀಸುವ ಗಾಳಿ, ತನ್ನ ಆವೇಶವನ್ನೆಲ್ಲಾ  ಒಮ್ಮೆಗೆ ಹೊರ ಹಾಕುವಂತೆ ಧೋ ಎಂದು ಸುರಿಯುವ ಮಳೆ. ಒಂದಕ್ಕೊಂದು ಜೊತೆಯಾಗುತ್ತಾ, ಹಾಗೆ ಜೊತೆಯಾಗುತ್ತಲೇ ಜೊತೆಯಾಗಿಸುತ್ತಾ ಬರುತಿದ್ದ ಮಳೆರಾಯ ಥೇಟ್ ದಿಬ್ಬಣದ ಬೀಗರಂತೆ ಖುಷಿಯ ಜೊತೆ ಜೊತೆಗೆ ಆತಂಕ, ಏನಾಗಬಹುದು ಅನ್ನೋ ಅವ್ಯಕ್ತ ಭಯ, ಸುಸೂತ್ರವಾಗಿ ಜರುಗಿದರೆ ಸಾಕಪ್ಪ ಅನ್ನುವ ಆಸೆ ಎಲ್ಲವೂ ಮೂಡುವ ಹಾಗೆ ಮಾಡುತಿದ್ದ. ದಿಬ್ಬಣ ಬರುವ ಮುನ್ನ ಎಷ್ಟೆಲ್ಲಾ ತಯಾರಿಗಳು ಆಗಬೇಕು, ಎಷ್ಟೊಂದು ಕೆಲಸ. ಬೀಗರನ್ನು ಎದುರುಗೊಳ್ಳುವುದೆಂದರೆ ಅದೇನು ಅಷ್ಟು ಸುಲಭವೇ. ಅದೆಷ್ಟು ಜಾಗ್ರತೆ, ಅದೆಷ್ಟು ತಯಾರಿ ಮಾಡಲೇ ಬೇಕು. ಒಮ್ಮೆ ಬೀಗರು ಅಡಿಯಿಟ್ಟ ಮೇಲೆ ಮುಗಿಯಿತು. ಅವರನ್ನು ಉಪಚರಿಸಲು ಎಷ್ಟೊಂದು ಕೆಲಸ ಆಗಿರಬೇಕು.  ಎಲ್ಲಕ್ಕಿಂತ ಮುಖ್ಯವಾಗಿ ಬಿಸಿಲು ಇರುವಾಗಲೇ ಹಪ್ಪಳ ಸಂಡಿಗೆ ಮಾಡಿ ಅದನ್ನು ಡಬ್ಬದಲ್ಲಿ ತುಂಬಿಟ್ಟುಕೊಳ್ಳಬೇಕು. ಅದೂ ತರಾವರಿ ಹಪ್ಪಳಗಳು ಇದ್ದರೂ ಹಲಸಿನ ಹಪ್ಪಳಕ್ಕೆ ಅಗ್ರಸ್ಥಾನ. ರಾಜ ಅದು. ಉಳಿದ ಮಂತ್ರಿ ಮಂಡಲದಂತೆ ಅಕ್ಕಿ ಹಪ್ಪಳ, ಸಂಡಿಗೆ, ಮಜ್ಜಿಗೆ ಮೆಣಸು ಹೀಗೆ ಉಳಿದವರು ಇರುತಿದ್ದರು. ಆಮೇಲೆ  ಉಪ್ಪಿನಕಾಯಿ ಅದೂ ಮಿಡಿ ಮಾವಿನ ಉಪ್ಪಿನಕಾಯಿ, ಸ್ವಲ್ಪ ನಿಂಬೆಕಾಯಿ ಉಪ್ಪಿನಕ...

ಕ್ಷಮಿಸುವುದು ಎಂದರೆ ಮರೆಯುವುದಲ್ಲ.

 ನುವ್ವು ನಾಗಪಾಮುಲಾಂಟಿದವಿ , ಏಮಿ ಮರ್ಚಿಪೊಲೆವು, ಸಮಯಕೋಸಂ ಚೂಸ್ತು ಉಂಟಾವು, ನನ್ನ ಅಂಗೈಯನ್ನು ಅವರ ಬೊಗಸೆಯಲ್ಲಿ ಇಟ್ಟುಕೊಂಡು ಹೇಳುವಾಗ ಮುಸ್ಸಂಜೆ. ಆಂಧ್ರದ ಕಾಡಿನ ಅಂಚಿನಲ್ಲಿ, ಕೃಷ್ಣಾ ನದಿಯ ತೀರದಲ್ಲಿ ಇದ್ದ ಆ ಪುಟ್ಟ ಗುರುಕುಲದಲ್ಲಿ ಆಗಷ್ಟೇ ಕತ್ತಲು ಹೊಸಿಲು ದಾಟಿ ಬಂದಿತ್ತು. ಕಾಣಿಸಿದರೂ ಕಾಣಿಸದ ಹಾಗಿನ ಬೆಳಕು. ಅಲ್ಲಿ  ಇದ್ದದ್ದೇ ಹತ್ತು ಮನೆಗಳು. ಒಂದಷ್ಟು ವಿದ್ಯಾರ್ಥಿಗಳು. ಸಣ್ಣಗೆ ನಕ್ಕಿದ್ದೆ. ಕತ್ತಲು ಅದಾಗಲೇ ಆವರಿಸುತ್ತಿದ್ದರಿಂದ ನನ್ನ ಮುಖಭಾವ ಅವರಿಗೆ ಕಾಣಿಸಿರಲಿಲ್ಲ. ಮೆಲ್ಲಗೆ ಕೈ ಬಿಡಿಸಿಕೊಂಡು ಕಾಯುತ್ತಿದ್ದ  ಕರುವಿನ ಹಿಂದೆ ಮನೆಗೆ ಹೊರಟೆ. ಅಣ್ಣನಿಗೆ ಮೊದಲ ಕೆಲಸ ಸಿಕ್ಕಿದಾಗ ಸಂಭ್ರಮ. ನಮ್ಮದೇ ಮನೆ, ನಮ್ಮದೇ ಬದುಕು ಅನ್ನುವುದಷ್ಟೇ ಮುಖ್ಯವಾಗಿತ್ತೇ ಹೊರತು ಯಾವ ಊರು, ಯಾವ ರಾಜ್ಯ ಅನ್ನೋದು ಅಲ್ಲವೇ ಅಲ್ಲ. ಸ್ವತಂತ್ರ ಬದುಕು ಬೇಕಾಗಿತ್ತು ಅಷ್ಟೇ.  ಕೃಷ್ಣಾ ನದಿ ದೋಣಿಯಲ್ಲಿ ದಾಟಿದರೆ ದಂಡೆಯ ಮೇಲೆ ಒಂದು ಪುಟ್ಟ ಊರು. ಕುಗ್ರಾಮ ಎನ್ನುವುದಕ್ಕೆ ಉದಾಹರಣೆ. ಬಡತನವೆನ್ನುವುದು ಅಲ್ಲಿ ಮರಳಿನ ಹಾಗೆ ಹಬ್ಬಿಕೊಂಡಿತ್ತು. ಅಲ್ಲಿಂದ ಒಂದು ಮೈಲಿ ನಡೆದರೆ ಒಂದು ಐವತ್ತು ಎಕರೆ ಜಾಗವನ್ನು ಖರೀದಿಸಿ ಅಲ್ಲೊಂದು ಪುಟ್ಟ ಗುರುಕುಲ ಕಟ್ಟಿದ್ದರು. ಹಳೆಯ ಕಾಲದ ಕಾನ್ಸೆಪ್ಟ್. ಗುರುವಿನ ಮನೆಯಲ್ಲಿ ಶಿಷ್ಯರ ವಾಸ. ಹೊಸಕಾಲದ ಗುರುಗಳು ಆಗಿದ್ದರಿಂದ  ಊಟಕ್ಕೆ ಮಾತ್ರ ವಿದ್ಯಾರ್ಥಿಗಳಿಗೆ ಬೇರೆಯ ವ್ಯವಸ...

ಚೌಡಿಯ ಹರಕೆ

ದನ ಕರು ಹಾಕಿದೆ ಎಂದರೆ ಹಾಲು ಕರೆದು ಬಳಸುವ ಮುನ್ನ ಚೌಡಿಗೆ ಕೊಡುವುದು ಮಲೆನಾಡಿನ ಹಳೆಯ ಕಾಲದಿಂದಲೂ ನಡೆದು ಬಂದ ಪದ್ದತಿ. ಮೇಯಲು ಹೋದ ದನವೊ, ಕರುವೋ ಬರಲಿಲ್ಲ ಎಂದರೂ ಚೌಡಿಗೊಂದು ಹರಕೆ ಹೊತ್ತುಕೊಂಡೆ ಹುಡುಕಲು ಹೋಗುವುದು ಸಾಮಾನ್ಯ. ಇಡೀ ಊರು ಕಾಯುವವಳು ಅವಳು ಎಂಬ ನಂಬಿಕೆ. ರಾತ್ರಿಯ ಹೊತ್ತು ಗೆಜ್ಜೆ ಸದ್ದು ಕೇಳಿದರೆ, ಕೋಲು ಕುಟ್ಟಿಕೊಂಡು ಯಾರೋ ಓಡಾಡುವ ಸದ್ದು ಕೇಳಿಸಿದರೆ ಯಾವ ಕಾರಣಕ್ಕೂ ಹೊರಗೆ ಬರಬಾರದು ಎನ್ನುವುದು ಗಾಢ ನಂಬಿಕೆ. ಸಂಪಗೋಡಿನಲ್ಲೂ ಹೀಗೊಂದು ನಂಬಿಕೆ ಇತ್ತು. ಆ ನಂಬಿಕೆ ಜೊತೆಜೊತೆಗೆ ಬೆಳೆದುಬಂದವಳು ನಾನು. ಮನೆಯಲ್ಲಿ ಒಬ್ಬರೇ ಇದ್ದರೆ ಅವತ್ತು ಹೆಜ್ಜೆಯ ಸದ್ದು ಜೋರಾಗಿ ಕೇಳಿಸುತ್ತೆ ಅನ್ನೋದು ದೊಡ್ಡವರ ಅನುಭವ. ಅವೆಲ್ಲಾ ಅರ್ಥವಾಗುವ ವಯಸ್ಸು ಅಲ್ಲದಿದ್ದರೂ ಭಯ ಕಾಡದೆ ಇರುವುದಕ್ಕೆ ಅದೊಂದು ನಂಬಿಕೆ ಸಾಕಾಗಿತ್ತು. ಉಳಿದೆಲ್ಲಾ ಹಾಗಾಗಿ ದೊಡ್ಡ ವಿಷಯವೇ ಆಗಿರಲಿಲ್ಲ.  ಆ ಊರು ಮುಳುಗಿ ಇನ್ನೆಲ್ಲೋ ಹರಡಿ, ಬೆಂಗಳೂರಿನಲ್ಲಿ ಅಸ್ತಿತ್ವ ಕಂಡುಕೊಳ್ಳುವ ಹೊತ್ತಿಗೆ ಚೌಡಿ ಅನ್ನೋದು ನೆನಪಿನ ಆಳದಲ್ಲಿ ಹೂತು ಹೋಗಿ ಮರೆತೇ ಹೋಗಿದೆ ಅನ್ನುವ ಹಾಗಾಗಿತ್ತು. ಅಹಿಗಿನ್ನೂ ಎರಡು ವರ್ಷವೂ ತುಂಬಿರಲಿಲ್ಲ. ಹೀಗೆ ಒಮ್ಮೆ ಊರಿಗೆ ಹೋಗಿದ್ದೆವು. ರಾತ್ರಿ ಎಂದೂ ಇಲ್ಲದ ವಿಪರೀತ ಹಟ. ಏನು ಸಮಾಧಾನಿಸಿದರೂ, ಹೊತ್ತು ತಿರುಗಿದರೂ ನಿದ್ದೆ ಬಂದಂತೆ ಆಗುವ ಮಗು ಹಾಸಿಗೆಯಲಿ ಮಲಗಿಸಿದ ತಕ್ಷಣ ಮತ್ತೆ ಜೋರು ಹಠ. ಬೆಳಿಗ್ಗೆ ಪ್ರಯಾಣ ಮಾಡಿದ ಸು...
ಆಟ  ಮುಗಿಸಿ ಮನೆಗೆ ಬರುವಾಗ ಮುಖ ಧುಮು ಧುಮು. ತುಟಿ ಮುಂದು. ಮಾತಾಡಿದರೆ ಜ್ವಾಲಾಮುಖಿ  ಸಿಡಿಯುತ್ತೆ ಎಂದುಕೊಂಡು  ನೋಡಿದರೂ ನೋಡದವಳ ಹಾಗೆ ಇದ್ದರೂ ಕಿಂಚಿತ್ತೂ ಉಪಯೋಗವಾಗಲಿಲ್ಲ. ಹತ್ತಿರವೇ ಬಂದು  ಏನಾಯ್ತು ಎಂದು ಕೇಳುವ ಅಗತ್ಯವೇ ಇಲ್ಲದೆ ಅವರೆಲ್ಲಾ ದಿನಾ ಪ್ರಾಕ್ಟೀಸ್ ಮಾಡ್ತಾ ಇದ್ರು, ಹ್ಯಾಂಡಲ್ ಹಿಡಿಯದೇ ಎರಡು ರೌಂಡ್ ಹೋಗ್ತಾರೆ ನಂಗೆ ಆಗಿಲ್ಲ ಅದಕ್ಕೆ ಎಷ್ಟು ಇನ್ಸಲ್ಟ್ ಮಾಡಿದ ಗೊತ್ತಾ ಅವನು ಕೆಂಡ ನಿಗಿ ನಿಗಿ. ನೀರು ಹಾಕಿದರೆ ಬೂದಿ ಮುಖಕ್ಕೆ ಹಾರುವುದು ಖಚಿತ ಎಂದು ಗೊತ್ತಿದ್ದರಿಂದ ಮೌನವಾಗಿಯೇ ಕೇಳಿಸಿಕೊಳ್ಳುತ್ತಿದ್ದೆ. ಎಷ್ಟು ಹೊತ್ತು ತಾನೇ ಉರಿದೀತು? ಆರಲೇ ಬೇಕಲ್ಲ. ಉರಿದು ಆರಿದರೆ ಅಲ್ಲಿಗೆ ಎಲ್ಲವೂ ನಿಶ್ಚಲ ಆ ವಯಸ್ಸಿನಲ್ಲಿ ನಾನಿದ್ದದ್ದೂ ಹೀಗೆ ಅಲ್ಲವಾ..  ಈ ಅವಮಾನಗಳೇ ಹೀಗೆ. ಕೋಪ, ದುಃಖ, ಅಸಹಾಯಕತೆ ಎಲ್ಲವನ್ನೂ  ಸೃಷ್ಟಿಸಿಬಿಡುತ್ತವೆ. ಅವಮಾನಕ್ಕಿಂತ ದೊಡ್ಡ ಶಿಕ್ಷೆ ಯಾವುದಿದೆ ಅನ್ನಿಸಿದ್ದು  ಎಷ್ಟೋ ಸಲ. ಕೆಲವೊಮ್ಮೆ ಉತ್ತರಿಸಬೇಕು ಎಂದರೂ ಉತ್ತರಿಸಲಾಗದ ಪರಿಸ್ಥಿತಿಯಲ್ಲಿ ನಿಂತು ಬಿಟ್ಟಿರುತ್ತೇವೆ.  ಅವುಡುಗಚ್ಚಿ ಸಹಿಸುವುದರ ವಿನಃ ಬೇರೆ ದಾರಿಯೇ ಇರುವುದಿಲ್ಲ. ಭಾರವಾದರೂ, ಕುಸಿದರೂ ಇಳಿಸಲು ಆಗುವುದೇ ಇಲ್ಲ. ನರಳುವುದು ತಪ್ಪುವುದಿಲ್ಲ. ಅದನ್ನು ಅವರು ಉದ್ದೇಶ ಪೂರ್ವಕವಾಗಿ ಮಾಡಿದ್ದರೂ ಗೊತ್ತಿಲ್ಲದೇ ಜರುಗಿದ್ದರೂ ಅದನ್ನೆದುರಿಸಿದವರ ಪಾಡು ಬದಲಾಗುವುದಿಲ್ಲ. ಕ...
 ಮೊದಲ ಬಾರಿಗೆ ತನ್ನ ತಂದೆಯ ಬಗ್ಗೆ ಮನಸ್ಸು ಬಿಚ್ಚಿ ಮಾತಾಡಿದ ಬೆಳೆಗೆರೆ ಎನ್ನುವ ಸಾಲು ಕಾಣಿಸುತ್ತಲೇ ಕೈ ಸ್ಕ್ರಾಲ್ ಮಾಡುವುದು ನಿಲ್ಲಿಸಿತ್ತು. ಹಾಳಾದ್ದು ಈ ಕುತೂಹಲ ಅದು ಇನ್ನೊಬ್ಬರ ಬಗ್ಗೆ ಬಿಡಿಸಿಕೊಳ್ಳುವುದು ಸುಲಭವಲ್ಲ ಅನ್ನಿಸಿದರೂ ಮೀರಲಾಗಲಿಲ್ಲ. ಬಾಲ್ಯದಲ್ಲಿ ತಂದೆಯನ್ನು ಕಳೆದುಕೊಂಡ, ಇಲ್ಲದ ಮಕ್ಕಳ ತಬ್ಬಲಿತನ ಎಷ್ಟು ಬೆಳೆದರೂ, ಏನೇ ಸಾಧಿಸಿದರೂ ಹೋಗದು. ಆ ಅನಾಥಭಾವ ಕೊನೆಯ ಉಸಿರಿನತನಕ  ಬೆಂಬಿಡದ ಸಂಗಾತಿ. ಇದನ್ನು ಅನುಭವಿಸಿದ್ದರಿಂದಲೇ ಅವರು ಅದನ್ನು ಹೇಗೆ ಎದುರಿಸಿದರು ಎನ್ನುವ ಕುತೂಹಲ. ಕೇಳಿ ಮುಗಿಸುವ ಹೊತ್ತಿಗೆ ಇದು ಬೆಂಬಿಡದ ಬೇತಾಳ ಅನ್ನುವುದು ಅರ್ಥವಾಗಿತ್ತು. ತಂದೆಯಿಲ್ಲ ಜೊತೆಗೆ ಬಡತನ ಅಂದರೆ ಮುಗಿದೇ ಹೋಯಿತು. ಊರೆಲ್ಲಾ ಬುದ್ಧಿ ಹೇಳುವವರೇ, ಜವಾಬ್ದಾರಿ ಕಲಿಸುವವರೇ. ಆ ವಾತಾವರಣದಲ್ಲಿ ಬೆಳೆದವರೆಗೆ ಅನುಕಂಪ ಎಂದರೆ ಪರಮ ಅಹಸ್ಯ. ಅಷ್ಟೆಲ್ಲಾ ಸಾಧನೆ ಮಾಡಿ ಹೆಸರುವಾಸಿ ಆಗಿ ಶ್ರೀಮಂತಿಕೆಯಲ್ಲಿ ತೇಲಾಡಿದರು ಬೇರೆಲ್ಲಾ ಬಿಟ್ಟು ಹೋದರೂ ಈ ಅನಾಥಭಾವ ಮಾತ್ರ ಬಿಟ್ಟು ಹೋಗುವುದಿಲ್ಲವಲ್ಲ ಅನ್ನಿಸಿ ಹೊಟ್ಟೆಯೊಳಗೆ ಸಂಕಟ. ಅದರಲ್ಲೂ ತಂದೆ ಇಲ್ಲ ಎನ್ನುವುದಕ್ಕಿಂತ ಯಾರು ಎಂದು ಗೊತ್ತಿಲ್ಲ ಎನ್ನುವುದು ಮತ್ತಷ್ಟು ಹಿಂಸೆ. ಎಷ್ಟೇ ಎತ್ತರಕ್ಕೆ ಬೆಳೆದವನನ್ನೂ ಒಂದೇ ಸಲಕ್ಕೆ ಮೊಳಕಾಲ ಮೇಲೆ ಕೂರಿಸಿ ಬಿಡುವ ಶಕ್ತಿ ಅದಕ್ಕೆ. ಬೇರೇನೂ ಸಿಗದಾಗ ಎದುರಿನ ವ್ಯಕ್ತಿಯನ್ನು ಸಾಯಿಸಲು ಇರುವ ಏಕೈಕ ಆಯುಧ. ಇವೆಲ್ಲಾ ಅನುಭವಿಸಿ...
 ಮೊದಲ ಕಾರು ಕೊಂಡ ಸಂಭ್ರಮ. ಇಬ್ಬರೂ ಆಫೀಸ್ ಗೆ ಹೋಗುತ್ತಿದ್ದರಿಂದ ರಜೆ ಸಿಕ್ಕಿದ ಕೂಡಲೇ ಎಲ್ಲಾದರೂ ಹೊರಡುವ ಅಭ್ಯಾಸ. ಹೊಸ ಕಾರ್ ಸುತ್ತುವ ಹುಚ್ಚು ಎರಡು ಜೊತೆಯಾಗಿತ್ತು. ಹಾಗೆ ಮೈಸೂರಿಗೆ ಹೋಗುವ ಹುಕಿ ಬಂದು ಹೋಗಿದ್ದೆವು. ಎಲ್ಲಾ ಕಡೆ ಸುತ್ತಾಡಿ ಅರಮನೆ ನೋಡಿ ಬಂದು  ಕಾರ್ ಸ್ಟಾರ್ಟ್ ಆಗಿ  ಇನ್ನೇನು ಹೋರಡಬೇಕು ಅಕ್ಕಾ ಎನ್ನುವ ಸ್ವರ. ಕಿಟಕಿಯಿಂದ ಹೊರಗೆ ನೋಡಿದರೆ ಕೈಯಲ್ಲಿ ಪುಟ್ಟ ಮರದ  ಆಭರಣದ ಪೆಟ್ಟಿಗೆ ಹಿಡಿದ ವ್ಯಕ್ತಿಯೊಬ್ಬ ಕಾಣಿಸಿದ. ಅದರ ಮೇಲಿನ ಕುಸುರಿ ಕೆಲಸ ಒಳಗೆ ಹಾಕಿದ ಕೆಂಪು ಮಕಮಲ್ ಬಟ್ಟೆ ಎಲ್ಲವೂ ಚೆಂದವಿದ್ದರೂ ತಗೊಂಡು ಏನು ಮಾಡೋದು ಅನ್ನಿಸಿ  ಬೇಡ ಎಂದೇ. ನಾವು ಹೋಗಿ ತೆಗೆದುಕೊಳ್ಳುವುದಕ್ಕೂ ಯಾರಾದರೂ ಬಂದು ತೆಗೆದುಕೊಳ್ಳಿ ಎನ್ನುವುದಕ್ಕೂ ತುಂಬಾ ವ್ಯತ್ಯಾಸ. ಅವನು ಹೋಗುವ ತರಹ ಕಾಣಿಸಲಿಲ್ಲ.  ತಗೊಳ್ಳಿ ಬಂಗಾರ ಹಾಕಿಡಲು ಚೆನ್ನಾಗಿರುತ್ತದೆ ಅವನ ದನಿಯಲ್ಲಿ ಸಣ್ಣಗೆ ಒತ್ತಾಯ ಕಾಣಿಸಿ ಕಸಿವಿಸಿ. ಬೇಡ ಅಂದೇನಲ್ಲ ದನಿ ಕೊಂಚ ಜೋರಾದ ಹಾಗೆ ಅನ್ನಿಸಿತು.  ಅದೇನೋ ಇನ್ನೂ ಬಂಗಾರದ ಮೋಹವಿರಲಿ ಅಲಂಕಾರ ಮಾಡಿಕೊಳ್ಳುವ ಆಸಕ್ತಿಯು ಇರಲಿಲ್ಲ. ಬಟ್ಟೆಗಳ ಬಗ್ಗೆ ವಿಪರೀತ ಮೋಹಕ್ಕೆ ಬಿದ್ದ ಹೊತ್ತು ಅದು. ಅದೆಷ್ಟು ಬಟ್ಟೆಗೆ ದುಡ್ಡು ಸುರಿತಿ ಅದರ ಬದಲು ಬಂಗಾರ ತಗೋಬಾರದ ಆಪತ್ಕಾಲಕ್ಕೆ ಆಗುತ್ತೆ ಮನೆಯ ಓನರ್ ಆದರೂ ಅಮ್ಮನಂತಿದ್ದ ಅವರು ಬೈಯ್ದು ಬೈದು ಸಾಕಾಗಿ ತಿಂಗಳಿಗೆ ಇಂತಿಷ್ಟು ಅಂತ ನಂ...

ಓದಿನ ಮೆಟ್ಟಿಲುಗಳು (ವಿಜಯಕರ್ನಾಟಕ)

 ಆಟದ ನಡುವೆ ತುಸು ಸುಧಾರಿಸಿಕೊಳ್ಳಲು ಕುಳಿತಾಗ ಕೈ ಗೆ ಬರುತ್ತಿದ್ದದ್ದು ಚಂದಮಾಮ. ಅದರಲ್ಲಿ ಬರುತ್ತಿದ್ದ ಬೇತಾಳನ ಕತೆಗಳನ್ನು ಮೊದಲು ಓದಿಯೇ ಆಮೇಲೆ ಉಳಿದ ಕಥೆಗಳತ್ತ ಕಣ್ಣು ಹರಿಯುತ್ತಿದ್ದದ್ದು. ವಿಕ್ರಮಾದಿತ್ಯ ಏನು ಉತ್ತರ ಕೊಟ್ಟಿದ್ದಿರಬಹುದು ಎಂದು ಯೋಚಿಸಿ ಕೆಲವೊಮ್ಮೆ ಚರ್ಚಿಸಿ(?) ಯಾರು ಸರಿಯಾದ ಉತ್ತರ ಕೊಡ್ತಾರೋ ಅವರಿಗೆ ಚಂದಮಾಮ ಮೊದಲು ಓದುವ ಅವಕಾಶ. ಹೀಗೆ ಪುಸ್ತಕವನ್ನು  ಮೊದಲು ಓದಬೇಕಾದರೆ  ತಲೆಗೆ ಕೆಲಸ ಕೊಡಬೇಕು ಎಂದು ಕಲಿಸಿದ್ದು ಚಂದಮಾಮ.  ಚಿಕ್ಕಂದಿನಿಂದಲೂ ರೈಲುಬೋಗಿಯ ಪಯಣದಲ್ಲಿ ಬಂದವರು ಹೋದವರು, ಬರುತ್ತಿರುವವರ  ನಡುವೆ ಜೊತೆಗೆ ನಿರಂತರವಾಗಿ ಅಷ್ಟೇ ಆಪ್ತವಾಗಿ ಇವತ್ತಿಗೂ ಉಳಿದಿದ್ದು, ಪೊರೆದದ್ದು, ಸಾಂಗತ್ಯ ನೀಡಿದ್ದು ಪುಸ್ತಕಗಳು. ನಂತರ ಬಂದ ಬಾಲಮಂಗಳ, ಚಂಪಕ, ಶಾಲೆಯ ಲೈಬ್ರರಿ ಎಂಬ ಪುಟ್ಟ ಪೆಟ್ಟಿಗೆಯಲ್ಲಿದ್ದ ಅಮರ ಚಿತ್ರಕಥಾ, ಭಾರತ ಭಾರತೀ ಪುಸ್ತಕಗಳು ಹಸಿವೆಯ ತಣಿಸಿದ ಆತ್ಮಬಂಧುಗಳು. ಇದೆ ಪ್ರಪಂಚದಲ್ಲಿ ಮುಳುಗಿಹೋದವರನ್ನು ಹಠಾತ್ತನೆ ಮತ್ತೊಂದು ಪ್ರಪಂಚಕ್ಕೆ ಎಳೆದೊಯ್ದಿದ್ದು ಅಜ್ಜನ ಅನಾರೋಗ್ಯ. ಅವರಿಗಾಗಿ ರಾಮಾಯಣ ಮಹಾಭಾರತ ಓದುವ ಕೆಲಸ ಅಂಟಿಕೊಂಡಿತ್ತು. ಆಟವನ್ನು ಬಿಟ್ಟು  ಅದರಲ್ಲೂ ನಮ್ಮಷ್ಟಕ್ಕೆ ನಾವೇ ಓದಿಕೊಳ್ಳುವ ಸುಖದಿಂದ ಜೋರಾಗಿ ಇನ್ನೊಬ್ಬರಿಗೆ ಓದಿ ಹೇಳುವ ಸಂಕಟ ಬೇರೆ. ಕತೆಗಳು ಉಪಕಥೆಗಳು, ವಾಲ್ಮೀಕಿ, ವ್ಯಾಸರ ಕತೆ ಹೇಳುವ ರೀತಿ ಆಳ...